ಆ್ಯಪ್ನಗರ

ಬಸ್‌ ನಿಲ್ದಾಣ ತ್ಯಾಜ್ಯ ತೆರವು

ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದ ಹೈಟೆಕ್‌ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯ ಟ್ಯಾಂಕ್‌ ತುಂಬಿ ಆವರಣದಲ್ಲಿ ಹರಡಿತ್ತು. ಶೇಖರಣೆಯಾದ ಕೊಳೆಯನ್ನು ಇತ್ತೀಚೆಗೆ ತೆರವುಗೊಳಿಸಿ ನಿಲ್ದಾಣ ಸ್ವಚ್ಛಗೊಳಿಸಲಾಗಿದೆ.

Vijaya Karnataka 14 Jul 2018, 3:54 pm
ಚಿಟಗುಪ್ಪ : ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದ ಹೈಟೆಕ್‌ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯ ಟ್ಯಾಂಕ್‌ ತುಂಬಿ ಆವರಣದಲ್ಲಿ ಹರಡಿತ್ತು. ಶೇಖರಣೆಯಾದ ಕೊಳೆಯನ್ನು ಇತ್ತೀಚೆಗೆ ತೆರವುಗೊಳಿಸಿ ನಿಲ್ದಾಣ ಸ್ವಚ್ಛಗೊಳಿಸಲಾಗಿದೆ.
Vijaya Karnataka Web bus station waste clear
ಬಸ್‌ ನಿಲ್ದಾಣ ತ್ಯಾಜ್ಯ ತೆರವು


ಶೌಚಾಲಯ ಕೊಳಚೆ ನಿಲ್ದಾಣದಲ್ಲಿ ಸಂಗ್ರಹವಾಗಿ ದುರ್ವಾಸನೆ ಹರಡಿರುವ ಕುರಿತು ವಿಜಯ ಕರ್ನಾಟಪ ಪತ್ರಿಕೆ ಜು.4ರಂದು 'ಹೈಟೆಕ್‌ ಬಸ್‌ ನಿಲ್ದಾಣ ಈಗ ಶೌಚಾಲಯ' ಎಂಬ ತಲೆಬರಹದೊಂದಿಗೆ ವಿಶೇಷ ವರದಿ ಪ್ರಕಟಿಸಿತ್ತು.

ವರದಿಗೆ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು, ಶೌಚಾಲಯದ ಟ್ಯಾಂಕ್‌ ತುಂಬಿರುವುದನ್ನು ತೆರವುಗೊಳಿಸಿ ಆವರಣದಲ್ಲಿ ಸ್ವಚ್ಛಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಖಡಕ್‌ ಸೂಚನೆ ನೀಡಿದ್ದರು. ಕಳೆದ ಎರಡು ದಿನಗಳ ಹಿಂದೆಯೇ ಗುತ್ತಿಗೆದಾರ ಟ್ಯಾಂಕ್‌ ಖಾಲಿ ಮಾಡಿ, ಆವರಣದಲ್ಲಿ ಶೇಖರಣೆಯಾಗಿದ್ದ ಕೊಳಚೆ ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ. ಮಳೆಗಾಲವಾಗಿದ್ದರಿಂದ ಇನ್ನು ಅಲ್ಪ ಪ್ರಮಾಣದಲ್ಲಿ ತ್ಯಾಜ್ಯವಿದ್ದು ಆದಷ್ಟು ಬೇಗ ಸಂಪೂರ್ಣವಾಗಿ ಸ್ವಚ್ಛತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ