ಆ್ಯಪ್ನಗರ

ಬಾಲ್ಯವಿವಾಹಕ್ಕೆ ಬಿತ್ತು ಬ್ರೇಕ್‌ !

ಮದುವೆಯ ಆಮಂತ್ರಣ ಪತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದನ್ನು ನೋಡಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ -1098 ಉಚಿತ ಕರೆ ಮಾಡಿ ಮಾಹಿತಿ ನೀಡಿದ್ದರಿಂದ, ಬಾಲ್ಯವಿವಾಹ ತಡೆಯಲು ನೆರವಾಯಿತು.

Vijaya Karnataka 12 Jun 2019, 9:38 pm
ಬೀದರ್‌ :ಮದುವೆಯ ಆಮಂತ್ರಣ ಪತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದನ್ನು ನೋಡಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ -1098 ಉಚಿತ ಕರೆ ಮಾಡಿ ಮಾಹಿತಿ ನೀಡಿದ್ದರಿಂದ, ಬಾಲ್ಯವಿವಾಹ ತಡೆಯಲು ನೆರವಾಯಿತು.
Vijaya Karnataka Web break up for childhood marriage
ಬಾಲ್ಯವಿವಾಹಕ್ಕೆ ಬಿತ್ತು ಬ್ರೇಕ್‌ !


ತಾಲೂಕಿನ ಸಂಗೋಳಗಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಬಾಲ್ಯವಿವಾಹ ನಡೆಯು ಕುರಿತು, ಸಾರ್ವಜನಿಕರು ಮಕ್ಕಳ ಸಹಾಯ ವಾಣಿ ಮುಖಾಂತರ ಡಾನ್‌ಬಾಸ್ಕೋ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ತಿಳಿಸಲಾಗಿದೆ. ಹೀಗಾಗಿ ಶನಿವಾರದಂದು ಆಣದೂರು ಸಿಆರ್‌ಪಿ ಧೂಳಪ್ಪ, ಬಗ್ದಲ್‌ ಪೊಲೀಸ್‌ ಠಾಣೆಯ ಪಿಎಸ್‌ಐ ನಾಗರಾಜ್‌ ಟಿ.ಜೆ., ಜಿಲ್ಲಾ ಮಕ್ಕಳ ರಕ್ಷ ಣಾ ಘಟಕದ ರಕ್ಷ ಣಾಧಿಕಾರಿ ಗೌರಿಶಂಕರ್‌ ಪರತಾಪುರೆ, ಜಿಲ್ಲಾ ಮಕ್ಕಳ ಸಹಾಯವಾಣಿಯ ಸಂಯೋಜಕ ನೇಲ್ಸನ್‌, ತಂಡದ ಪದಾಧಿಕಾರಿಗಳಾದ ಸಾಲೋಮನ್‌, ಮೋಹನಂದ, ಜಾನ್ಸನ್‌ ಕರಂಜಿಕರ್‌, ಅವಿನಾಶ್‌ ಬೇವಿನದೊಡ್ಡಿ ಸಂಗೋಳಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು.

ನಂತರ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ರು, ಉಪಾಧ್ಯಕ್ಷ ರು, ಸದಸ್ಯರು ಹಾಗೂ ಗ್ರಾಮದ ಗಣ್ಯರು ಮತ್ತು ಪ್ರೌಢ ಶಾಲೆಯ ಶಿಕ್ಷ ಕರು, ಸಂಗೋಳಗಿ ಗ್ರಾಮದಲ್ಲಿ ಬಾಲ್ಯವಿವಾಹ ನಡೆಯಲಿರುವ ಮಗುವಿನ ಮನೆಗೆ ಭೇಟಿ ನೀಡಿ, ಪಾಲಕರಿಗೆ ಅರಿವು ಮೂಡಿಸಲಾಯಿತು.

ಬಾಲ್ಯವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯ ವಿವಾಹ ಮಾಡಿದವರಿಗೆ 2 ವರ್ಷ ಜೈಲು ಮತ್ತು 1 ಲಕ್ಷ .ರೂ. ದಂಡ ಅಥವಾ ಎರಡನ್ನು ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು, ಪಾಲಕರಿಗೆ ಬಾಲ್ಯವಿವಾಹದ ದುಷ್ಪÜರಿಣಾಮ ಹಾಗೂ ಶಿಕ್ಷೆಯ ಕುರಿತು ಅರಿವು ಮೂಡಿಸಿದರು. ನಂತರ ಬಾಲ್ಯವಿವಾಹ ಮಾಡಲು ಮುಂದಾದ ಪಾಲಕರಿಂದ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಳ್ಳಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ