ಆ್ಯಪ್ನಗರ

ಬೀದರ್: ಸಿಆರ್‌ಪಿಎಫ್‌ ಯೋಧ, ಮೂವರು ಕೆಎಸ್ಆರ್‌ಪಿ ಪೇದೆಗೆ ಸೋಂಕು

39 ವರ್ಷದ ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಪೇದೆ, 52 ವರ್ಷದ ಬೀದರ ತಾಲೂಕಿನ ಅಮಲಾಪುರ ಗ್ರಾಮ ಮತ್ತು 42 ವರ್ಷದ ಚಿದ್ರಿ ಗ್ರಾಮದ ಪೇದೆಯಲ್ಲಿ ಈಗ ಕೊರೊನಾ ಸೋಂಕು ಪತ್ತೆಯಾಗಿದೆ.

Vijaya Karnataka Web 2 Jul 2020, 5:59 pm
ಬೀದರ್: ಜಿಲ್ಲೆಯಲ್ಲಿ ಗುರುವಾರ ಸಿಆರ್‌ಪಿಎಫ್ ಓರ್ವ ಯೋಧ ಮತ್ತು ಮೂವರು ಕೆಎಸ್ಆರ್‌ಪಿ ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಫಟ್ಟಿದೆ.
Vijaya Karnataka Web ಕೊರೊನಾ
ಕೊರೊನಾ


ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಒಬ್ಬರು ಎಎಸ್ಐ, ಇಬ್ಬರು ಪೇದೆಗಳ ಬಳಿಕ ಈಗ ನೌಬಾದ ಕೆಎಸ್.ಆರ್.ಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತಗುಲಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ಹೊಸದಿಲ್ಲಿ ಸಿಆರ್.ಪಿಎಫ್ ನಲ್ಲಿ ಕರ್ತವ್ಯ ನಿರ್ವಹಿಸುವ ಬಸವಕಲ್ಯಾಣ ತಾಲೂಕಿನ ಕಲಖೋರಾ ಗ್ರಾಮದ 35 ವರ್ಷದ ಕಾನಸ್ಟೇಬಲ್ ಅವರಲ್ಲಿ ಸೋಂಕು ಪತ್ತೆಯಾಗಿದೆ‌. ಜೂ. 13 ರಂದು ದಿಲ್ಲಿಯ ರೈಲು ಮೂಲಕ 15ರಂದು ಸ್ವಗ್ರಾಮ ತಲುಪಿದ್ದರು. ನಂತರ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು.

ಜೂ. 24 ರಂದು ಗಂಟಲು ಮಾದರಿ ಪರೀಕ್ಷೆ ನಡೆಸಿದ್ದು ಗುರುವಾರ ವರದಿಯಲ್ಲಿ ಪಾಸಿಟಿವ್ ಬಂದಿದೆ.

39 ವರ್ಷದ ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಪೇದೆ, 52 ವರ್ಷದ ಬೀದರ ತಾಲೂಕಿನ ಅಮಲಾಪುರ ಗ್ರಾಮ ಮತ್ತು 42 ವರ್ಷದ ಚಿದ್ರಿ ಗ್ರಾಮದ ಪೇದೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ