ಆ್ಯಪ್ನಗರ

ಹಾವಿನ ದ್ವೇಷ 12 ವರ್ಷ, ಸಿದ್ದರಾಮಯ್ಯನವರ ದ್ವೇಷ 40 ವರ್ಷ: ಅಶೋಕ್

ಮೇ. 23ರ ಲೋಕಸಭಾ ಫಲಿತಾಂಶದ ನಂತರ ಸಮ್ಮಿಶ್ರ ಸರಕಾರಕ್ಕೆ ಟೈಂ ಬಾಂಬ್ ಹಾಗೂ ಆಟಂ ಬಾಂಬ್ ಅನ್ನು ಸಿದ್ದರಾಮಯ್ಯನವರೇ ಫಿಕ್ಸ್ ಮಾಡಲಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

Vijaya Karnataka Web 9 May 2019, 5:59 pm
ಬೀದರ್: ಹಾವಿನ ದ್ವೇಷ 12 ವರ್ಷ. ಆದರೆ, ಮಾಜಿ ಸಿಎಂ ಸಿದ್ಧರಾಮಯ್ಯನವರ ದ್ವೇಷ 40 ವರ್ಷ ಎಂದು ಮಾಜಿ ಉಪ ಮುಖ್ಯಮಂತ್ರಿ, ಹಾಲಿ ಬಿಜೆಪಿ ಶಾಸಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
Vijaya Karnataka Web siddu.


ಬೀದರ್‌ನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಲೋಕಸಭಾ ಚುನಾವಣಾ ಅವಲೋಕನ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿರುವುದನ್ನು ಸಿದ್ದರಾಮಯ್ಯನವರಿಗೆ ತಡೆದುಕೊಳ್ಳಲಾಗುತ್ತಿಲ್ಲ ಎಂದ ಅಶೋಕ್, ಈ ಹಿಂದೆ ಸಿದ್ದರಾಮಯ್ಯನವರನ್ನು ಜೆಡಿಎಸ್‌ನಿಂದ ರಾತ್ರೋರಾತ್ರಿ ಬೀದಿಗೆ ತಳ್ಳಿ, ನಡುರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಆ ಕೋಪ ಮತ್ತು ಸೇಡನ್ನು ಮಂಡ್ಯದಲ್ಲಿ ಹಾಗೂ ರಾಜ್ಯ ಸಮ್ಮಿಶ್ರ ಸರಕಾರವನ್ನು ಕೆಡುವ ಮೂಲಕ ತೀರಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

ಮೇ. 23ರ ಲೋಕಸಭಾ ಫಲಿತಾಂಶದ ನಂತರ ಸಮ್ಮಿಶ್ರ ಸರಕಾರಕ್ಕೆ ಟೈಂ ಬಾಂಬ್ ಹಾಗೂ ಆಟಂ ಬಾಂಬ್ ಅನ್ನು ಸಿದ್ದರಾಮಯ್ಯನವರೇ ಫಿಕ್ಸ್ ಮಾಡಲಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಸಿದ್ದರಾಮಯ್ಯನವರು ಸಿಎಂ ಆಗಲಿ ಎಂದು ಯಾರೂ ಹೇಳಲಿಲ್ಲ. ಇದೀಗ ಚುನಾವಣೆಯ ಬಳಿಕ ಸಿದ್ದರಾಮಯ್ಯನವರು 'ಕೀ' ನೀಡಿದ್ದಕ್ಕೆ ಬೊಂಬೆಗಳೆಲ್ಲಾ ಸಿದ್ದರಾಮಯ್ಯನವರು ಹೇಳಿದಂತೆ ಹೇಳುತ್ತಿವೆ ಎಂದು ಅಶೋಕ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ