ಆ್ಯಪ್ನಗರ

ಸಹಕಾರಿ ವ್ಯವಸ್ಥೆಯಿಂದ ರೈತರಿಗೆ ಅನುಕೂಲ

ಸಹಕಾರಿ ವ್ಯವಸ್ಥೆಯಲ್ಲಿ ಜನರಿಗೆ ಅತಿ ಸುಲಭವಾಗಿ ಕೈಗೆಟಕುವ ದರದಲ್ಲಿ ಸಾಲದ ಸೌಲಭ್ಯ ಸಿಗುತ್ತಿದ್ದು, ಗ್ರಾಮೀಣ ಜನರಿಗೆ ಅದರಲ್ಲೂ ಕೃಷಿಕರಿಗೆ ಅತ್ಯಂತ ಅನುಕೂಲವಾಗಿದೆ ಎಂದು ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಅಬ್ದುಲ್‌ ಸಲೀಂ ಹೇಳಿದರು. ...

Vijaya Karnataka 6 Jul 2019, 5:00 am
ಬೀದರ್‌ :ಸಹಕಾರಿ ವ್ಯವಸ್ಥೆಯಲ್ಲಿ ಜನರಿಗೆ ಅತಿ ಸುಲಭವಾಗಿ ಕೈಗೆಟಕುವ ದರದಲ್ಲಿ ಸಾಲದ ಸೌಲಭ್ಯ ಸಿಗುತ್ತಿದ್ದು, ಗ್ರಾಮೀಣ ಜನರಿಗೆ ಅದರಲ್ಲೂ ಕೃಷಿಕರಿಗೆ ಅತ್ಯಂತ ಅನುಕೂಲವಾಗಿದೆ ಎಂದು ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಅಬ್ದುಲ್‌ ಸಲೀಂ ಹೇಳಿದರು.
Vijaya Karnataka Web convenience to farmers through a cooperative system
ಸಹಕಾರಿ ವ್ಯವಸ್ಥೆಯಿಂದ ರೈತರಿಗೆ ಅನುಕೂಲ


ಬೆಳಗಾವಿ, ವಿಜಯಪುರ, ಧಾರವಾಡ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ ರುಗಳಿಗಾಗಿ ನಡೆದ ಉತ್ತಮ ಆಡಳಿತ ನಿರ್ವಹಣೆ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು,

ರೈತರಿಗೆ ಹಣಕಾಸಿನ ಸೌಲಭ್ಯ ನೀಡುವ ಸಹಕಾರಿ ವ್ಯವಸ್ಥೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೇ ಜೀವಾಳವಾಗಿವೆ ಎಂದರು.

ಸದೃಢವಾದ ಸಂಘಗಳು ಕೇವಲ ತನ್ನ ಸದಸ್ಯರಿಗೆ ಮಾತ್ರವಲ್ಲ ದೇಶಕ್ಕೂ ಆಸ್ತಿಗಳಾಗಿವೆ. ತನ್ನ ಹಣಕಾಸಿನ ವ್ಯವಹಾರಗಳನ್ನು ಚೆನ್ನಾಗಿ ನಿರ್ವಹಿಸುವುದರಿಂದ ಗ್ರಾಮದ ಜನರಿಗೆ ಲಾಭಾಂಶ ಹಂಚಿಕೆಯಾಗಿ ಸಂಪನ್ಮೂಲಗಳ ಸದ್ಬಳಕೆಯಾಗುತ್ತದೆ ಎಂದರು.

ಜಿಲ್ಲೆಯಲ್ಲಿರುವ 3 ಲಕ್ಷ ರೈತ ಕುಟುಂಬಗಳಲ್ಲಿ 2.60 ಲಕ್ಷ ಕುಟುಂಬಗಳನ್ನು ಸಹಕಾರಿ ಸಂಘಗಳ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ. ಅವರಲ್ಲಿ ಸುಮಾರು 42000 ಕುಟುಂಬಗಳು ಪಜಾ,ಪಪಂಕ್ಕೆ ಸೇರಿದವರಾಗಿದ್ದು, ಉಳಿದ 40,000 ಕುಟುಂಬಗಳನ್ನು ಸದಸ್ಯರನ್ನಾಗಿ ನೋಂದಣಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಜಿಲ್ಲೆಯ ಶೇ. 70 ಕೃಷಿ ಸಾಲ ಡಿಸಿಸಿ ಬ್ಯಾಂಕ್‌ ನೀಡುತ್ತಿದ್ದು, ಇದು ರಾಜ್ಯದಲ್ಲೆ ಅತಿ ಹೆಚ್ಚು ಕೃಷಿ ಸಾಲದ ಪಾಲುಗಾರಿಕೆ ಹೊಂದಿರುವ ಸಹಕಾರಿ ಬ್ಯಾಂಕಾಗಿ ರಾಜ್ಯದಲ್ಲೇ ಮೊದಲ ಸ್ಧಾನದಲ್ಲಿದೆ. ಮಧ್ಯಮಾವಧಿ ಕೃಷಿ ಸಾಲದಲ್ಲೂ 136 ಕೋಟಿ ವಿತರಿಸಲಾಗಿದೆ ಎಂದು ಅಬ್ದುಲ್‌ ಸಲೀಂ ಹೇಳಿದರು.

ಬೀದರ್‌ನ ಶೇ.70 ಪಿಕೆಪಿಎಸ್‌ಗಳು ಲಾಭದಲ್ಲಿದ್ದು, ಅತ್ಯುತ್ತಮ ಸಾಧನೆಯ ದಾಖಲೆ ಹೊಂದಿವೆ. ಸಾಲದ ವಸೂಲಾತಿ ಮತ್ತು ವ್ಯವಹಾರ ಅಭಿವೃದ್ಧಿ ಮೂಲಕ ಲಾಭದತ್ತ ಸಾಗಲು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರಿಗೆ ತರಬೇತಿಗಳು ಅವಶ್ಯಕ ಎಂದು ಹೇಳಿದರು.

ಎರಡು ದಿನಗಳ ವಿಶೇಷ ತರಬೇತಿ ಕಾರ್ಯಕ್ರಮವನ್ನು ಬೀದರ್‌ ಡಿಸಿಸಿ ಬ್ಯಾಂಕು, ಸಹಕಾರ ಗ್ರಾಮೀಣಾಭಿವೃದ್ಧಿ ಅಕಾಡೆಮಿ ಸಹಾರ್ದ ಮತ್ತು ನಬಾರ್ಡ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ವಿಭಾಗದ ಜಂಟಿ ನಿಬಂಧಕ ಐ.ಎಸ್‌. ಗಿರಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕರಾದ ವಿಠಲರೆಡ್ಡಿ, ನರಸಾರೆಡ್ಡಿ, ಸಹಾಯಕ ನಿಬಂಧಕರು ಎ.ಎಸ್‌.ನಿಂಬಾಳ ಉಪಸ್ಥಿತರಿದ್ದರು. 5 ಜಿಲ್ಲೆಗಳ ಸುಮಾರು 61 ತರಬೇತಿದಾರರು ಹಾಜರಿದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಎಸ್‌.ಜಿ. ಪಾಟೀಲ ವಂದಿಸಿದರು. ನಾಗಶೆಟ್ಟಿ, ತನ್ವೀರ ರಾಜಾ, ಅನಿಲ ಪಿ., ಮಹಾಲಿಂಗ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ