ಆ್ಯಪ್ನಗರ

ಕ್ರಿಸ್‌ಮಸ್‌; ಅಂತರ್‌ ಧರ್ಮೀಯರ ಸೌಹಾರ್ದಕೂಟ 18ಕ್ಕೆ

ಕಲಬುರಗಿಯ ಧರ್ಮಕ್ಷೇತ್ರ ಸೈಂಟ್‌ ಜೋಸೆಫ್‌ ಕೆಥೋಲಿಕ ಚರ್ಚ್‌ನ ಭಾರತೀಯ ಕೆಥೋಲಿಕ್‌ ಯುವ ಸಂಚಲನ ಬೀದರ್‌ ಘಟಕದಿಂದ ಕ್ರಿಸ್‌ ಮಸ್‌ ಹಬ್ಬದ ಅಂಗವಾಗಿ ಅಂತರ್‌ ಧರ್ಮೀಯರ ಸೌಹಾರ್ದ ಕೂಟ, ಶಾಂತಿದೂತ ಕಾರ್ಯಕ್ರಮ ಡಿ. 18 ರಂದು ಸಂಜೆ 4 ಗಂಟೆಗೆ ನಗರದ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿದೆ.

Vijaya Karnataka 17 Dec 2018, 5:00 am
ಬೀದರ್‌ :ಕಲಬುರಗಿಯ ಧರ್ಮಕ್ಷೇತ್ರ ಸೈಂಟ್‌ ಜೋಸೆಫ್‌ ಕೆಥೋಲಿಕ ಚರ್ಚ್‌ನ ಭಾರತೀಯ ಕೆಥೋಲಿಕ್‌ ಯುವ ಸಂಚಲನ ಬೀದರ್‌ ಘಟಕದಿಂದ ಕ್ರಿಸ್‌ ಮಸ್‌ ಹಬ್ಬದ ಅಂಗವಾಗಿ ಅಂತರ್‌ ಧರ್ಮೀಯರ ಸೌಹಾರ್ದ ಕೂಟ, ಶಾಂತಿದೂತ ಕಾರ್ಯಕ್ರಮ ಡಿ. 18 ರಂದು ಸಂಜೆ 4 ಗಂಟೆಗೆ ನಗರದ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿದೆ.
Vijaya Karnataka Web christmas inter religious friendship 18th
ಕ್ರಿಸ್‌ಮಸ್‌; ಅಂತರ್‌ ಧರ್ಮೀಯರ ಸೌಹಾರ್ದಕೂಟ 18ಕ್ಕೆ


ಈ ಶಾಂತಿದೂತ ಕಾರ್ಯಕ್ರಮದ ಸಾನ್ನಿಧ್ಯವನ್ನು ಕಲಬುರಗಿಯ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ರಾಬರ್ಟ್‌ ಮೈಕಲ್‌ ಮಿರಾಂದ ವಹಿಸುವರು. ಸಾನ್ನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ದೇವರು, ಆಣದೂರ ಧಮ್ಮ ದರ್ಶನ ಭೂಮಿಯ ಪೂಜ್ಯ ಭಂತೆ ಧಮ್ಮಾನಂದ ಥೆರೋ, ಗುರುದ್ವಾರ ಶ್ರೀ ನಾನಕ್‌ ಝೀರಾ ಸಾಹೇಬ್‌ನ ಸರದಾರ್‌ ಜ್ಞಾನಿ ದರಬಾರಾ ಸಿಂಗ್‌, ಜಮಾ ಅತೆ ಇಸ್ಲಾಮೀ ಹಿಂದ್‌ ಬೀದರ್‌ ಘಟಕದ ಅಧ್ಯಕ್ಷ ನಿಜಾಮುದ್ದೀನ್‌ ವಹಿಸುವರು.

ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್‌ ಸದಸ್ಯರಾದ ವಿಜಯ್‌ಸಿಂಗ್‌, ಯುನೈಟೆಡ್‌ ಕ್ರಿಶ್ಚನ್‌ ಫೋರಂ ಅಧ್ಯಕ್ಷ ಸಂಜಯ್‌ ಜಾಗೀರದಾರ್‌, ನವ ದೆಹಲಿಯ ಐ.ಸಿ.ವೈ.ಎಂ. ರಾಷ್ಟ್ರೀಯ ಅಧ್ಯಕ್ಷ ಪರ್ಸಿವಲ್‌ ಹೊಲ್ಟ್‌, ಬೆಂಗಳೂರಿನ ಐ.ಸಿ.ವೈ.ಎಂ. ಜಂಟಿ ಕಾರ್ಯದರ್ಶಿ ಅನಿತಾ, ಬೀದರ್‌ ವಲಯ ಮುಖ್ಯಗುರು ಫಾದರ್‌ ಕ್ಲೇರಿ ಡಿಸೋಜಾ, ಯುವ ನಾಯಕ ಅರ್ಜುನ ಕನಕ, ಕಲಬುರಗಿ ಧರ್ಮಕ್ಷೇತ್ರ ಯುವ ಆಯೋಗದ ಕಾರ್ಯದರ್ಶಿ ಫಾದರ್‌ ಕ್ಲಿವನ್‌ ಗೋಮ್ಸ್‌, ಲೇಖಕರು ಹಾಗೂ ಉಪನ್ಯಾಸಕಿ ವಿದ್ಯಾವತಿ ಹಿರೇಮಠ, ಐ.ಸಿ.ವೈ.ಎಂ. ಕಲಬುರಗಿ ಧರ್ಮ ಕ್ಷೇತ್ರದ ಅಧ್ಯಕ್ಷ ದೇವೆಂದ್ರ ಮತ್ತು ಐ.ಸಿ.ವೈ.ಎಂ. ಬೀದರ್‌ ವಲಯ ಸಂಯೋಜಕಿ ಸಿಸ್ಟರ್‌ ಪ್ರೇಮಾ ಪಾಲ್ಗೊಳ್ಳುವರು.

ಸೈಂಟ್‌ ಜೋಸೆಫ್‌ ಶಿಕ್ಷಣ ಸಂಸ್ಥೆ. ಬೀದರ್‌ ಜಿಲ್ಲೆಯ ವಿವಿಧ ಶಾಲಾ- ಕಾಲೇಜುಗಳು, ಕಾರ್ಮೆಲ್‌ ಸಂಸ್ಥೆ, ಹೋಲಿಕ್ರಾಸ್‌ ಸಂತಪುರ, ಬಾಲಯೇಸು ಪುಣ್ಯಕ್ಷೇತ್ರ ಭಾಲ್ಕಿ, ಕ್ರಿಸ್ತರಾಜರ ದೇವಾಲಯ ಉಜನಿ, ಶಾಂತ ನೃತ್ಯ ಕಲಾಕೇಂದ್ರ ಬೀದರ್‌, ಡಾನ್‌ ಬೋಸ್ಕೋ ಸಂಸ್ಥೆ ಚಿಕ್ಕಪೇಟ ಹಾಗೂ ಕ್ರೈಸ್ತರ ಸಂಸ್ಥೆಗಳ ವಿದ್ಯಾರ್ಥಿಗಳು ಕ್ರಿಸ್ಮಸ್‌ ಸಂದೇಶವನ್ನು ಸಂಗೀತ ಹಾಗೂ ನೃತ್ಯರೂಪಕ ಮತ್ತು ನಾಟಕಗಳ ಮೂಲಕ ಪ್ರಸ್ತುತಪಡಿಸುವರು ಎಂದು ಸೈಂಟ್‌ ಜೋಸೆಫ್‌ ದೇವಾಲಯದ ಧರ್ಮಗುರುಗಳಾದ ಫಾದರ್‌ ಜಯರಾಜು ಎಸ್‌.ಜೆ., ಸಚೇಕತರಾದ ಸಿಸ್ಟರ್‌ ಸನೀಶ ಎ.ಸಿ, ಸಿಸ್ಟರ್‌ ಸುಪ್ರಿತಾ, ಸುಧಾಕರ, ವಿಕಾಸ ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ