ಆ್ಯಪ್ನಗರ

ಬೈಕ್‌ ಡಿಕ್ಕಿ : ಇಬ್ಬರ ಸಾವು

ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಬೀದರ್‌ ಮುಖ್ಯ ರಸ್ತೆಯ ಡೈಮಂಡ್‌ ಕಾಲೇಜಿನ ಕ್ರಾಸ್‌ ಸಮೀಪ ಗುರುವಾರ ಸಂಭವಿಸಿದೆ. ತಳವಾಡ(ಕೆ) ಗ್ರಾಮದ ಸಂಗಶೆಟ್ಟಿ ಸಿದ್ರಾಮಪ್ಪ(55) ಹಾಗೂ ಔರಾದ ತಾಲೂಕಿನ ಹೆಡಗಾಪೂರ್‌ ಗ್ರಾಮದ ನಿವಾಸಿ ಸಂಗಶೆಟ್ಟಿ ಶರಣಪ್ಪ(45) ಮೃತಪಟ್ಟವರು.

Vijaya Karnataka 17 Jul 2019, 7:22 pm
ಭಾಲ್ಕಿ:ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಬೀದರ್‌ ಮುಖ್ಯ ರಸ್ತೆಯ ಡೈಮಂಡ್‌ ಕಾಲೇಜಿನ ಕ್ರಾಸ್‌ ಸಮೀಪ ಗುರುವಾರ ಸಂಭವಿಸಿದೆ. ತಳವಾಡ(ಕೆ) ಗ್ರಾಮದ ಸಂಗಶೆಟ್ಟಿ ಸಿದ್ರಾಮಪ್ಪ(55) ಹಾಗೂ ಔರಾದ ತಾಲೂಕಿನ ಹೆಡಗಾಪೂರ್‌ ಗ್ರಾಮದ ನಿವಾಸಿ ಸಂಗಶೆಟ್ಟಿ ಶರಣಪ್ಪ(45) ಮೃತಪಟ್ಟ .
Vijaya Karnataka Web bike collision two killed
ಬೈಕ್‌ ಡಿಕ್ಕಿ : ಇಬ್ಬರ ಸಾವು


ತಳವಾಡ(ಕೆ) ಗ್ರಾಮದ ನಿವಾಸಿ ಸಂಗಶೆಟ್ಟಿ ಸಿದ್ರಾಮಪ್ಪ ಹಾಗೂ ಸಂಗಶೆಟ್ಟಿ ಶರಣಪ್ಪ ಎಂಬುವರು ದ್ವಿಚಕ್ರ ವಾಹನದ ಮೇಲೆ ಭಾಲ್ಕಿಯಿಂದ ಹಲಬರ್ಗಾ ಕಡೆಗೆ ತೆರಳುತ್ತಿದ್ದರು. ಬೀದರ್‌ ಮುಖ್ಯ ರಸ್ತೆಯಲ್ಲಿ ಎದುರಿನಿಂದ ಬಂದ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಬೀದರ್‌ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ