ಆ್ಯಪ್ನಗರ

ವಕೀಲರ ಸಂಘ ಕ್ರಿಯಾಶೀಲತೆಯಿಂದ ಕಲಾಪಗಳು ಸುಗಮ

ವಕೀಲರ ಸಂಘವು (ಬಾರ್‌ ಅಸೋಶಿಯೇಶನ್‌) ಕ್ರಿಯಾಶೀಲವಾಗಿದ್ದರೆ, ನ್ಯಾಯಾಲಯದ ಕಾರ‍್ಯ ಕಲಾಪಗಳು ಸಹ ಸುಗಮವಾಗಿ ನಡೆಯುತ್ತವೆ ಎಂದು ಕರ್ನಾಟಕ ಹೈ ಕೋರ್ಟ್‌ನ ನ್ಯಾಯಮೂರ್ತಿಗಳು ಹಾಗೂ ಬೀದರ್‌ನ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶಂಕರ ಗಣಪತಿ ಪಂಡಿತ ಅಭಿಪ್ರಾಯಪಟ್ಟರು.

Vijaya Karnataka 25 Nov 2018, 5:00 am
ಬೀದರ್‌ :ವಕೀಲರ ಸಂಘವು (ಬಾರ್‌ ಅಸೋಶಿಯೇಶನ್‌) ಕ್ರಿಯಾಶೀಲವಾಗಿದ್ದರೆ, ನ್ಯಾಯಾಲಯದ ಕಾರ‍್ಯ ಕಲಾಪಗಳು ಸಹ ಸುಗಮವಾಗಿ ನಡೆಯುತ್ತವೆ ಎಂದು ಕರ್ನಾಟಕ ಹೈ ಕೋರ್ಟ್‌ನ ನ್ಯಾಯಮೂರ್ತಿಗಳು ಹಾಗೂ ಬೀದರ್‌ನ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶಂಕರ ಗಣಪತಿ ಪಂಡಿತ ಅಭಿಪ್ರಾಯಪಟ್ಟರು.
Vijaya Karnataka Web complaints are smooth with the activists activism
ವಕೀಲರ ಸಂಘ ಕ್ರಿಯಾಶೀಲತೆಯಿಂದ ಕಲಾಪಗಳು ಸುಗಮ


ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದಿಂದ ಶನಿವಾರ ಬೀದರ್‌ನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ 'ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾ ವಕೀಲರ ಸಂಘದ ಕಟ್ಟಡ' ಲೋಕಾರ್ಪಣೆ ಮಾಡಿ, ವೇದಿಕೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಟ್ಟಿಯಾದ ಹಾಗೂ ಕ್ರಿಯಾಶೀಲ ವಕೀಲರ ಸಂಘ (ಬಾರ್‌) ಇಲ್ಲದೇ ಇದ್ದರೆ, ಬೆಂಚ್‌ನಿಂದ ಸೂಕ್ತ ಕೆಲಸ ಮಾಡಲಾಗದು ಎಂದು ತಿಳಿಸಿದರು.

2.12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಮೂರು ಅಂತಸ್ತಿನ ಬೃಹತ್‌ ಕಟ್ಟಡ ರಾಜ್ಯದಲ್ಲೇ ಮಾದರಿ. ಹೀಗಾಗಿ, ಈ ಕಟ್ಟಡದಲ್ಲಿ ಗ್ರಂಥಾಲಯ, ಕಂಪ್ಯೂಟರ್‌ ಹಾಗೂ ಲಾ ಜರ್ನಲ್ಸ್‌ಗಳ ವ್ಯವಸ್ಥೆ ಮಾಡಬೇಕು. ಇದು ವಕೀಲರಿಗೆ ಸಾಕಷ್ಟು ಸಹಾಯಕವಾಗುತ್ತದೆ. ಈ ಕಟ್ಟಡದಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಬೇಕು. ವಕೀಲರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಶಿ ಚಂದ್ರಕಾಂತ ಮಾತನಾಡಿ, 10 ಜನರ ಸಾಮರ್ಥ್ಯ‌ದ ಒಂದು ಲಿಫ್ಟ್‌ ಈ ಕಟ್ಟಡಕ್ಕೆ ಒದಗಿಸಿಕೊಡಬೇಕು. ಇದರಿಂದ ವಕೀಲರಿಗೆ ಅನುಕೂಲವಾಗುತ್ತದೆ ಎಂದು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು. ಅಲ್ಲದೆ, ಕಟ್ಟಡ ಕಟ್ಟಲು ನೆರವಾದ ನ್ಯಾಯಾಧೀಶರು, ಅಧಿಕಾರಿಗಳು, ವಕೀಲರ ಹೀಗೆ ಎಲ್ಲರನ್ನು ಸ್ಮರಿಸಿದರು.

ಇದಕ್ಕೂ ಮುನ್ನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮನಗೂಳಿ ಪ್ರೇಮಾವತಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

ಲೋಕೋಪಯೋಗಿ ಇಲಾಖೆಯ ಇಇ ಪ್ರಶಾಂತ ಪಿ.ಆರ್‌., ವಕೀಲರ ಸಂಘದ ಉಪಾಧ್ಯಕ್ಷ ಸತೀಶ್‌ ಕುಲಕರ್ಣಿ, ಕಾರ‍್ಯದರ್ಶಿ ಸಂತೋಷ ತರನಳ್ಳೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರರೆಡ್ಡಿ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ನಿರ್ಮಲಾದೇವಿ ಎಸ್‌., ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಜೀವನರಾವ್‌ ಕುಲಕರ್ಣಿ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಯಮನಪ್ಪ, ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ‍್ಯದರ್ಶಿ ಆರ್‌. ರಾಘವೇಂದ್ರ, 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಶ್ರೇಯಾನ್ಸ್‌ ದೊಡ್ಡಮನಿ, ನ್ಯಾಯಾಧೀಶ ಶಶಿಕಾಂತ ಪಿ. ಕಲಾಲ್‌, ಹಿರಿಯ ವಕೀಲರಾದ ಕೆ. ಕಾಶಿನಾಥ, ಪ್ರಥಮ ದರ್ಜೆ ಗುತ್ತಿಗೆದಾರ ರಾಜಶೇಖರ ಪಾಟೀಲ್‌ ಅಷ್ಟೂರು ಹಾಗೂ ಜಿಲ್ಲೆಯ ವಕೀಲರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಮತ್ತು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ