ಆ್ಯಪ್ನಗರ

ಸೌಲಭ್ಯಗಳಿಲ್ಲದೆ ವಂಚಿತ ರೈತ ಸಂಪರ್ಕ ಕೇಂದ್ರ !

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಮರ್ಪಕ ಕಟ್ಟಡ ಸೇರಿದಂತೆ ಮೂಲ ಸವಲತ್ತುಗಳಿಲ್ಲದೆ ವಂಚಿತವಾಗಿದೆ.

Vijaya Karnataka 30 May 2019, 3:56 pm
ವಿಕ ವಿಶೇಷ ಕಮಲನಗರ :ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಮರ್ಪಕ ಕಟ್ಟಡ ಸೇರಿದಂತೆ ಮೂಲ ಸವಲತ್ತುಗಳಿಲ್ಲದೆ ವಂಚಿತವಾಗಿದೆ.
Vijaya Karnataka Web deprived farmers connection center without facilities
ಸೌಲಭ್ಯಗಳಿಲ್ಲದೆ ವಂಚಿತ ರೈತ ಸಂಪರ್ಕ ಕೇಂದ್ರ !


ಪಟ್ಟಣದ ಸರಕಾರಿ ಮಾದರಿ ಶಾಲೆ ಪಕ್ಕದಲ್ಲಿ 60/40 ಫೀಟ್‌ ವಿಸ್ತೀರ್ಣದ ನಿವೇಶನದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡವಿದ್ದು, ಒಂದೆಡೆ ಗ್ರಾಮಸೇವಕರ ವಾಸಸ್ಥಾನ, ಇನ್ನೊಂದೆಡೆ ರೈತ ಸಂಪರ್ಕ ಕಾರ್ಯಾಲಯದ ಎರಡು ಕೋಣೆಗಳಿವೆ. ಎರಡು ಕೋಣೆ ಮತ್ತು ವಿಶಾಲ ಸಭಾಂಗಣ ಹೊಂದಿರುವ ಕಾರ್ಯಾಲಯದಲ್ಲಿ ಒಂದು ಟೇಬಲ್‌, ನಾಲ್ಕು ಕುರ್ಚಿ ಬಿಟ್ಟರೆ ಬೇರೆನೂ ಸೌಲಭ್ಯಗಳಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಸ್ಥಳದ ಅಭಾವ:


ರೈತರಿಗೆ ತರಬೇತಿ ಮತ್ತು ಸಮಾರಂಭಗಳನ್ನು ಆಯೋಜಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ದೂರದ ಡೋಣಗಾಂವ, ಖೇಡ ಮತ್ತು ಸಂಗಮ ಗ್ರಾಮಗಳಿಂದ ಬರುವ ರೈತರು ನಿಂತಲ್ಲಿಯೇ ವಿಚಾರಿಸಿ ಸಲಹೆ ಪಡೆದು ವಾಪಸ್ಸಾಗುತ್ತಾರೆ. ಅದು ಸಾಧ್ಯವಾಗದಿದ್ದರೆ ಅಧಿಕಾರಿಗಳಿಗೆ ಫೋನಿನಲ್ಲಿ ಸಲಹೆ ಕೇಳುತ್ತಾರೆ.

ಒಂದು ಕೋಣೆಯಲ್ಲಿ ಕಂಪ್ಯೂಟರ್‌ ಯಂತ್ರ ಅಳವಡಿಸಲಾಗಿದೆ. ಇದರಿಂದ ರೈತ ಉಪಕರಣ ಯಂತ್ರ, ತಾಡಪಾಲ, ಗೊಬ್ಬರ, ಬೀಜ ಮತ್ತು ಇನ್ನಿತರ ಸಾಮಾನುಗಳು ಸ್ಟಾಕ್‌ ಮಾಡಲು ಸ್ಥಳ ಇಲ್ಲ. ಪ್ರತಿ ವರ್ಷ ಬಾಡಿಗೆ ರೂಪದಲ್ಲಿ ಗೋಡೌನ್‌ ಪಡೆಯುತ್ತಾರೆ. ಹಣ ಕಟ್ಟುವುದೇ ಆಗಿದೆ ವಿನಃ ಮೂಲ ಸೌಲಭ್ಯ ಸಿಗುತ್ತಿಲ್ಲ.

ನೀರು ಇಲ್ಲ:

ರೈತ ಸಂಪರ್ಕ ಕೇಂದ್ರದಲ್ಲಿ ಕೊಳವೆ ಬಾವಿ, ನಳದ ವ್ಯವಸ್ಥೆ ಇಲ್ಲ. ಜನರಿಗೆ ಕುಡಿಯುವ ಹನಿ ನೀರು ವ್ಯವಸ್ಥೆ ಇಲ್ಲ. ಶೌಚಾಲಯಗಳಿಲ್ಲದ್ದರಿಂದ ಕಟ್ಟಡದ ಮೂಲೆಯಲ್ಲಿಯೇ ಜನರು ಮೂತ್ರ,ಮಲ ವಿಸರ್ಜಿಸುತ್ತಾರೆ.ಇದರಿಂದ ಕಟ್ಟಡದ ಸುತ್ತ ದುರ್ವಾಸನೆ ಹರಡಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

7 ತಾ.ಪಂ.ಸದಸ್ಯ ಮತ್ತು ಮೂರು ಜಿಪಂ ಸದಸ್ಯ ಕ್ಷೇತ್ರ ಪ್ರತಿನಿಧಿಸುವ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಸದಾ ಬ್ಯೂಸಿ ಮೂಡ್‌ನಲ್ಲಿ ಇರುತ್ತಾರೆ.

ಅನದಾನ ವಾಪಸ್‌


ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ 2009-10 ನೇ ಸಾಲಿನಲ್ಲಿ 9ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಸೂಕ್ತ ನಿವೇಶನ ದೊರಕದೆ ಅನುದಾನ ವಾಪಸ್ಸು ಹೋಗಿದೆ. ಈಗಾಗಲೆ ಗ್ರಾ.ಪಂ.100+100 ನಿವೇಶನವನ್ನು ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ನೀಡಿದೆ. ಹೀಗಾಗಿ ಸರಕಾರ ತಕ್ಷ ಣ ನೂತನ ಕಟ್ಟಡ ನಿರ್ಮಿಸಿ ರೈತರಿಗೆ ಹೆಚ್ಚು ಸೌಕರ್ಯ ಕಲ್ಪಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸರಕಾರ ಸೂಕ್ತ ಅನುದಾನ ನೀಡಿ ರೈತರಿಗೆ ಸವಲತ್ತು ನೀಡಬೇಕು. ಇದರಿಂದ ಅವರಿಗೆ ಹೆಚ್ಚು ಅನುಕೂಲವಾಗಬೇಕು.ಅಲ್ಲದೆ ರೈತರಿಗೆ ಬೀಜ ಮತ್ತು ಗೊಬ್ಬರ ವಿತರಣೆ ಮಾಡಬೇಕು.

-ವೈಜಗೊಂಡ ಮಾರುತಿ

ರೈತ ಸಂಪರ್ಕ ಕೇಂದ್ರ ಕಟ್ಟಡದ ನಿವೇಶನವನ್ನು ಗ್ರಾಪಂ ನೋಂದಣಿ ಮಾಡಿ ಇಲಾಖೆಗೆ ನೀಡಿದೆ.ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಎಂ.ಡಿ.ಮಾಜೀದ್‌, ಸಹಾಯಕ ಕೃಷಿ ನಿರ್ದೇಶಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ