ಆ್ಯಪ್ನಗರ

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನಕ್ಕೆ ಆಗ್ರಹ

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು, ಬಸವ ಜಯಂತಿಯನ್ನು ಕೇಂದ್ರ ಸರಕಾರದಿಂದಲೇ ಪ್ರತಿ ವರ್ಷ ಆಚರಿಸಬೇಕು ಸೇರಿದಂತೆ ಆರು ಪ್ರಮುಖ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಇಲ್ಲಿಯ 18ನೇ ಕಲ್ಯಾಣ ಪರ್ವದಲ್ಲಿನಿರ್ಣಯ ಅಂಗೀಕರಿಸಲಾಯಿತು.

Vijaya Karnataka 16 Oct 2019, 10:10 pm
ಬಸವಕಲ್ಯಾಣ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು, ಬಸವ ಜಯಂತಿಯನ್ನು ಕೇಂದ್ರ ಸರಕಾರದಿಂದಲೇ ಪ್ರತಿ ವರ್ಷ ಆಚರಿಸಬೇಕು ಸೇರಿದಂತೆ ಆರು ಪ್ರಮುಖ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಇಲ್ಲಿಯ 18ನೇ ಕಲ್ಯಾಣ ಪರ್ವದಲ್ಲಿನಿರ್ಣಯ ಅಂಗೀಕರಿಸಲಾಯಿತು.
Vijaya Karnataka Web demands for the status of free religion for lingayat
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನಕ್ಕೆ ಆಗ್ರಹ


ನಗರದ ಹೊರವಲಯದಲ್ಲಿರುವ ಬಸವ ಮಹಾಮನೆ ಪರಿಸರದಲ್ಲಿಮೂರು ದಿನಗಳವರೆಗೆ ನಡೆದ 18ನೇ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದಲ್ಲಿ, ಜಗದ್ಗುರು ಶ್ರೀ ಚನ್ನಬಸವಾನಂದ ಸ್ವಾಮೀಜಿ ಆರು ನಿರ್ಣಯಗಳನ್ನು ಮಂಡಿಸಿದರು. ನೆರೆದ ಬಸವ ಭಕ್ತರು ಚಪ್ಪಾಳೆ ತಟ್ಟುವ ಮೂಲಕ ಅನುಮೋದಿಸಿದರು.

ಗುರು ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣಕ್ಕೆ ರೈಲು ಸಂಪರ್ಕ ಕಲ್ಪಿಸಬೇಕು. ಸೋಲಾಪೂರನಿಂದ ವಿಕಾರಾಬಾದ ವರೆಗೆ ಕಲ್ಯಾಣದ ಮಗ್ವಗಿ ರೈಲ್ವೆ ಲೈನ್‌ ನಿರ್ಮಿಸಬೇಕು. ಅನುಭವ ಮಂಟಪ ನಿರ್ಮಾಣಕ್ಕೆ 650 ಕೋಟಿ ರೂ ಯೋಜನೆ ಸಿದ್ಧಪಡಿಸಿ, ಈಗಾಗಲೆ ರಾಜ್ಯ ಸರಕಾರದಿಂದ 50 ಕೋಟಿ ಮಂಜೂರಿ ನೀಡಿ, 20 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ಕೆ ಕೇಂದ್ರದಿಂದ 1 ಸಾವಿರ ಕೋಟಿ ರೂ. ಅನುದಾನ ಕಲ್ಪಿಸಬೇಕು. ಕಲಬುರಗಿಯಲ್ಲಿನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ