ಭಾಲ್ಕಿ : ಎರಡು ಕೋಮುಗಳ ನಡುವೆ ಮಾತಿಗೆ ಮಾತು ಬೆಳೆದು ಕಲ್ಲು ತೂರಾಟ ನಡೆಸಿರುವ ಘಟನೆ ತಾಲೂಕಿನ ಸಿದ್ದೇಶ್ವರ ಗ್ರಾಮದಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ 8ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ರಾತ್ರಿ ನಾಟಕ ಪ್ರದರ್ಶನ ಸಂದರ್ಭದಲ್ಲಿ ಒಂದು ಕೋಮಿನ ಜನರು ಮದ್ಯ ಸೇವಿಸಿ ಬಾಟಲ್ಗಳನ್ನು ಇನ್ನೊಂದು ಸಮುದಾಯದ ಮೇಲೆ ಎಸೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಎರಡೂ ಬಣಗಳ ನಡುವೆ ವಾಗ್ಯುದ್ಧ, ಹೊಡೆದಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಸೋಮವಾರ ಬೆಳಗ್ಗೆ ಒಂದು ಗುಂಪಿನ ಜನರು ರಾತ್ರಿ ಘಟನೆ ಕುರಿತು ವಿಚಾರಿಸಲು ಹೋದಾಗ ಮತ್ತೊಂದು ಗುಂಪಿನ ಜನರು ದಿಢೀರ್ ಖಾರದ ಪುಡಿ ಎರಚಿ, ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಚಹಾ ಅಂಗಡಿ ಹಾಕುವ ವಿಷಯದಲ್ಲಿ ಇಬ್ಬರ ನಡುವೆ ವೈಯಕ್ತಿಕ ಜಗಳ ಆರಂಭವಾಗಿದೆ. ನಂತರ ಇಬ್ಬರ ಪರವಾಗಿರುವ ಜನರ ಗುಂಪಿನ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಗಾಯಗೊಂಡ ಜನರು ನೀಡಿರುವ ದೂರಿನ ಮೇರೆಗೆ ಧನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಸ್ಥಿತಿ ಅವಲೋಕನ
ಘಟನೆಯ ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಮಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಸಿಪಿಐ-6, ಪಿಎಸ್ಐ-3, ಪೊಲೀಸ್ ಸಿಬ್ಬಂದಿ-40 ಮತ್ತು 2 ಡಿಎಆರ್ ತುಕಡಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.
ಹೊರ ಬಾರದ ಜನ
ಘಟನೆಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ ದಿನವಿಡೀ ಜನರು ಹೊರ ಬಾರದೇ ಮನೆಯಲ್ಲೇ ಕಾಲ ಕಳೆದರು. ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಎಲ್ಲೆಡೆ ಪೊಲೀಸ್ ಸಿಬ್ಬಂದಿ ಓಡಾಡುತ್ತಿರುವುದು ಕಂಡು ಬಂತು.
ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ರಾತ್ರಿ ನಾಟಕ ಪ್ರದರ್ಶನ ಸಂದರ್ಭದಲ್ಲಿ ಒಂದು ಕೋಮಿನ ಜನರು ಮದ್ಯ ಸೇವಿಸಿ ಬಾಟಲ್ಗಳನ್ನು ಇನ್ನೊಂದು ಸಮುದಾಯದ ಮೇಲೆ ಎಸೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಎರಡೂ ಬಣಗಳ ನಡುವೆ ವಾಗ್ಯುದ್ಧ, ಹೊಡೆದಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಸೋಮವಾರ ಬೆಳಗ್ಗೆ ಒಂದು ಗುಂಪಿನ ಜನರು ರಾತ್ರಿ ಘಟನೆ ಕುರಿತು ವಿಚಾರಿಸಲು ಹೋದಾಗ ಮತ್ತೊಂದು ಗುಂಪಿನ ಜನರು ದಿಢೀರ್ ಖಾರದ ಪುಡಿ ಎರಚಿ, ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಚಹಾ ಅಂಗಡಿ ಹಾಕುವ ವಿಷಯದಲ್ಲಿ ಇಬ್ಬರ ನಡುವೆ ವೈಯಕ್ತಿಕ ಜಗಳ ಆರಂಭವಾಗಿದೆ. ನಂತರ ಇಬ್ಬರ ಪರವಾಗಿರುವ ಜನರ ಗುಂಪಿನ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಗಾಯಗೊಂಡ ಜನರು ನೀಡಿರುವ ದೂರಿನ ಮೇರೆಗೆ ಧನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಸ್ಥಿತಿ ಅವಲೋಕನ
ಘಟನೆಯ ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಮಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಸಿಪಿಐ-6, ಪಿಎಸ್ಐ-3, ಪೊಲೀಸ್ ಸಿಬ್ಬಂದಿ-40 ಮತ್ತು 2 ಡಿಎಆರ್ ತುಕಡಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.
ಹೊರ ಬಾರದ ಜನ
ಘಟನೆಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ ದಿನವಿಡೀ ಜನರು ಹೊರ ಬಾರದೇ ಮನೆಯಲ್ಲೇ ಕಾಲ ಕಳೆದರು. ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಎಲ್ಲೆಡೆ ಪೊಲೀಸ್ ಸಿಬ್ಬಂದಿ ಓಡಾಡುತ್ತಿರುವುದು ಕಂಡು ಬಂತು.