ಆ್ಯಪ್ನಗರ

ಸಾಲಬಾಧೆ ರೈತ ಆತ್ಮಹತ್ಯೆ

ಸಾಲಬಾಧೆ ರೈತ ಆತ್ಮಹತ್ಯೆ ವಿಕ ಸುದ್ದಿಲೋಕ ಭಾಲ್ಕಿ ಸಾಲಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೇಳಗಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ...

Vijaya Karnataka 8 Jun 2018, 5:00 am
ಭಾಲ್ಕಿ : ಸಾಲಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೇಳಗಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
Vijaya Karnataka Web debt farmer suicide
ಸಾಲಬಾಧೆ ರೈತ ಆತ್ಮಹತ್ಯೆ


ಶಿವರಾಜ ಶರಣಪ್ಪ ನೌಬಾದೆ(55) ಮೃತ ರೈತ. ಕೃಷಿ ಚಟುವಟಿಕೆ ನಿರ್ವಹಣೆಗಾಗಿ ಕೆನರಾ ಬ್ಯಾಂಕ್‌ ಸೇರಿದಂತೆ ಅಂದಾಜು 8 ಲಕ್ಷ ರೂ ಸಾಲವಿದೆ ಎಂದು ಹೇಳಲಾಗಿದೆ.

ಸಾಲದ ಹೊರೆ ತಾಳಲಾರದೆ ಸಾಲ ಹೇಗೆ ತೀರಿಸಬೇಕೆಂಬ ಚಿಂತೆಯಲ್ಲಿ ಹೊಲದಲ್ಲಿನ ಸ್ಟಾರ್ಟರ್‌ಗೆ ಸಂಪರ್ಕ ಕಲ್ಪಿಸುವ ವಿದ್ಯುತ್‌ ತಂತಿ ಹಿಡಿದು ಶಿವರಾಜ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೃತ ರೈತನ ಪುತ್ರ ಶರಣಪ್ಪ ಶಿವರಾಜ ನೀಡಿರುವ ದೂರಿನ ಮೇರೆಗೆ ಧನ್ನೂರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ