ಆ್ಯಪ್ನಗರ

ಸಾಲಬಾಧೆ ರೈತ ಆತ್ಮಹತ್ಯೆ

ತಾಲೂಕಿನ ರಾಚಪ್ಪ ಗೌಡಗಾಂವದ ರೈತ ಬಸವರಾಜ ಪಾಟೀಲ ಸಾಲಬಾಧೆ ತಾಳಲಾರದೆ ಕೀಟನಾಶಕ ಔಷಧ ಸೇವಿಸಿ ಮಂಗಳವಾರ ಮೃತಪಟಿದ್ದಾರೆ.

Vijaya Karnataka 15 Nov 2019, 10:23 pm
Vijaya Karnataka Web debtor farmer suicide
ಸಾಲಬಾಧೆ ರೈತ ಆತ್ಮಹತ್ಯೆ
ಭಾಲ್ಕಿ:ತಾಲೂಕಿನ ರಾಚಪ್ಪ ಗೌಡಗಾಂವದ ರೈತ ಬಸವರಾಜ ಪಾಟೀಲ ಸಾಲಬಾಧೆ ತಾಳಲಾರದೆ ಕೀಟನಾಶಕ ಔಷಧ ಸೇವಿಸಿ ಮಂಗಳವಾರ ಮೃತಪಟಿದ್ದಾರೆ.

ಮೃತ ರೈತನಿಗೆ ಸರ್ವೇ ನಂಬರ್‌ 16, 129ರಲ್ಲಿ12 ಎಕರೆ ಹೊಲವಿದ್ದು, ಅದು ತಾಯಿಯ ಹೆಸರಿನಲ್ಲಿದೆ. ಕೃಷಿ ಚಟುವಟಿಕೆಗಳಿಗಾಗಿ ಹುಲಸೂರಿನ ಎಸ್‌ಬಿಐ, ಭಾಲ್ಕಿಯ ಡಿಸಿಸಿ ಬ್ಯಾಂಕ್‌, ಸ್ವಸಹಾಯ ಸಂಘ ಸೇರಿದಂತೆ ಒಟ್ಟು 5 ಲಕ್ಷ ಸಾಲ ಮಾಡಿದ್ದರು. ಹೊಲದಲ್ಲಿಉತ್ತಮ ಬೆಳೆ ಬಾರದ ಕಾರಣ ಸಾಲ ತೀರಿಸುವ ಚಿಂತೆಯಲ್ಲಿವಿಷ ಸೇವಿಸಿದ್ದಾರೆ ಎಂದು ಮೃತ ರೈತನ ಪತ್ನಿ ನಿರ್ಮಲಾ ಮೆಹಕರ ಪೊಲೀಸ್‌ ಠಾಣೆಯಲ್ಲಿದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ