ಆ್ಯಪ್ನಗರ

71 ಲಕ್ಷ ರೂ.ಹಣದೊಂದಿಗೆ ಕಾರ್‌ ಸಹಿತ ಚಾಲಕ ಪರಾರಿ

ವ್ಯಾಪಾರಿಯೊಬ್ಬ ಕಾರ್‌ನಿಂದ ಕೆಳಗಿಳಿದಾಗ 71 ಲಕ್ಷ ರೂ. ಹಣದ ಬ್ಯಾಗ್‌ನೊಂದಿಗೆ ಚಾಲಕ ಕಾರ್‌ನೊಂದಿಗೆ ಪರಾರಿಯಾದ ಘಟನೆ ಹುಮನಾಬಾದ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದಲ್ಲಿ ಜರುಗಿದೆ.

Vijaya Karnataka 12 Jun 2018, 4:49 pm
ಚಿಟಗುಪ್ಪ : ವ್ಯಾಪಾರಿಯೊಬ್ಬ ಕಾರ್‌ನಿಂದ ಕೆಳಗಿಳಿದಾಗ 71 ಲಕ್ಷ ರೂ. ಹಣದ ಬ್ಯಾಗ್‌ನೊಂದಿಗೆ ಚಾಲಕ ಕಾರ್‌ನೊಂದಿಗೆ ಪರಾರಿಯಾದ ಘಟನೆ ಹುಮನಾಬಾದ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದಲ್ಲಿ ಜರುಗಿದೆ.
Vijaya Karnataka Web car driver escapes car with rs 71 lakh
71 ಲಕ್ಷ ರೂ.ಹಣದೊಂದಿಗೆ ಕಾರ್‌ ಸಹಿತ ಚಾಲಕ ಪರಾರಿ


ಬೀದರ್‌ ಜಿಲ್ಲೆಯಲ್ಲಿ ಸೀಡ್ಸ್‌ ಕಂಪನಿ ನಡೆಸುತ್ತಿರುವ ಬಳ್ಳಾರಿಯ ವ್ಯಾಪಾರಿ ರಾಜೇಶ್‌ ಸಿದ್ದಪ್ಪ ಬೆಲ್ಲಕ್ಕಿ ಎಂಬುವವರು, ಸೋಯಾ ಬೀಜಗಳ ಮಾರಾಟದಿಂದ ಬಂದ ಹಣದ ಬ್ಯಾಗ್‌ನೊಂದಿಗೆ ಕಾರಿನಲ್ಲಿ ಮನ್ನಾಎಖೇಳ್ಳಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬರುವಷ್ಟರಲ್ಲಿ ಚಾಲಕ ಮಾರುತಿ ಕಾರಿನೊಂದಿಗೆ ಪರಾರಿಯಾದ ಘಟನೆ ಭಾನುವಾರ ಜರುಗಿದೆ. ಈ ಕುರಿತು ಸೋಮವಾರ ಮನ್ನಾಎಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ ನಗರದ ಬಸವೇಶ್ವರ ನಿವಾಸಿಯಾದ ವ್ಯಾಪಾರಿ ರಾಜೇಶ್‌ ಬೆಲ್ಲಕ್ಕಿ ಅವರಿಗೆ ಸೇರಿದ ಬೀದರ ಬಳಿಯ ಕೊಳಾರ ಕೆ.ನಲ್ಲಿ ಸೋಯಾ ಸೀಡ್ಸ್‌ ಕಂಪನಿಯಲ್ಲಿನ ಬೀಜಗಳನ್ನು ರೈತರಿಗೆ ಮಾರಾಟ ಮಾಡಿದ್ದರು. ಇದರಿಂದ ಬಂದ 71 ಲಕ್ಷ ರೂ. ಹಣದ ಬ್ಯಾಗ್‌ ಸಹಿತ ಕಾರಿನಲ್ಲಿ ಭಾನುವಾರ ಮಧ್ಯಾಹ್ನ ಮನ್ನಾಎಖೇಳ್ಳಿ ಗ್ರಾಮಕ್ಕೆ ಬಂದಿದ್ದರು. ಅಲ್ಲಿನ ಡಿಸಿಸಿ ಬ್ಯಾಂಕ್‌ ಹಿಂದೆಯಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವುದಾಗಿ ಹೇಳಿ, ಕಾರ್‌ನಿಂದ ಕೆಳಗೆ ಇಳಿದ ವ್ಯಾಪಾರಿ ನಿಮಿಷದೊಳಗೆ ಹಿಂತಿರುಗಿ ಬರುವಷ್ಟರಲ್ಲಿ ಕಾರ್‌ ಮಾಯವಾಗಿತ್ತು.

ಚಾಲಕ ಮಾರುತಿಗೆ ಕಾಲ್‌ ಮಾಡಿದರೂ ಸಿಗದೆ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು. ಸೋಮವಾರ ಮನ್ನಾಎಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎ 34 ಎನ್‌ 5427 ನಂಬರಿನ ಇನೋವಾ ಕಾರ್‌ ಮತ್ತು ಕಾರ್‌ನಲ್ಲಿದ್ದ 71 ಲಕ್ಷ ರೂ.ಗಳೊಂದಿಗೆ ಚಾಲಕ ಮಾರುತಿ ಪರಾರಿಯಾಗಿರುವುದಾಗಿ ರಾಜೇಶ್‌ ದೂರಿನಲ್ಲಿ ತಿಳಿಸಿದ್ದಾರೆ.

'' ಈ ಕುರಿತು ಸದ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಆರಂಭಿಸಲಾಗಿದೆ '' ಎಂದು ಚಿಟಗುಪ್ಪ ಸಿಪಿಐ ಚಿದಂಬರ ಮಡಿವಾಳ ವಿಕಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ