ಆ್ಯಪ್ನಗರ

ಬೀದರ್: ತಬ್ಲಿಘಿ ನಂತರ ಧರ್ಮ ಪ್ರಚಾರದಲ್ಲಿ ತೊಡಗಿದ್ದ 8 ಕಿರ್ಗಿಸ್ತಾನಿಗಳ ವಿರುದ್ಧ ಪ್ರಕರಣ ದಾಖಲು

ವೀಸಾ ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿರುವುದರಿಂದ 8 ಜನ ಕಿರ್ಗಿಸ್ತಾನಿಗಳ ಪೈಕಿ ನಾಲ್ವರ ವಿರುದ್ಧ ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಹಾಗೂ ನಾಲ್ವರ ವಿರುದ್ಧ ಇಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Vijaya Karnataka Web 6 Apr 2020, 9:03 pm
ಬೀದರ್‌: ಟೂರಿಸ್ಟ್ ವೀಸಾ ಪಡೆದು ಕಿರ್ಗಿಸ್ತಾನದಿಂದ ಬೀದರ್‌ಗೆ ಬಂದಿರುವ 8 ಮಂದಿ ತಬ್ಲೀಘಿಗಳು, ಟೂರಿಸ್ಟ್ ವೀಸಾದ ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Vijaya Karnataka Web ತಬ್ಲಿಘಿ ಜಮಾತ್
ತಬ್ಲಿಘಿ ಜಮಾತ್


ಕೊರೊನಾ ವೈರಸ್‌ನ ಶಂಕೆಯಿಂದಾಗಿ ಇವರನ್ನು ನಗರದ ರಟಕಲಪುರಾದ ಮರ್ಕಜ್‌ನಲ್ಲಿನ ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಇವರ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ನಾಗೇಶ್ ಡಿ.ಎಲ್. ವಿಜಯ ಕರ್ನಾಟಕಕ್ಕೆ ಖಚಿತಪಡಿಸಿದ್ದಾರೆ.

ಹೊಸದಿಲ್ಲಿಯ ನಿಜಾಮುದ್ದಿನ್ ಮರ್ಕಜ್‌ನಲ್ಲಿ ನಡೆದ ತಬ್ಲಿಘಿ ಸಭೆಯಲ್ಲೂ ಪಾಲ್ಗೊಂಡಿದ್ದ ಇವರು, ಬೀದರ್‌ನ ವಿವಿಧ ಭಾಗಗಳಲ್ಲಿ ಧರ್ಮ ಪ್ರಚಾರದಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.

ವೀಸಾ ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿರುವುದರಿಂದ 8 ಜನ ಕಿರ್ಗಿಸ್ತಾನಿಗಳ ಪೈಕಿ ನಾಲ್ವರ ವಿರುದ್ಧ ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಹಾಗೂ ನಾಲ್ವರ ವಿರುದ್ಧ ಇಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ