ಭೀಮರಾವ್ ಬುರಾನಪುರ
ಬೀದರ್: ನೂತನ ಸಚಿವರ ಮೇಲೆ ನೂರಾರು ನಿರೀಕ್ಷೆಗಳು. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಬೀದರ್ ಜಿಲ್ಲೆಯ ಸಂಸದರಿಗೆ ಪ್ರಾತಿನಿಧ್ಯ ದೊರಕಿದ್ದು, ಜಿಲ್ಲೆಯ ಅಭಿವೃದ್ಧಿಯ ಕುರಿತು ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಕೇಂದ್ರ ಸರಕಾರದಿಂದ ಬೀದರ್ ಜಿಲ್ಲೆಯಲ್ಲಿ ಆಗಬೇಕಿರುವ ಕೆಲಸಗಳಿಗೆ ಈಗಲಾದರೂ ವೇಗ ದೊರಕೀತೆ ಎನ್ನುವ ಚರ್ಚೆಗಳು ಶುರುವಾಗಿವೆ. ತನ್ನ ಕೆಲಸಗಳಿಂದಲೇ ಕೇಂದ್ರದ ವರಿಷ್ಠರ ಗಮನ ಸೆಳೆದು, ಸಚಿವರೂ ಆಗಿರುವ ಭಗವಂತ ಖೂಬಾ ಅವರಿಗೆ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ, ರಸಗೊಬ್ಬರ ರಾಜ್ಯ ಖಾತೆ ಸಚಿವ ಸ್ಥಾನ ಲಭಿಸಿದೆ. ಇದೀಗ ಖೂಬಾ ಅವರು ಸಂಸತ್ತಿನಲ್ಲಿ ಮತ್ತಷ್ಟು ಪ್ರಬಲ ಸ್ಥಾನ ಗಳಿಸಿದ್ದಾರೆ. ವರಿಷ್ಠರೊಂದಿಗೆ, ಕೇಂದ್ರ ಸಂಪುಟದ ಸಹೊದ್ಯೋಗಿಗಳೊಂದಿಗೆ ಖೂಬಾ ಉತ್ತಮ ಸಂಬಂಧ ಹೊಂದಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಂಸದರಾಗಿದ್ದುಕೊಂಡೇ ಭಗವಂತ ಖೂಬಾ ಅವರು ಜಿಲ್ಲೆಗೆ ಅನೇಕ ರೈಲುಗಳನ್ನು ತಂದಿದ್ದಾರೆ. ಹೆದ್ದಾರಿಗಳನ್ನು ಮಂಜೂರು ಮಾಡಿಸಿದ್ದಾರೆ. ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇದೀಗ ಅವರ ಕೆಲಸಕ್ಕೆ ಮೆಚ್ಚಿ ಕೇಂದ್ರದ ವರಿಷ್ಠರು ಸಚಿವ ಸ್ಥಾನವನ್ನೇ ನೀಡಿದ್ದಾರೆ. ಹೀಗಾಗಿ, ರೈಲ್ವೆ, ಹೆದ್ದಾರಿ, ಮೂಲ ಸೌಕರ್ಯ, ಕೇಂದ್ರದ ಯೋಜನೆಗಳ ಅನುಷ್ಠಾನ ಸೇರಿದಂತೆ ನಾನಾ ಅಭಿವೃದ್ಧಿಯ ಕೆಲಸಗಳು ಇನ್ನಷ್ಟು ಪರಿಣಾಮಕಾರಿಯಾಗುವ ನಿರೀಕ್ಷೆಯಿದೆ.
ಬೀದರ್- ಕಲಬುರಗಿ ಮಾರ್ಗವಾಗಿ ಬೆಂಗಳೂರಿಗೆ ರೈಲು ಓಡಾಟ, ಪಿಟ್ಲೈನ್ ಬಳಕೆ, ಬೀದರ್- ಬೆಂಗಳೂರು ನಡುವಣ ಇನ್ನಷ್ಟು ವಿಮಾನಗಳ ಹಾರಾಟ, ಎಫ್.ಎಂ. ಕೇಂದ್ರ ಸ್ಥಾಪನೆ, ಜಿಲ್ಲೆಯ ಯುವಕರ ಕೈಗೆ ಕೆಲಸ ನೀಡುವ ಹೊಸ ಕೈಗಾರಿಕೆಗಳ ಸ್ಥಾಪನೆ, ಹೊಸ ಹೆದ್ದಾರಿಗಳ ಮಂಜೂರಾತಿ, ಈ ಹಿಂದೆ ಜಿಲ್ಲೆಗೆ ಘೋಷಣೆಯಾಗಿದ್ದ ಸಿಪೆಟ್ ಕೇಂದ್ರದ ಸ್ಥಾಪನೆ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸೇರಿದಂತೆ ಇನ್ನಿತರ ಹೊಸ ಯೋಜನೆಗಳನ್ನು ಸಚಿವರು ಜಿಲ್ಲೆಗೆ ತರಲು ಯತ್ನಿಸಬೇಕಿದೆ.
ಔರಾದ್ನವರೇ ಕೇಂದ್ರ, ರಾಜ್ಯ ಸಚಿವರು
ಕೇಂದ್ರ ಸಚಿವ ಸಂಪುಟದಲ್ಲಿ ಭಗವಂತ ಖೂಬಾ ಸಚಿವರಾದರೆ, ರಾಜ್ಯ ಸರಕಾರದಲ್ಲಿ ಪ್ರಭು ಚವ್ಹಾಣ್ ಪಶು ಸಂಗೋಪನಾ ಸಚಿವರಾಗಿದ್ದಾರೆ. ಈ ಇಬ್ಬರೂ ಔರಾದ್ ತಾಲೂಕಿನವರಾಗಿರುವುದು ವಿಶೇಷವಾಗಿದೆ. ಕೇಂದ್ರ, ರಾಜ್ಯದಲ್ಲಿ ಇದೀಗ ಬಿಜೆಪಿ ಸರಕಾರಗಳೇ ಇದ್ದು, ಇಬ್ಬರೂ ಜೋಡೆತ್ತಿನಂತೆ ಜಿಲ್ಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಆಗಬೇಕಿರುವ ಯಾವುದೇ ಕೆಲಸ ಇದೀಗ ಸರಳ, ಸುಲಭವಾಗಿ ಮಾಡಬಹುದಾಗಿದೆ.
ಇದೀಗ ಇಬ್ಬರೂ ಸೇರಿ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಬೇಕಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದೀಗ ನಿರ್ಮಾಣವಾಗಿದ್ದು, ಸಚಿವರುಗಳು ಈ ಸದಾವಕಾಶವನ್ನು ಬಳಸಿಕೊಂಡು, ಅಭಿವೃದ್ಧಿಗೆ ವೇಗ ನೀಡಬೇಕಿದೆ. ಕೇಂದ್ರ, ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ, ಹೊಸ ಯೋಜನೆಗಳನ್ನು ತಂದು, ಸಚಿವರಾಗಿ ದಾಖಲೆ ನಿರ್ಮಿಸಿದಂತೆ ಕೆಲಸ ಮಾಡಿಯೂ ಭಗವಂತ ಖೂಬಾ ಅವರು ಗಮನ ಸೆಳೆಯುವರೇ ನೋಡಬೇಕಿದೆ.
'ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಈ ಜವಾಬ್ದಾರಿಯನ್ನು ನಾನು ನಿಷ್ಠೆ, ಪ್ರಾಮಾಣಿಕತೆಯಿಂದ ನಿರ್ವಹಿಸಿ ಎಲ್ಲರ ವಿಶ್ವಾಸ ಉಳಿಸಿಕೊಳ್ಳುವೆ. ಬೀದರ್ ಲೋಕಸಭಾ ಕ್ಷೇತ್ರದ ಜತೆಗೆ, ದೇಶ ಸೇವೆ, ಸಮಸ್ತ ಭಾರತೀಯರ ಒಳಿತಿಗಾಗಿ, ಅಭಿವೃದ್ಧಿಗಾಗಿ ನನ್ನ ಸೇವೆ ಮೀಸಲಿರಲಿದೆ' ಎಂದು ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ, ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
'ಬೀದರ್ ಅಭಿವೃದ್ಧಿಯ ದೃಷ್ಟಿಯಿಂದ ನಾನು ಹಾಗೂ ಭಗವಂತ ಖೂಬಾ ಅವರು ಸದಾ ಜನತೆಯ ಜೊತೆಗೆ ಇರುತ್ತೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬೇಕಾದ ಅಭಿವೃದ್ಧಿಗಳನ್ನು ಮಾಡಲು ಸದಾ ಸಿದ್ಧರಿದ್ದೇವೆ. ಭಗವಂತ ಖೂಬಾ ಅವರು ಔರಾದ್ನವರಾಗಿರುವುದರಿಂದ ವೈಯಕ್ತಿಕವಾಗಿ ನನಗೆ ಹೆಚ್ಚು ಸಂತೋಷವಾಗಿದೆ. ಈಗ ಔರಾದ್ ಕ್ಷೇತ್ರ ಪವರ್ ಸೆಂಟರ್ ಇದ್ದಂತೆ. ಕೇಂದ್ರದಲ್ಲಿ ಅವರು, ರಾಜ್ಯದಲ್ಲಿ ನಾನು ಮಂತ್ರಿಗಳಾಗಿ ಬೀದರ್ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇವೆ' ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಬೀದರ್: ನೂತನ ಸಚಿವರ ಮೇಲೆ ನೂರಾರು ನಿರೀಕ್ಷೆಗಳು. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಬೀದರ್ ಜಿಲ್ಲೆಯ ಸಂಸದರಿಗೆ ಪ್ರಾತಿನಿಧ್ಯ ದೊರಕಿದ್ದು, ಜಿಲ್ಲೆಯ ಅಭಿವೃದ್ಧಿಯ ಕುರಿತು ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಕೇಂದ್ರ ಸರಕಾರದಿಂದ ಬೀದರ್ ಜಿಲ್ಲೆಯಲ್ಲಿ ಆಗಬೇಕಿರುವ ಕೆಲಸಗಳಿಗೆ ಈಗಲಾದರೂ ವೇಗ ದೊರಕೀತೆ ಎನ್ನುವ ಚರ್ಚೆಗಳು ಶುರುವಾಗಿವೆ.
ಸಂಸದರಾಗಿದ್ದುಕೊಂಡೇ ಭಗವಂತ ಖೂಬಾ ಅವರು ಜಿಲ್ಲೆಗೆ ಅನೇಕ ರೈಲುಗಳನ್ನು ತಂದಿದ್ದಾರೆ. ಹೆದ್ದಾರಿಗಳನ್ನು ಮಂಜೂರು ಮಾಡಿಸಿದ್ದಾರೆ. ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇದೀಗ ಅವರ ಕೆಲಸಕ್ಕೆ ಮೆಚ್ಚಿ ಕೇಂದ್ರದ ವರಿಷ್ಠರು ಸಚಿವ ಸ್ಥಾನವನ್ನೇ ನೀಡಿದ್ದಾರೆ. ಹೀಗಾಗಿ, ರೈಲ್ವೆ, ಹೆದ್ದಾರಿ, ಮೂಲ ಸೌಕರ್ಯ, ಕೇಂದ್ರದ ಯೋಜನೆಗಳ ಅನುಷ್ಠಾನ ಸೇರಿದಂತೆ ನಾನಾ ಅಭಿವೃದ್ಧಿಯ ಕೆಲಸಗಳು ಇನ್ನಷ್ಟು ಪರಿಣಾಮಕಾರಿಯಾಗುವ ನಿರೀಕ್ಷೆಯಿದೆ.
ಬೀದರ್- ಕಲಬುರಗಿ ಮಾರ್ಗವಾಗಿ ಬೆಂಗಳೂರಿಗೆ ರೈಲು ಓಡಾಟ, ಪಿಟ್ಲೈನ್ ಬಳಕೆ, ಬೀದರ್- ಬೆಂಗಳೂರು ನಡುವಣ ಇನ್ನಷ್ಟು ವಿಮಾನಗಳ ಹಾರಾಟ, ಎಫ್.ಎಂ. ಕೇಂದ್ರ ಸ್ಥಾಪನೆ, ಜಿಲ್ಲೆಯ ಯುವಕರ ಕೈಗೆ ಕೆಲಸ ನೀಡುವ ಹೊಸ ಕೈಗಾರಿಕೆಗಳ ಸ್ಥಾಪನೆ, ಹೊಸ ಹೆದ್ದಾರಿಗಳ ಮಂಜೂರಾತಿ, ಈ ಹಿಂದೆ ಜಿಲ್ಲೆಗೆ ಘೋಷಣೆಯಾಗಿದ್ದ ಸಿಪೆಟ್ ಕೇಂದ್ರದ ಸ್ಥಾಪನೆ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸೇರಿದಂತೆ ಇನ್ನಿತರ ಹೊಸ ಯೋಜನೆಗಳನ್ನು ಸಚಿವರು ಜಿಲ್ಲೆಗೆ ತರಲು ಯತ್ನಿಸಬೇಕಿದೆ.
ಔರಾದ್ನವರೇ ಕೇಂದ್ರ, ರಾಜ್ಯ ಸಚಿವರು
ಕೇಂದ್ರ ಸಚಿವ ಸಂಪುಟದಲ್ಲಿ ಭಗವಂತ ಖೂಬಾ ಸಚಿವರಾದರೆ, ರಾಜ್ಯ ಸರಕಾರದಲ್ಲಿ ಪ್ರಭು ಚವ್ಹಾಣ್ ಪಶು ಸಂಗೋಪನಾ ಸಚಿವರಾಗಿದ್ದಾರೆ. ಈ ಇಬ್ಬರೂ ಔರಾದ್ ತಾಲೂಕಿನವರಾಗಿರುವುದು ವಿಶೇಷವಾಗಿದೆ. ಕೇಂದ್ರ, ರಾಜ್ಯದಲ್ಲಿ ಇದೀಗ ಬಿಜೆಪಿ ಸರಕಾರಗಳೇ ಇದ್ದು, ಇಬ್ಬರೂ ಜೋಡೆತ್ತಿನಂತೆ ಜಿಲ್ಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಆಗಬೇಕಿರುವ ಯಾವುದೇ ಕೆಲಸ ಇದೀಗ ಸರಳ, ಸುಲಭವಾಗಿ ಮಾಡಬಹುದಾಗಿದೆ.
ಇದೀಗ ಇಬ್ಬರೂ ಸೇರಿ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಬೇಕಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದೀಗ ನಿರ್ಮಾಣವಾಗಿದ್ದು, ಸಚಿವರುಗಳು ಈ ಸದಾವಕಾಶವನ್ನು ಬಳಸಿಕೊಂಡು, ಅಭಿವೃದ್ಧಿಗೆ ವೇಗ ನೀಡಬೇಕಿದೆ. ಕೇಂದ್ರ, ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ, ಹೊಸ ಯೋಜನೆಗಳನ್ನು ತಂದು, ಸಚಿವರಾಗಿ ದಾಖಲೆ ನಿರ್ಮಿಸಿದಂತೆ ಕೆಲಸ ಮಾಡಿಯೂ ಭಗವಂತ ಖೂಬಾ ಅವರು ಗಮನ ಸೆಳೆಯುವರೇ ನೋಡಬೇಕಿದೆ.
'ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಈ ಜವಾಬ್ದಾರಿಯನ್ನು ನಾನು ನಿಷ್ಠೆ, ಪ್ರಾಮಾಣಿಕತೆಯಿಂದ ನಿರ್ವಹಿಸಿ ಎಲ್ಲರ ವಿಶ್ವಾಸ ಉಳಿಸಿಕೊಳ್ಳುವೆ. ಬೀದರ್ ಲೋಕಸಭಾ ಕ್ಷೇತ್ರದ ಜತೆಗೆ, ದೇಶ ಸೇವೆ, ಸಮಸ್ತ ಭಾರತೀಯರ ಒಳಿತಿಗಾಗಿ, ಅಭಿವೃದ್ಧಿಗಾಗಿ ನನ್ನ ಸೇವೆ ಮೀಸಲಿರಲಿದೆ' ಎಂದು ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ, ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
'ಬೀದರ್ ಅಭಿವೃದ್ಧಿಯ ದೃಷ್ಟಿಯಿಂದ ನಾನು ಹಾಗೂ ಭಗವಂತ ಖೂಬಾ ಅವರು ಸದಾ ಜನತೆಯ ಜೊತೆಗೆ ಇರುತ್ತೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬೇಕಾದ ಅಭಿವೃದ್ಧಿಗಳನ್ನು ಮಾಡಲು ಸದಾ ಸಿದ್ಧರಿದ್ದೇವೆ. ಭಗವಂತ ಖೂಬಾ ಅವರು ಔರಾದ್ನವರಾಗಿರುವುದರಿಂದ ವೈಯಕ್ತಿಕವಾಗಿ ನನಗೆ ಹೆಚ್ಚು ಸಂತೋಷವಾಗಿದೆ. ಈಗ ಔರಾದ್ ಕ್ಷೇತ್ರ ಪವರ್ ಸೆಂಟರ್ ಇದ್ದಂತೆ. ಕೇಂದ್ರದಲ್ಲಿ ಅವರು, ರಾಜ್ಯದಲ್ಲಿ ನಾನು ಮಂತ್ರಿಗಳಾಗಿ ಬೀದರ್ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇವೆ' ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.