ಆ್ಯಪ್ನಗರ

ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಮದುವೆ ಸಿದ್ಧತೆಯಲ್ಲಿದ್ದ ಬಾಲಕಿಯೊಬ್ಬಳ ಬಾಲ್ಯ ವಿವಾಹ ನೆರವೇರುವುದಕ್ಕೂ ಮೊದಲೇ ಅಧಿಕಾರಿಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka 3 May 2019, 5:00 am
ಭಾಲ್ಕಿ :ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಮದುವೆ ಸಿದ್ಧತೆಯಲ್ಲಿದ್ದ ಬಾಲಕಿಯೊಬ್ಬಳ ಬಾಲ್ಯ ವಿವಾಹ ನೆರವೇರುವುದಕ್ಕೂ ಮೊದಲೇ ಅಧಿಕಾರಿಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web child marriage prevention officers
ಬಾಲ್ಯ ವಿವಾಹ ತಡೆದ ಅಧಿಕಾರಿಗಳು


ನಿಡೇಬನ್‌ ಗ್ರಾಮದ ರೇವಣಪ್ಪ ಮೂಲಗೆ ಎಂಬುವರ ಮಗ ಗುಂಡಪ್ಪ ಜತೆಗೆ ಹೊನ್ನಳ್ಳಿ ಗ್ರಾಮದ ಬಾಲಕಿಯೊಂದಿಗೆ ಮೇ 19 ಭಾನುವಾರ ವಿವಾಹ ನಿಶ್ಚಯವಾಗಿತು. ಈ ಬಾಲಕಿ ಅಪ್ರಾಪ್ತ ವಯಸ್ಸಿನವರಾಗಿರುವುದು ಖಚಿತ ಮಾಹಿತಿ ಪಡೆದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಬಸಪ್ಪ ಬೆಳಗುಂಪಿ ನೇತೃತ್ವದಲ್ಲಿ ಗುರುವಾರ ಮದುವೆ ನಡೆಯುವ ಸ್ಥಳಕ್ಕೆ ತೆರಳಿ, ಮದುವೆ ತಯಾರಿಯಲ್ಲಿದ್ದ ಪೋಷಕರ ಮನವೊಲಿಸಿ ವಿವಾಹ ತಡೆದು ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡುವುದು ಕಾನೂನು ಬಾಹಿರವಾಗುತ್ತದೆ ಎಂದು ತಿಳಿಸಿದರು. ಬಾಲ್ಯ ವಿವಾಹದ ದುಷ್ಪರಿಣಾಮ ಮತ್ತು ಶಿಕ್ಷೆಯ ಅರಿವು ಮೂಡಿಸಿದ್ದಾರೆ. ಅಲ್ಲದೇ ಬಾಲಕಿಯ ಪಾಲಕರಿಂದ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಬರೆದ ಮುಚ್ಚಳಿಕೆ ಪತ್ರ ಪಡೆದರು.

ಮಕ್ಕಳ ರಕ್ಷ ಣಾ ಘಟಕದ ಅಧಿಕಾರಿ ಪ್ರಶಾಂತ ಬಿರಾದಾರ್‌, ಖಟಕ್‌ ಚಿಂಚೋಳಿ ಪೊಲೀಸ್‌ ಠಾಣೆಯ ಪಿಎಸ್‌ಐ ವಿಜಯಕುಮಾರ ನಾಯಕ, ಪಿಡಿಓ ಧೋಂಡಿಬಾ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ