ಆ್ಯಪ್ನಗರ

ಡಿಸಿ ವಿರುದ್ಧ ಹಕ್ಕುಚ್ಯುತಿ ದೂರು

ವಿಧಾನ ಪರಿಷತ್‌ ಸದಸ್ಯರಿಗೆ ಕಚೇರಿ ನೀಡುವ ವಿಷಯದಲ್ಲಿ ಜಿಲ್ಲಾಧಿಕಾರಿ ಡಾ. ಎಚ್‌. ಆರ್‌. ಮಹದೇವ್‌ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದ್ದರಿಂದ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ಎಂಎಲ್‌ಸಿ ಅರವಿಂದಕುಮಾರ ಅರಳಿ ಅವರು ವಿಧಾನ ಪರಿಷತ ಸಭಾಪತಿಗೆ ದೂರು ಸಲ್ಲಿಸಿದ್ದಾರೆ.

Vijaya Karnataka 18 Sep 2018, 5:12 pm
ಬೀದರ್‌ : ವಿಧಾನ ಪರಿಷತ್‌ ಸದಸ್ಯರಿಗೆ ಕಚೇರಿ ನೀಡುವ ವಿಷಯದಲ್ಲಿ ಜಿಲ್ಲಾಧಿಕಾರಿ ಡಾ. ಎಚ್‌. ಆರ್‌. ಮಹದೇವ್‌ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದ್ದರಿಂದ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ಎಂಎಲ್‌ಸಿ ಅರವಿಂದಕುಮಾರ ಅರಳಿ ಅವರು ವಿಧಾನ ಪರಿಷತ ಸಭಾಪತಿಗೆ ದೂರು ಸಲ್ಲಿಸಿದ್ದಾರೆ.
Vijaya Karnataka Web complaint against the dc
ಡಿಸಿ ವಿರುದ್ಧ ಹಕ್ಕುಚ್ಯುತಿ ದೂರು


ಈಚೆಗೆ ಹಕ್ಕುಚ್ಯುತಿ ಮಂಡಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆಯೇ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಡಿಸಿಗೆ ತಮಗೊಂದು ಕಚೇರಿಗಾಗಿ ಸರಕಾರಿ ಕಟ್ಟಡದ ಸ್ಥಳ ನೀಡುವಂತೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಡಿಸಿ ಯಾವುದೇ ಮಾರುತ್ತರ ನೀಡಿಲ್ಲ. ಒಂದೆರಡು ಬಾರಿ ಮೌಖಿಕವಾಗಿ ಕೇಳಿದ್ದರೂ ಡಿಸಿ ಸ್ಪಂದಿಸಿಲ್ಲ ಎಂದು ಎಂಎಲ್ಸಿ ಅರಳಿ ಹೇಳಿದ್ದಾರೆ.

ಕೆಲ ದಿನಗಳ ಬಳಿಕ ಎಂಎಲ್ಸಿ ಅರಳಿ ಡಿಸಿಗೆ ತಾವು ಬರೆದ ಪತ್ರದ ಬಗ್ಗೆ ನೆನಪಿಸಿದ್ದಾರೆ. ಆಗ ಡಿಸಿ ಕಚೇರಿ ನೀಡಲಾಗದು ಎಂಬ ಸುತ್ತೋಲೆಯೊಂದನ್ನು ಎಂಎಲ್ಸಿಗೆ ರವಾನಿಸಿದ್ದಾರೆ. ಡಿಸಿ ಕಳುಹಿಸಿದ 1998ರ ಸುತ್ತೋಲೆ ಓದಿದ ಅರಳಿ, ಸುತ್ತೋಲೆ ಸರಿಯಾಗಿ ಓದಿಕೊಳ್ಳುವಂತೆ ಡಿಸಿಗೆ ಕಿವಿ ಮಾತು ಹೇಳಿದ್ದಾರೆ. ಸರಕಾರದ ಕಟ್ಟಡವನ್ನು ಎಂಎಲ್ಸಿ ಅವರ ಕಚೇರಿಗಾಗಿ ನೀಡಬಹುದು. ಆದರೆ, ಸರಕಾರಿ ಕಚೇರಿಯನ್ನು ನೀಡಲಾಗದು ಎಂದು ಸುತ್ತೋಲೆಯಲ್ಲಿದೆ ಎಂದು ಅರಳಿ ತಿಳಿಸಿದ್ದಾರೆ.

ಆದರೂ, ಡಿಸಿ ಅರಳಿಗೆ ಪ್ರತಿಕ್ರಿಯೆ ನೀಡಿಲ್ಲ. ಇದಾದ ಬಳಿಕ ಎಂಎಲ್ಸಿ ಡಿಸಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಕಚೇರಿ ನೀಡಲು ವಿಳಂಬ ಮಾಡಿದ್ದಕ್ಕೆ ತಮ್ಮ ವಿರುದ್ಧ ಯಾಕೆ ಹಕ್ಕು ಚ್ಯುತಿ ಮಂಡಿಸಬಾರದು ಎಂದು ಪತ್ರದಲ್ಲಿ ಕೇಳಿದ್ದಾರೆ. ಆದರೂ ಸ್ಪಂದಿಸದ ಡಿಸಿ ಮತ್ತೆ ಕೆಲ ದಿನಗಳ ನಂತರ ತೋಟಗಾರಿಕೆ ಇಲಾಖೆ ಕಚೇರಿಯನ್ನು ಎಂಎಲ್ಸಿ ಕಚೇರಿಯನ್ನಾಗಿ ಮಾಡಿಕೊಳ್ಳಬಹುದು ಎಂದು ಆದೇಶಿಸಿದ್ದಾರೆ.

ಸುತ್ತೋಲೆ ಪ್ರಕಾರ ಸರಕಾರಿ ಕಚೇರಿಯನ್ನು ತಮ್ಮ ಕಚೇರಿಯನ್ನಾಗಿಸಿಕೊಳ್ಳಲು, ಬರಲ್ಲ. ಆದರೂ, ಡಿಸಿ ತೋಟಗಾರಿಕೆ ಇಲಾಖೆ ಮೊದಲನೇ ಮಹಡಿ ಕಚೇರಿಯನ್ನಾಗಿ ಮಾಡಿಕೊಳ್ಳಲು ತಿಳಿಸಿದ್ದಾರೆ. ಸರಕಾರಿ ಕಚೇರಿ ನೀಡಿದ್ದೇ ಮೊದಲ ತಪ್ಪು, ಅದರಲ್ಲೂ ಮೊದಲನೇ ಮಹಡಿಯಲ್ಲಿ ನೀಡಿದ್ದು, ಜನರಿಗೆ ದೂರು ನೀಡಲು ಬರಲು ಸಮಸ್ಯೆಯಾಗುತ್ತದೆ. ನನ್ನ ಆರೋಗ್ಯವೂ ಸರಿ ಇಲ್ಲ. ಕಚೇರಿಗೆ ಮೇಲೇರಿ ಹೋಗಲಾಗದು. ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲ ಎಂದು ಅರಳಿ ಹೇಳಿದ್ದಾರೆ.

ತಾನು ನಗರದ ಜನವಾಡಾ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಟ್ಟಡವನ್ನು ಕಚೇರಿಯನ್ನಾಗಿ ನೀಡುವಂತೆ ಕೇಳಿದ್ದೆ, ಆದರೆ, ಡಿಸಿ ಅದನ್ನು ನೀಡಿಲ್ಲ. ನಿರ್ಲಕ್ಷ್ಯ ಮಾಡಿದ್ದಾರೆ. ಈ ಮೂಲಕ ತನ್ನ ಹಕ್ಕಿಗೆ ಚ್ಯುತಿ ತಂದಿದ್ದರಿಂದ ಸಭಾಪತಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ