ಆ್ಯಪ್ನಗರ

ಜಿಲ್ಲೆಯ ಸಹಕಾರ ಸಕ್ಕರೆ ಕಾರಖಾನೆಗಳ ಸಭೆ ಡಿ.7ಕ್ಕೆ

ಜಿಲ್ಲೆಯ ರೈತರ ಮತ್ತು ಕಬ್ಬು ಬೆಳೆಗಾರರ ಹಿತ ರಕ್ಷಣೆ ಹಿನ್ನೆಲೆ, 2019-20ನೇ ಸಾಲಿನ ಎಫ್‌ಆರ್‌ಪಿ ದರದಂತೆ ಕಬ್ಬಿನ ದರ ನಿಗದಿಪಡಿಸಿರುವ ವಿಷಯ, ಕಾರಖಾನೆಯ ಆರ್ಥಿಕ ಪರಿಸ್ಥಿತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲು ಪಶು ಸಂಗೋಪನಾ, ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ ಹಜ್‌ ಮತ್ತು ಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರ ಅಧ್ಯಕ್ಷತೆಯಲ್ಲಿಡಿ.7ರ ಮಧ್ಯಾಹ್ನ 4 ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಸಭೆ ನಡೆಯಲಿದೆ.

Vijaya Karnataka 30 Nov 2019, 10:41 pm
ಬೀದರ್‌:ಜಿಲ್ಲೆಯ ರೈತರ ಮತ್ತು ಕಬ್ಬು ಬೆಳೆಗಾರರ ಹಿತ ರಕ್ಷಣೆ ಹಿನ್ನೆಲೆ, 2019-20ನೇ ಸಾಲಿನ ಎಫ್‌ಆರ್‌ಪಿ ದರದಂತೆ ಕಬ್ಬಿನ ದರ ನಿಗದಿಪಡಿಸಿರುವ ವಿಷಯ, ಕಾರಖಾನೆಯ ಆರ್ಥಿಕ ಪರಿಸ್ಥಿತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲು ಪಶು ಸಂಗೋಪನಾ, ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ ಹಜ್‌ ಮತ್ತು ಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರ ಅಧ್ಯಕ್ಷತೆಯಲ್ಲಿಡಿ.7ರ ಮಧ್ಯಾಹ್ನ 4 ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಸಭೆ ನಡೆಯಲಿದೆ.
Vijaya Karnataka Web district co operative sugar factories meeting d7
ಜಿಲ್ಲೆಯ ಸಹಕಾರ ಸಕ್ಕರೆ ಕಾರಖಾನೆಗಳ ಸಭೆ ಡಿ.7ಕ್ಕೆ


ಕಾರಖಾನೆಗಳಿಗೆ ಸಂಬಂಧಿಸಿದಂತೆ ವಿಷಯವಾರು ಮಾಹಿತಿಯನ್ನು ಡಿಸೆಂಬರ್‌ 3ರೊಳಗೆ ಈ ಮೇಲ್‌ dd್ಛ್ಚs.ಚಿಜಿda್ಟಧಿkaಃ್ಞಜ್ಚಿ.ಜ್ಞಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಬೀದರ್‌ಗೆ ಇ ಮೇಲ್‌ d್ಟ್ಚsಧಿಚಿಜಿda್ಟಧಿkaಃ್ಞಜ್ಚಿ.ಜ್ಞಿ ಗೆ ಸಲ್ಲಿಸಬೇಕು. ಇದರ ಹಾರ್ಡ್‌ ಕಾಪಿಯನ್ನು ಕೂಡ ಈ ಕಚೇರಿಗೆ ಸಲ್ಲಿಸಬೇಕು. ಕಾರಖಾನೆ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಖುದ್ದು ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿಕಬ್ಬು ನುರಿಸಿದ, ಸಕ್ಕರೆ ಉತ್ಪಾದನೆ, ಎಫ್‌ಆರ್‌ಪಿ ಪ್ರಕಾರ ರೈತರಿಗೆ ಪಾವತಿಸಿರುವ ಹಾಗೂ ಕಬ್ಬಿನ ದರ ಬಾಕಿ ಉಳಿದಿರುವ ಕುರಿತು, ಕಾರಖಾನೆ ಬ್ಯಾಂಕಿನಿಂದ ಹಾಗೂ ಸಂಸ್ಥೆಯಿಂದ ಪಡೆದ ಸಾಲಗಳ ವಿವರ ಹಾಗೂ ಕ್ರೋಡೀಕೃತ ನಷ್ಟದ ಕುರಿತು, ಕಾರಖಾನೆ ಹೊಂದಿರುವ ಕ್ರೋಡೀಕೃತ ನಷ್ಟ ಮತ್ತು ನಷ್ಟ ಕಡಿಮೆ ಮಾಡಲು ಹಾಕಿಕೊಂಡ ಯೋಜನೆಗಳು, ಕಾರಖಾನೆಯ ಆಡಿಟ್‌ ವರದಿಯಲ್ಲಿಬರಬೇಕಾದ ಬಾಕಿ ಮೊತ್ತ ಹಾಗೂ ವಸೂಲಾತಿಗಾಗಿ ಕೈಕೊಂಡ ಕ್ರಮದ ಬಗ್ಗೆ ಪ್ರಗತಿ ಪರಿಶೀಲನೆ, ಪ್ರಸ್ತಕ್ತ ಸಾಲಿನಲ್ಲಿಕಾರಖಾನೆ ಪ್ರಾರಂಭ ಮಾಡಲು ಪೂರ್ವ ಸಿದ್ಧತೆ ಬಗ್ಗೆ ಪರಿಶೀಲನೆ, ಅಧ್ಯಕ್ಷರ ಅನುಮತಿ ಮೇರೆಗೆ ಇನ್ನಿತರ ವಿಷಯಗಳ ಕುರಿತು ಡಿ.7ರಂದು ನಡೆಯುವ ಸಭೆಯಯಲ್ಲಿಚರ್ಚೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ