ಆ್ಯಪ್ನಗರ

ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ತಾಲೂಕಿನ ಡಾವರಗಾಂವ ಗ್ರಾಮದಲ್ಲಿ ಬಾಲಕಿಯೊಬ್ಬಳ ಬಾಲ್ಯ ವಿವಾಹ ನೆರವೇರುವುದಕ್ಕೂ ಮೊದಲೇ ಅಧಿಕಾರಿಗಳು ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka 20 Apr 2018, 4:57 pm
ಭಾಲ್ಕಿ : ತಾಲೂಕಿನ ಡಾವರಗಾಂವ ಗ್ರಾಮದಲ್ಲಿ ಬಾಲಕಿಯೊಬ್ಬಳ ಬಾಲ್ಯ ವಿವಾಹ ನೆರವೇರುವುದಕ್ಕೂ ಮೊದಲೇ ಅಧಿಕಾರಿಗಳು ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web child marriage prevention officers
ಬಾಲ್ಯ ವಿವಾಹ ತಡೆದ ಅಧಿಕಾರಿಗಳು


ಗ್ರಾಮದ ವೆಂಕಟ ತಂದೆ ರಾಮರಾವ ತುಕದೆ ಜತೆಗೆ ಚಿಟ್ಟಾ ಗ್ರಾಮದ ಬಾಲಕಿಯೊಂದಿಗೆ ಗುರುವಾರ( ಎ.19) ವಿವಾಹ ನಿಶ್ಚಯವಾಗಿತ್ತು. ಈ ಬಾಲಕಿ ಅಪ್ರಾಪ್ತ ವಯಸ್ಸಿನವರಾಗಿವ ಬಗ್ಗೆ ಖಚಿತ ಮಾಹಿತಿ ಪಡೆದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಬಸಪ್ಪ ಬೆಳಗುಂಪಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪೋಷಕರಲ್ಲಿ ಮನವರಿಕೆ ಮಾಡಿ ವಿವಾಹ ತಡೆದರು. ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡುವುದು ಕಾನೂನು ಬಾಹೀರವಾಗುತ್ತದೆ ಎಂದು ತಿಳಿಸಿ, ಬಾಲ್ಯ ವಿವಾಹದ ದುಷ್ಪರಿಣಾಮ ಮತ್ತು ಶಿಕ್ಷೆಯ ಅರಿವು ಮೂಡಿಸಿದ್ದಾರೆ. ಅಲ್ಲದೇ ಬಾಲಕಿಯ ಪಾಲಕರಿಂದ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಬರೆದ ಮುಚ್ಚಳಿಕೆ ಪತ್ರ ಪಡೆದರು.

ಮಕ್ಕಳ ರಕ್ಷ ಣಾಧಿಕಾರಿ ಪ್ರಶಾಂತ ಬಿರಾದಾರ್‌, ಚೈಲ್ಡ್‌ಲೈನ್‌ನ ತಾಲೂಕು ಸಂಯೋಜಕ ಸೂರ್ಯಕಾಂತ, ಸಂಯೋಜಕ ಸಂದೀಪ ದೇವಕೆ, ಖಟಕ್‌ ಚಿಂಚೋಳಿ ಪೊಲೀಸ್‌ ಠಾಣೆಯ ಪಿಎಸ್‌ಐ ಯಲ್ಲಾಲಿಂಗ ಕುನ್ನೂರ್‌, ಡಾ.ಶೇಷನಾಗ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೀಂದ್ರ ಶಿಂಧೆ, ಅಭಿವೃದ್ಧಿ ಅಧಿಕಾರಿ ಮಲ್ಲೇಶ ಮಾರುತಿ, ಡಾವರಗಾಂವ ಪಿಹೆಚ್‌ಸಿಯ ಡಾ.ಪ್ರವೀಣಕುಮಾರ್‌, ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ, ಮರೆಮ್ಮ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ