ಆ್ಯಪ್ನಗರ

ಸಂಸ್ಕೃತಿ, ಸಭ್ಯತೆಯೇ ನಮ್ಮ ನೈಜ ಆಸ್ತಿ: ಬಂಡೆಪ್ಪ

ನಾವು ಗಳಿಸುವ ಆಸ್ತಿ ನಮ್ಮ ನೈಜ ಆಸ್ತಿಯಲ್ಲ. ಅದರ ಬದಲು ನಾವು ರೂಢಿಸಿಕೊಂಡು ಪಾಲಿಸುವ ಸಭ್ಯತೆ, ಸಂಸ್ಕೃತಿಯೇ ನಮ್ಮ ದೊಡ್ಡ ಆಸ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಷೆಂಪುರ ಹೇಳಿದರು.

Vijaya Karnataka 20 Oct 2018, 4:23 pm
ಬೀದರ್‌ : ನಾವು ಗಳಿಸುವ ಆಸ್ತಿ ನಮ್ಮ ನೈಜ ಆಸ್ತಿಯಲ್ಲ. ಅದರ ಬದಲು ನಾವು ರೂಢಿಸಿಕೊಂಡು ಪಾಲಿಸುವ ಸಭ್ಯತೆ, ಸಂಸ್ಕೃತಿಯೇ ನಮ್ಮ ದೊಡ್ಡ ಆಸ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಷೆಂಪುರ ಹೇಳಿದರು.
Vijaya Karnataka Web culture and decency are our real property
ಸಂಸ್ಕೃತಿ, ಸಭ್ಯತೆಯೇ ನಮ್ಮ ನೈಜ ಆಸ್ತಿ: ಬಂಡೆಪ್ಪ


ಬೀದರ್‌ನ ಸಾಯಿ ಶಾಲೆ ಮೈದಾನದಲ್ಲಿ ಶುಕ್ರವಾರ ರಾತ್ರಿ ರಾಮಲೀಲಾ ಉತ್ಸವ ಸಮಿತಿಯಿಂದ ಆಯೋಜಿಸಲಾಗಿದ್ದ 12ನೇ ನಾಡಹಬ್ಬ ವಿಜಯದಶಮಿ ನಿಮಿತ್ತದ ಸಾಂಸ್ಕೃತಿಕ ಕಾರ‍್ಯಕ್ರಮ, ರಾಮಲೀಲಾ ಉತ್ಸವ ಹಾಗೂ ರಾವಣ ದಹನ ಕಾರ‍್ಯಕ್ರಮದಲ್ಲಿ ಮಾತನಾಡಿ, ಕಳೆದ 12 ವರ್ಷಗಳಿಂದ ಬೀದರ್‌ನಲ್ಲಿ ಒಳ್ಳೆಯ ರೀತಿಯಿಂದ ರಾಮಲೀಲಾ ಉತ್ಸವ ಆಚರಿಸಲಾಗುತ್ತಿದೆ ಎಂದರು.

ರಾಜ್ಯದ ಸಮ್ಮಿಶ್ರ ಸರಕಾರವು ರೈತರ 40 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ರೈತರಿಗೆ ಎಲ್ಲ ರೀತಿಯ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.

ಸಂಸದ ಭಗವಂತ ಖೂಬಾ ಮಾತನಾಡಿ, ಕೆಟ್ಟದ್ದನ್ನು ಮೂಲೆಗುಂಪು ಮಾಡಿ, ಒಳ್ಳೆಯದು ಹಾಗೂ ಸತ್ಯವನ್ನು ಮಾತ್ರ ಉಳಿಯುವಂತೆ ಮಾಡುವ ಮೂಲಕ, ನವ ಭಾರತ ನಿರ್ಮಿಸೋಣ ಎಂದರು.

ಎಂಎಲ್ಸಿ ರಘುನಾಥ ಮಲ್ಕಾಪುರೆ ಮಾತನಾಡಿದರು. ರಾಮಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಈಶ್ವರ್‌ಸಿಂಗ್‌ ಠಾಕೂರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೇಂದ್ರಿಯ ವಿದ್ಯಾಲಯದ ಮಕ್ಕಳಿಂದ ರಾಮಲೀಲಾ ಉತ್ಸವ ಜರುಗಿತು. ಇದಾದ ಬಳಿಕ 40 ಅಡಿ ಎತ್ತರದ ರಾವಣನ ಪ್ರತಿಕೃತಿಯನ್ನು ದಹಿಸಲಾಯಿತು. ಇದಕ್ಕೂ ಮುನ್ನ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗಿದವು.

ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹದೇವ್‌, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಡಾ. ಶೈಲೇಂದ್ರ ಬೆಲ್ದಾಳೆ, ನಗರಸಭೆಯ ಹಂಗಾಮಿ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಚಂದ್ರಶೇಖರ ಗಾದಾ, ಮಹೇಶ್ವರ ಸ್ವಾಮಿ, ರಾಜಕುಮಾರ ಅಗರವಾಲ್‌, ಅಶೋಕ ರೇಜಂತಲ್‌, ಶಂಕರ್‌, ಬಿ. ಜನಾರ್ಧನ್‌, ರಮೇಶ್‌ ಕುಲಕರ್ಣಿ ಸಹಸ್ರಾರು ಸಂಖ್ಯೆಯ ಜನರು ಪಾಲ್ಗೊಂಡಿದ್ದರು.

ಡಿಸೆಂಬರ್‌ ಅಂತ್ಯಕ್ಕೆ ಬೀದರ್‌ ಉತ್ಸವ

ಡಿಸೆಂಬರ್‌ ಅಂತ್ಯದಲ್ಲಿ ಬೀದರ್‌ ಉತ್ಸವ ಆಚರಿಸಲಾಗುತ್ತಿದ್ದು, ಈ ಮೂಲಕ ಬೀದರ್‌ನ ಸಂಸ್ಕೃತಿ, ಸಭ್ಯತೆ, ಆಚಾರ, ವಿಚಾರ, ಕಲೆ, ಸಾಹಿತ್ಯವನ್ನು ನಾಡಿನಾದ್ಯಂತ ಪರಿಚಯಿಸುವ ಹಾಗೂ ಪಸರಿಸುವ ಕಾರ‍್ಯ ಮಾಡಲಾಗುವುದು ಎಂದು ಸಚಿವ ಬಂಡೆಪ್ಪ ಖಾಷೆಂಪುರ ಘೋಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ