ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಗ್ರಾಮ ಲೆಕ್ಕಾಧಿಕಾರಿಗಳ ಧರಣಿ

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬುಧವಾರ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.

Vijaya Karnataka 18 Jul 2019, 7:45 pm
ಬೀದರ್‌ :ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬುಧವಾರ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
Vijaya Karnataka Web demand fulfillment village accountant dharani
ಬೇಡಿಕೆ ಈಡೇರಿಕೆಗೆ ಗ್ರಾಮ ಲೆಕ್ಕಾಧಿಕಾರಿಗಳ ಧರಣಿ


ಬೇಡಿಕೆ ಈಡೇರಿಸುವುದಾಗಿ ಈ ಹಿಂದೆ ಭರವಸೆ ನೀಡಿದ್ದ ಸರಕಾರ ಈಡೇರಿಸಿಲ್ಲ. ಇನ್ನಾದರೂ ನಮ್ಮಗಳ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಕಂದಾಯ ಇಲಾಖೆಯ ಪ್ರಧಾನ ಕಾರ‍್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ.

ಗ್ರಾಮ ಲೆಕ್ಕಾಧಿಕಾರಿಗಳ ಬಹು ದಿನಗಳ ಬೇಡಿಕೆಗಳಾದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ, ವೇತನ ಶ್ರೇಣಿ ಹೆಚ್ಚಿಸುವುದು, ನಿಗದಿತ ಪ್ರಯಾಣ ಭತ್ಯೆ ಮೊತ್ತವನ್ನು 1000 ರೂ.ಗೆ ಏರಿಸುವುದು. ಜಾಬ್‌ ಚಾರ್ಟ್‌ ನೀಡುವುದು, ಅನ್ಯ ಇಲಾಖೆಗಳ ಕೆಲಸ ಸೇರಿದಂತೆ ಇನ್ನಿತರ ಹೆಚ್ಚುವರಿ ಯಾವುದೇ ಕೆಲಸ ನೀಡದೇ ಇರುವುದು, ಗ್ರಾಮ ಲೆಕ್ಕಿಗರ ಕಚೇರಿ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಹಿಂದೆ ಹಲವು ಬಾರಿ ಕಂದಾಯ ಸಚಿವರನ್ನು ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ‍್ಯದರ್ಶಿಗಳಿಗೆ ಗ್ರಾಮ ಲೆಕ್ಕಿಗರ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಲಾಗಿತ್ತು. ಬಳಿಕ ಸರಕಾರದ ಪ್ರಧಾನ ಕಾರ‍್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಚರ್ಚಿಸಿ ಬೇಡಿಕೆಗಳೆಲ್ಲವೂ ಸಕಾರಣದಿಂದ ಕೂಡಿದ್ದರಿಂದ ನ್ಯಾಯ ಒದಗಿಸುವುದಾಗಿ ಲಿಖಿತವಾಗಿ ಭರವಸೆ ನೀಡಲಾಗಿತ್ತು. 2017ರ ಅ. 30 ರಂದು ನಾಲ್ಕು ಆದೇಶಗಳನ್ನು ನೀಡಿದ್ದರೂ ಅವುಗಳನ್ನು ಕಾರ‍್ಯರೂಪಕ್ಕೆ ತಂದಿಲ್ಲ. ಇದರಿಂದ ಅನ್ಯಾಯವಾಗಿದೆ. ಇನ್ನಾದರೂ ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದು ಅನಿವಾರ‍್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಜಿಲ್ಲಾಧ್ಯಕ್ಷ ಶಿವಾನಂದ ಎಂ. ಪಾಟೀಲ್‌, ರಾಹುಲ್‌ದೇವ್‌ ಎಚ್‌. ಪ್ರಸಾದ್‌, ವೀರೇಶ್‌ ಬಟಕುರ್ಕಿ, ಬಬ್ರುವಾಹನ ಬೆಳಮಗಿ ಹೊಕ್ರಾಣಾ ಬಿ., ಮಲ್ಲಿಕಾರ್ಜುನ ಬಿರಾದಾರ್‌, ಪ್ರಭಾಕರ ಮಾಳೆ, ಧರ್ಮಣ್ಣ ಭಾಲ್ಕಿ, ಶಿವಲಿಂಗಪ್ಪ ಯರಗಲ್‌, ಸುಭಾಷ್‌ ರಾಠೋಡ್‌, ಬಿರಾದಾರ್‌ ನೀಲಕಂಠ, ಶಿವಕುಮಾರ ಮರಕುಂದಾ, ತಿಪ್ಪೇಶ್‌ ಚಿಂತಲಗೇರಾ, ಜೀವನ್‌ ಚಾಂಬೋಳ, ಶ್ರೀಶೈಲ ನಾವಿ ನಾಗೋರಾ, ರವಿಕುಮಾರ ಗುನ್ನಳ್ಳಿ, ವಿಜಯಕುಮಾರ ಭೂಮಿಕೇಂದ್ರ, ಅಶ್ವಿನಿ ಆರ್‌ ಭೂಮಿ, ನಂದಿನ ಶಂಕರ, ಸತ್ತಾರಮಿಯ್ಯಾ ಕಮಠಾಣಾ, ಬಸವರಾಜ ರಂಜೋಲಖೇಣಿ, ನಾಗವೇಣಿ ಕಾಶಂಪುರ (ಪಿ), ಜ್ಯೋತಿ ಕಾಡವಾದ, ಶಿಲ್ಪಾ ಸಂಗೊಳಗಿ, ಚಂದ್ರಕಾಂತ ಚಟ್ನಳ್ಳಿ, ಕಿಶನ್‌ ಹೊನ್ನಡ್ಡಿ, ಮಹಾನಂದಾ, ಸಂಗೀತಾ ಅಷ್ಟೂರ, ಲಕ್ಷ್ಮಿ ಅಮಲಾಪುರ, ಪ್ರದೀಪ್‌ ಅಂಗಡಿ ಹಾಗೂ ವಿವಿಧೆಡೆಯ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ