ಬಸವಕಲ್ಯಾಣ (ಬೀದರ್): ಕಾಂಗ್ರೆಸ್ ಪಕ್ಷ ಸರ್ವರ ಹಿತ ಬಯಸುವ ಪಕ್ಷ. ಮಾಜಿ ಸಿಎಂ ಧರ್ಮಸಿಂಗ್ ಹಾಗೂ ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ ಈ ಭಾಗಕ್ಕೆ 371ಜೆ ಕಲಂ ಜಾರಿಯಾಗಿದೆ. ಇದರಿಂದ ಅನೇಕ ಕುಟುಂಬಗಳಿಗೆ ಸಹಾಯವಾಗುವ ಜತೆಗೆ ಬದುಕು ಹಸನಗೊಂಡಿವೆ ಎಂದು ಮಾಜಿ ಸಚಿವ ಎಚ್ಕೆ ಪಾಟೀಲ್ ಹೇಳಿದರು. ತಾಲೂಕಿನ ಸಸ್ತಾಪುರ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ಅವರ ಪರ ಹಮ್ಮಿಕೊಂಡ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಧರಂ ಹಾಗೂ ಖರ್ಗೆ ಅವರ ಪ್ರಯತ್ನದಿಂದಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ ಕಲಂ ಜಾರಿಗೆ ತಂದಿದ್ದೇವೆ ಎಂದರು.
ಆದರೆ, ಬಿಜೆಪಿ ಸರಕಾರ ಚುನಾವಣೆಯ ಮುಂಚಿತವಾಗಿ ಸುಳ್ಳು ಭರವಸೆಗಳು ನೀಡಿ ಅಧಿಕಾರಕ್ಕೆ ಬರುತ್ತದೆ. ನಂತರ ಜನರಿಗೆ ನೀಡಿದ ಭರವಸೆಗಳು ಈಡೇರಿಸಲ್ಲ. ಜನರಿಗೆ ವಂಚಿಸುತ್ತದೆ ಎಂದು ಅವರು ದೂರಿದರು.
ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ಬಸವಕಲ್ಯಾಣ ನೆನಪಿಗೆ ಬರುತ್ತದೆ. ದಿ. ಶಾಸಕ ಬಿ.ನಾರಾಯಣರಾವ ಅವರು ಶಾಸಕರಾಗಿದ್ದ ವೇಳೆ ಅನುಭವ ಮಂಟಪಕ್ಕೆ ಅನುದಾನ ಬಿಡುಗಡೆ ಮಾಡಿ ಎಂದು ಅನೇಕ ಬಾರಿ ಬೇಡಿಕೊಂಡರು ಕೂಡ ಬಿಜೆಪಿಯವರು ತುಟಿಕ್ ಪಿಟಿಕ್ ಎನ್ನಲಿಲ್ಲ.
ಇದೀಗ ಚುನಾವಣೆ ಬಂದಾಗ ಅನುಭವ ಮಂಟಪ ನೆನಪಿಗೆ ಬಂದಿದೆ. ಆದರೆ ಇದುವರೆಗೂ ಅನುಭವ ಮಂಟಪಕ್ಕೆ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಭೂಮಿ ಸ್ವಾಧೀನ ಮಾಡಿಲ್ಲ. ಮತದಾನ ವೇಳೆ ಬಿಜೆಪಿಯವರು ಹಣ, ಹೆಂಡದ ಹೊಳೆಯನ್ನೇ ಹರಿಸಲಿದ್ದಾರೆ ಎಂದರು.
ಸಿದ್ಧುಗೆ ಭರ್ಜರಿ ಸ್ವಾಗತ
ಪಕ್ಷದ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ ಅವರ ಪರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷದ ಸ್ಥಳೀಯ ಕಾರ್ಯಕರ್ತರು ಸೋಮವಾರ ಅದ್ಧೂರಿಯಾಗಿ ಬರಮಾಡಿಕೊಂಡರು. ತಾಲೂಕಿನ ಸಸ್ತಾಪುರ ಗ್ರಾಮದಲ್ಲಿ ಆಯೋಜಿಸಿದ ವೇದಿಕೆ ಕಾರ್ಯಕ್ರಮದ ಮುಂಭಾಗದಿಂದ ವೇದಿಕೆಯವರೆಗೂ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.
"ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಅಂತ ಹೇಳುತಿದ್ದಾರೆ. ಹಾಗಾದರೆ ಅರ್ಧ ಡಜನ್ ಸಚಿವರು ಇಲ್ಲೆ ಬಂದು ಠಿಕಾಣಿ ಹೂಡಿದ್ದು ಯಾಕೆ ? ಕಳೆದ 20 ತಿಂಗಳಿಂದ ಬಸವಕಲ್ಯಾಣ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ಕೊಟ್ಟಿದ್ದಾರಾ?. ಕ್ಷೇತ್ರದಾದ್ಯಂತ ಕಾಂಗ್ರೆಸ್ ಅಲೆ ಎದ್ದಿದೆ. ದಿ. ಬಿ.ನಾರಾಯಣರಾವ್ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳು ನಮಗೆ ಶ್ರೀರಕ್ಷೆಯಾಗಿವೆ," ಎಂದು ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಹೇಳಿದರು.
"ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬಡವರ ಸುವರ್ಣಯುಗ ಸರಕಾರವಾಗಿತ್ತು.ಆದರೆ, ಬಿಜೆಪಿ ಸರ್ಕಾರ ದಲಿತ ವಿರೋಧಿ ಸರ್ಕಾರವಾಗಿದೆ. ದಲಿತ, ಹಿದುಳಿದ ವರ್ಗದ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ನೀಡಿರುವ ಕೊಡುಗೆ ಅಪಾರ," ಎಂದು ಮಾಜಿ ಸಚಿವ ಎಚ್ ಆಂಜನೇಯ ತಿಳಿಸಿದರು,
ನನ್ನ ಪತಿ ದಿ.ಬಿ ನಾರಾಯಣರಾವ್ ಅಧಿವರು ಶಾಸಕರಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಜತೆಗೆ ಬಡವರ, ದೀನ ದಲಿತರ ಪರವಾಗಿ ಕೆಲಸ ಮಾಡಿದ್ದಾರೆ. ಅವರ ನಿಧನದಿಂದಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನಿಮ್ಮ ಮನೆಯ ಮಗಳು ಎಂದು ತಿಳಿದು ನಿಮ್ಮ ಸ್ವಾಭಿಮಾನ ಹಾಗೂ ಅಶೀರ್ವಾದ ನನ್ನ ಮೇಲೆ ಇಟ್ಟು ಚುನಾವಣೆಯಲ್ಲಿಆಶೀರ್ವದಿಸಬೇಕು ಎಂದು ಮಾಲಾ ಬಿ ನಾರಾಯಣರಾವ್ ಮನವಿ ಮಾಡಿಕೊಂಡರು.
ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಸ್ವಾಗತಿಸಿದರು.ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಅರವಿಂದ ಅರಳಿ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ್, ಮಾಜಿ ಎಂಎಲ್ಸಿ ಅಲ್ಲಮ ಪ್ರಭು ಪಾಟೀಲ, ಮಾಜಿ ಶಾಸಕರಾದ ಬಿಆರ್ ಪಾಟೀಲ್,ತಿಪ್ಪಣಪ್ಪ ಕಮಕನೂರ, ಮುಖಂಡರಾದ ಬಸವರಾಜ ಬುಳ್ಳಾ, ನೀಲಕಂಠ ಮೂಲಗೆ, ಆನಂದ ದೇವಪ್ಪಾ, ಶಿವಶರಣ ಬಿರಾದಾರ, ಶಿವರಾಜ ನರಶೆಟ್ಟೆ, ಶಾಂತಪ್ಪಾ ಜಿ.ಪಾಟೀಲ್, ಅನುರಾಧಾ, ಬಸವರಾಜ ತಪಲಿ, ಗೌತಮ ಬಿ ನಾರಾಯಣರಾವ್, ಬಾಬು ಹೊನ್ನಾನಾಯಕ ಸೇರಿ ಅನೇಕರಿದ್ದರು.
ಆದರೆ, ಬಿಜೆಪಿ ಸರಕಾರ ಚುನಾವಣೆಯ ಮುಂಚಿತವಾಗಿ ಸುಳ್ಳು ಭರವಸೆಗಳು ನೀಡಿ ಅಧಿಕಾರಕ್ಕೆ ಬರುತ್ತದೆ. ನಂತರ ಜನರಿಗೆ ನೀಡಿದ ಭರವಸೆಗಳು ಈಡೇರಿಸಲ್ಲ. ಜನರಿಗೆ ವಂಚಿಸುತ್ತದೆ ಎಂದು ಅವರು ದೂರಿದರು.
ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ಬಸವಕಲ್ಯಾಣ ನೆನಪಿಗೆ ಬರುತ್ತದೆ. ದಿ. ಶಾಸಕ ಬಿ.ನಾರಾಯಣರಾವ ಅವರು ಶಾಸಕರಾಗಿದ್ದ ವೇಳೆ ಅನುಭವ ಮಂಟಪಕ್ಕೆ ಅನುದಾನ ಬಿಡುಗಡೆ ಮಾಡಿ ಎಂದು ಅನೇಕ ಬಾರಿ ಬೇಡಿಕೊಂಡರು ಕೂಡ ಬಿಜೆಪಿಯವರು ತುಟಿಕ್ ಪಿಟಿಕ್ ಎನ್ನಲಿಲ್ಲ.
ಇದೀಗ ಚುನಾವಣೆ ಬಂದಾಗ ಅನುಭವ ಮಂಟಪ ನೆನಪಿಗೆ ಬಂದಿದೆ. ಆದರೆ ಇದುವರೆಗೂ ಅನುಭವ ಮಂಟಪಕ್ಕೆ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಭೂಮಿ ಸ್ವಾಧೀನ ಮಾಡಿಲ್ಲ. ಮತದಾನ ವೇಳೆ ಬಿಜೆಪಿಯವರು ಹಣ, ಹೆಂಡದ ಹೊಳೆಯನ್ನೇ ಹರಿಸಲಿದ್ದಾರೆ ಎಂದರು.
ಸಿದ್ಧುಗೆ ಭರ್ಜರಿ ಸ್ವಾಗತ
ಪಕ್ಷದ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ ಅವರ ಪರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷದ ಸ್ಥಳೀಯ ಕಾರ್ಯಕರ್ತರು ಸೋಮವಾರ ಅದ್ಧೂರಿಯಾಗಿ ಬರಮಾಡಿಕೊಂಡರು. ತಾಲೂಕಿನ ಸಸ್ತಾಪುರ ಗ್ರಾಮದಲ್ಲಿ ಆಯೋಜಿಸಿದ ವೇದಿಕೆ ಕಾರ್ಯಕ್ರಮದ ಮುಂಭಾಗದಿಂದ ವೇದಿಕೆಯವರೆಗೂ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.
"ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಅಂತ ಹೇಳುತಿದ್ದಾರೆ. ಹಾಗಾದರೆ ಅರ್ಧ ಡಜನ್ ಸಚಿವರು ಇಲ್ಲೆ ಬಂದು ಠಿಕಾಣಿ ಹೂಡಿದ್ದು ಯಾಕೆ ? ಕಳೆದ 20 ತಿಂಗಳಿಂದ ಬಸವಕಲ್ಯಾಣ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ಕೊಟ್ಟಿದ್ದಾರಾ?. ಕ್ಷೇತ್ರದಾದ್ಯಂತ ಕಾಂಗ್ರೆಸ್ ಅಲೆ ಎದ್ದಿದೆ. ದಿ. ಬಿ.ನಾರಾಯಣರಾವ್ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳು ನಮಗೆ ಶ್ರೀರಕ್ಷೆಯಾಗಿವೆ," ಎಂದು ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಹೇಳಿದರು.
"ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬಡವರ ಸುವರ್ಣಯುಗ ಸರಕಾರವಾಗಿತ್ತು.ಆದರೆ, ಬಿಜೆಪಿ ಸರ್ಕಾರ ದಲಿತ ವಿರೋಧಿ ಸರ್ಕಾರವಾಗಿದೆ. ದಲಿತ, ಹಿದುಳಿದ ವರ್ಗದ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ನೀಡಿರುವ ಕೊಡುಗೆ ಅಪಾರ," ಎಂದು ಮಾಜಿ ಸಚಿವ ಎಚ್ ಆಂಜನೇಯ ತಿಳಿಸಿದರು,
ನನ್ನ ಪತಿ ದಿ.ಬಿ ನಾರಾಯಣರಾವ್ ಅಧಿವರು ಶಾಸಕರಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಜತೆಗೆ ಬಡವರ, ದೀನ ದಲಿತರ ಪರವಾಗಿ ಕೆಲಸ ಮಾಡಿದ್ದಾರೆ. ಅವರ ನಿಧನದಿಂದಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನಿಮ್ಮ ಮನೆಯ ಮಗಳು ಎಂದು ತಿಳಿದು ನಿಮ್ಮ ಸ್ವಾಭಿಮಾನ ಹಾಗೂ ಅಶೀರ್ವಾದ ನನ್ನ ಮೇಲೆ ಇಟ್ಟು ಚುನಾವಣೆಯಲ್ಲಿಆಶೀರ್ವದಿಸಬೇಕು ಎಂದು ಮಾಲಾ ಬಿ ನಾರಾಯಣರಾವ್ ಮನವಿ ಮಾಡಿಕೊಂಡರು.
ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಸ್ವಾಗತಿಸಿದರು.ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಅರವಿಂದ ಅರಳಿ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ್, ಮಾಜಿ ಎಂಎಲ್ಸಿ ಅಲ್ಲಮ ಪ್ರಭು ಪಾಟೀಲ, ಮಾಜಿ ಶಾಸಕರಾದ ಬಿಆರ್ ಪಾಟೀಲ್,ತಿಪ್ಪಣಪ್ಪ ಕಮಕನೂರ, ಮುಖಂಡರಾದ ಬಸವರಾಜ ಬುಳ್ಳಾ, ನೀಲಕಂಠ ಮೂಲಗೆ, ಆನಂದ ದೇವಪ್ಪಾ, ಶಿವಶರಣ ಬಿರಾದಾರ, ಶಿವರಾಜ ನರಶೆಟ್ಟೆ, ಶಾಂತಪ್ಪಾ ಜಿ.ಪಾಟೀಲ್, ಅನುರಾಧಾ, ಬಸವರಾಜ ತಪಲಿ, ಗೌತಮ ಬಿ ನಾರಾಯಣರಾವ್, ಬಾಬು ಹೊನ್ನಾನಾಯಕ ಸೇರಿ ಅನೇಕರಿದ್ದರು.