ಆ್ಯಪ್ನಗರ

ಬಿಎಸ್‌ಎಸ್‌ಕೆ ಆರಂಭಿಸಲು 50 ಕೋಟಿ ನೀಡಲು ಆಗ್ರಹ

ಬಿಎಸ್‌ಎಸ್‌ಕೆ ಕಾರಖಾನೆಗೆ ಕೂಡಲೇ 50 ಕೋಟಿ ರೂ. ಹಣ ಬಿಡುಗಡೆ ಮಾಡಿ, ಕಾರಖಾನೆಯನ್ನು ಕೂಡಲೇ ಕಾರಾರ‍ಯರಂಭಿಸಬೇಕು. ಕಾರಖಾನೆಗೆ ದಕ್ಷ ಅಧಿಕಾರಿ ನೇಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದಿಂದ ಬೀದರ್‌ನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

Vijaya Karnataka 6 Sep 2018, 4:10 pm
ಬೀದರ್‌ : ಬಿಎಸ್‌ಎಸ್‌ಕೆ ಕಾರಖಾನೆಗೆ ಕೂಡಲೇ 50 ಕೋಟಿ ರೂ. ಹಣ ಬಿಡುಗಡೆ ಮಾಡಿ, ಕಾರಖಾನೆಯನ್ನು ಕೂಡಲೇ ಕಾರಾರ‍ಯರಂಭಿಸಬೇಕು. ಕಾರಖಾನೆಗೆ ದಕ್ಷ ಅಧಿಕಾರಿ ನೇಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದಿಂದ ಬೀದರ್‌ನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
Vijaya Karnataka Web bssk demand rs 50 crore to start
ಬಿಎಸ್‌ಎಸ್‌ಕೆ ಆರಂಭಿಸಲು 50 ಕೋಟಿ ನೀಡಲು ಆಗ್ರಹ


ಕಳೆದ ವರ್ಷ ಕಬ್ಬು ಪೂರೈಸಿದ ರೈತರಿಗೆ ತಕ್ಷಣ ಹಣ ಪಾವತಿಸಬೇಕು. ಪಾರ್ಟ್‌ ಪೇಮೆಂಟ್‌ಅನ್ನು ನಿಲ್ಲಿಸಿ ಪೂರ್ತಿ ಹಣ ಕೊಡಿಸಬೇಕು. ಹೆಸರು ಖರೀದಿ ನೋಂದಣಿಗೆ ರೈತರಿಗೆ ಸೆ. 30ರ ವರೆಗೆ ಸಮಯ ನೀಡಬೇಕು. ಉದ್ದು ಖರೀದಿ ಕೇಂದ್ರ ಸಹ ತಕ್ಷಣ ಆದೇಶ ಜಾರಿ ಮಾಡಬೇಕು. ಜಿಲ್ಲೆ ಹೆಸರು, ಉದ್ದು ಖರೀದಿಸಲು ಎಲ್ಲ ಪಿಕೆಪಿಎಸ್‌ಗಳಲ್ಲಿ ಅಂದರೆ 171 ಖರೀದಿ ಕೇಂದ್ರ ಮಾಡಲು ಆದೇಶ ಹೊರಡಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಲಾಯಿತು.

ಕಳೆದ ಸಾಲಿನಲ್ಲಿ ರೈತರಿಂದ ಖರೀದಿಸಿದ ಹೆಸರು, ಉದ್ದು, ತೊಗರಿ, ಕಡಲೆ ಮಾರಿದ ಕೆಲವೊಂದು ರೈತರಿಗೆ ಹಣ ಬಾರದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹ ರೈತರಿಗೆ ಚೆಕ್‌ ಮೂಲಕ ಹಣ ಕೊಡಬೇಕು. ಜಿಲ್ಲೆಯಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕಬ್ಬಿನ ಪ್ರತಿ ಟನ್‌ಗೆ 1 ಕೆಜಿ ಸಕ್ಕರೆ ತಕ್ಷಣ ನೀಡಬೇಕು. ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಅದರಲ್ಲಿನ ಷರತ್ತುಗಳನ್ನು ತೆಗೆದು ಹಾಕಬೇಕು ಎಂದು ಕೋರಿದರು.

ಸಿದ್ದರಾಮಯ್ಯನವರ ಹಿಂದಿನ ಸರಕಾರದಲ್ಲಿ ಕೆಲವರಿಗೆ ತಾಂತ್ರಿಕ ಸಾಲ ಮನ್ನಾ ಆಗಿಲ್ಲ. ಅವರ ಸಾಲವನ್ನೂ ಮನ್ನಾ ಮಾಡಬೇಕು. ಸಾಲ ಮನ್ನಾ ಆಗಿರುವ ರೈರಿಗೆ ಹೊಸ ಸಾಲವನ್ನು ತಕ್ಷಣ ಕೊಡಬೇಕು. ಈ ಎಲ್ಲ ಬೇಡಿಕೆಗಳನ್ನು ಮುಂದಿನ ಏಳು ದಿನಗಳ ಒಳಗಾಗಿ ಬಗೆ ಹರಿಸಬೇಕು. ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಹೋರಾಟ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ರೈತ ಸಂಘದ ಪ್ರಮುಖರಾದ ಖಾಸಿಂ ಅಲಿ, ಶಿವಾನಂದ ಹುಡಗೆ, ಕೋಂಡಿಬಾ ಪಾಂಡ್ರೆ, ಶೇಷರಾವ ಕಣಐ, ಶೋಭಾದೇವಿ ಕಾರಭಾರಿ, ಶ್ರೀಮಂತ ಬಿರಾದಾರ್‌, ವಿಠಲರೆಡ್ಡಿ ಆಣದೂರ, ಚಂದ್ರಶೇಖರ ಜಮಖಂಡಿ, ಸತಿಶ್‌ ನನ್ನೂರೆ, ಸಿದ್ರಾಮಪ್ಪ ಆಣದೂರೆ, ಶರಣಪ್ಪ ಕಂದಗೂಳ, ಪ್ರವೀಣ ಕುಲಕರ್ಣಿ, ಅನಿಲ್‌ ಬಾವಗೆ, ಸುಭಾಷ್‌ ರಗಟೆ, ಬಾಬುರಾವ್‌ ಜೋಳದಾಪಕೆ, ವಿರುಪಣ್ಣ ದುಬಲಗುಂಡಿ, ಸುಭಾಷ್‌ ಇಟಗಿ, ಸಿದ್ರಾಮಪ್ಪ ಬಾಲಕುಂದೆ, ಶಾಮಣ್ಣ ಬಾವಗೆ, ಶಾಂತಮ್ಮ ಮೂಲಗೆ, ಶಂಕರೆಪ್ಪ ಪಾರಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ