ಬೀದರ್:ರಾಜ್ಯ ಸಣ್ಣ ಕೈಗಾರಿಕೆಗಳ ಸಂಘವು ಜಿಲ್ಲಾಕೈಗಾರಿಕಾ ಕೇಂದ್ರ, ಜಿಲ್ಲಾಸಣ್ಣ ಕೈಗಾರಿಕೆಗಳ ಸಂಘ ಹಾಗೂ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದಲ್ಲಿಶನಿವಾರ ಪ್ರತಾಪನಗರದ ಡಿಸಿಸಿ ಬ್ಯಾಂಕ್ ಶಾರದಾ ಆರ್ಸೆಟಿ ಸಂಸ್ಥೆಯಲ್ಲಿನಡೆದ ಸಂವಾದ ಸಭೆಯು ಅರ್ಥಪೂರ್ಣವಾಗಿ ನಡೆಯಿತು.
ಬೀದರ್ ಜನರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರಬೇಕು ಎನ್ನುವ ಆಶಯದಡಿ ಸುಧೀರ್ಘವಾಗಿ ನಡೆದ ಸಂವಾದ ಸಭೆಯಲ್ಲಿಪಾಲ್ಗೊಂಡಿದ್ದ ಗಣ್ಯರು, ಕೈಗಾರಿಕೋದ್ಯಮಿಗಳು, ನವೋದ್ಯಮಿಗಳಿಂದ ಹಲವಾರು ಸಲಹೆ, ಸೂಚನೆ, ಅನಿಸಿಕೆಗಳು ಕೇಳಿ ಬಂದವು.
ಜಿಲ್ಲೆಯಲ್ಲಿಕೈಗಾರಿಕಾ ಸ್ಥಾಪನೆಗೆ ಒಳ್ಳೆಯ ಅವಕಾಶವಿದೆ. ಆದರೆ, ಜಮೀನು ಸಿಗುತ್ತಿಲ್ಲ. ನೀರಿನ ಕೊರತೆ ಬಹಳ ಇದೆ. ಬ್ಯಾಂಕಿನಿಂದ ಸಾಲ ಸೌಕರ್ಯ ಸರಿಯಾಗಿ ಲಭ್ಯವಾಗುತ್ತಿಲ್ಲ. ಕೈಗಾರಿಕೆಯನ್ನು ಹೇಗೆ ಆರಂಭಿಸಬೇಕು ಎಂಬುದರ ಬಗ್ಗೆ ಕ್ರಮಬದ್ದವಾದ ತರಬೇತಿ ಇಲ್ಲ. ಮಾರ್ಗದರ್ಶನವಿಲ್ಲಎನ್ನುವ ಮಾತುಗಳು ಹಲವರಿಂದ ಕೇಳಿ ಬಂದವು.
ಚರ್ಚೆಯಾದ ಉದ್ಯಮಿಗಳ ಸಮಸ್ಯೆ-ಬೇಡಿಕೆ
ಕೃಷಿಗೆ, ರೈತರ ಏಳ್ಗೆಗೆ ಪೂರಕವಾಗುವ ದಿಶೆಯಲ್ಲಿಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಬೇಕು ಎಂದು ಪ್ರಗತಿಪರ ರೈತ ಜಾಫರಮಿಯಾ ಸಲಹೆ ನೀಡಿದರು. ಜಿಲ್ಲೆಯಲ್ಲಿಸೋಯಾಬೀನ್ ಸಂಸ್ಕರಣ ಘಟಕ ಸ್ಥಾಪನೆಯಾಗಬೇಕು ಎಂದು ಸೋಮಶೇಖರ ಪಾಟೀಲ ತಿಳಿಸಿದರು. ನಾನು ಮಧ್ಯಮ ವರ್ಗದ ಹೆಣ್ಣು ಮಗಳು. ಕೈಗಾರಿಕೆ ಮಾಡಬೇಕು ಎಂದು ಎರಡೂವರೆ ತಿಂಗಳುಗಳಿಂದ ಬ್ಯಾಂಕಿಗೆ ಅಲೆಯುತ್ತಿದ್ದೇನೆ. ಬ್ಯಾಂಕಿನವರು ಸಹಾಯ ಮಾಡುತ್ತಿಲ್ಲಎಂದು ಮಲ್ಲಮ್ಮ ಎಂಬುವರು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿನಿರುದ್ಯೋಗದ ಸಮಸ್ಯೆ ಇದೆ. ಜಿಲ್ಲೆಗೆ ಎಂಎನ್ಸಿ ಕಂಪೆನಿಗಳು ಬರಬೇಕು ಎಂದು ಮಲ್ಲಿಕಾರ್ಜುನ ತಿಳಿಸಿದರು.
ರಾಸಾಯನಿಕ ಘಟಕಗಳ ಸಂಘದ ಅಧ್ಯಕ್ಷ ದೇವೇಂದ್ರಪ್ಪ -ಪರಿಸರ ಸಂಬಂಧಿ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಸಿಟಿಪಿ ಇಲ್ಲದಿರುವುದು ಗಂಭೀರ ಸಮಸ್ಯೆಗೆ ಕಾರಣವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಪೀಠವು ಹಲವು ಘಟಕಗಳಿಗೆ ನೋಟಿಸ್ ನೀಡಿದೆ. ಹಲವು ದಶಕ ಕಳೆದರೂ ಸಿಟಿಪಿ ಸ್ಥಾಪನೆ ಆಗಿಲ್ಲಎಂದು ದೂರಿದರು.
ಎಸ್ಸಿಎಸ್ಟಿ ಉದ್ಯಮಿಗಳ ಸಂಘದ ಅಧ್ಯಕ್ಷ ವಿಜಯಕುಮಾರ- ಸಣ್ಣ ಕೈಗಾರಿಕೆಗಳಿಗೆ ಇನ್ನಷ್ಟು ಪ್ರೋತ್ಸಾಹ, ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು. ಮಲ್ಲಿಕಾರ್ಜುನ ಶಂಭು ಮಾಲಿನ್ಯ ಸಮಸ್ಯೆಯನ್ನು ಪ್ರಸ್ತಾಪಿಸಿದರು. ನೀರಿನ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಪ್ರಶ್ನಿಸಿದರು. ಡಿ.ವಿ. ಸಿಂದೋಲ್-, ಗಾಂಧಿಗಂಜ್ ಮತ್ತು ನೌಬಾದ್ ಕೈಗಾರಿಕಾ ಪ್ರದೇಶದಲ್ಲಿಬೀದಿ ದೀಪಗಳಂತಹ ಸಾಮಾನ್ಯ ಸೌಲಭ್ಯಗಳೂ ಇಲ್ಲಎಂದು ದೂರಿದರು.
ಸಂತೋಷ್- ಕೈಗಾರಿಕೆ ಸ್ಥಾಪನೆಗೆ ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ಧೋರಣೆಯು ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಂಜಿನಿಯರಿಂಗ್ ಶಿಕ್ಷಣ ಮುಗಿಸಿರುವ ಪ್ರವೀಣ್- ಉದ್ಯಮಗಳನ್ನು ಸ್ಥಾಪಿಸುವವರಿಗೆ ಮಾತ್ರ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ಕೈಗಾರಿಕಾ ಪ್ರದೇಶದಲ್ಲಿಸಾಕಷ್ಟು ಜನ ಬರೀ ಬೋರ್ಡುಗಳನ್ನು ಹಾಕಿಕೊಂಡಿದ್ದಾರೆ. ನಿಜವಾದ ಉದ್ಯಮಿಗಳು ಬಾಡಿಗೆ ಮೇಲೆ ನಿವೇಶನ ಪಡೆಯುವ ಸ್ಥಿತಿ ಇದೆ ತಿಳಿಸಿದರು. ಕೈಗಾರಿಕೆ ಸ್ಥಾಪನೆಯ ಉದ್ದೇಶ ಇದೆ. ಆದರೆ, ಯೋಜನಾ ವರದಿ, ಬ್ಯಾಂಕ್ ಸಾಲ, ಸಬ್ಸಿಡಿ ಮುಂತಾದವುಗಳನ್ನು ಹೇಗೆ ಪಡೆಯಬೇಕು, ಯಾರನ್ನು ಭೇಟಿಯಾಗಬೇಕು ಎನ್ನುವುದು ತಿಳಿಯುತ್ತಿಲ ಎಂದು ಎಂಜಿನಿಯರಿಂಗ್ ಮುಗಿಸಿರುವ ಯುವಕರೊಬ್ಬರು ಪ್ರಶ್ನಿಸಿದರು. ಎಲ್ಲಮಾಹಿತಿಯು ಲಭ್ಯವಾಗುವಂತಹ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಸಲಹೆಗಳು ಸರಕಾರದ ಮುಂದೆ
ಸೂಕ್ಷತ್ರ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ದೇಶನಾಲಯದ ನಿರ್ದೇಶಕ ಜಿಯಾವುಲ್ಲಾಎಸ್. ಅವರು ಸಂವಾದದಲ್ಲಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ರಾಜ್ಯ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಕೈಗಾರಿಕೆ ಸ್ಥಾಪನೆಗೆ ನಿವೇಶನ ಹಂಚಿಕೆ ಮಾಡುವ ಹಾಗೂ ನಿಗದಿತ ಅವಧಿಯೊಳಗೆ ಕೈಗಾರಿಕಾ ಘಟಕ ಸ್ಥಾಪಿಸದಿದ್ದಲ್ಲಿನಿವೇಶನ ಹಂಚಿಕೆ ರದ್ದುಪಡಿಸುವ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾದಿಕಾರಿಗೆ ನೀಡಬೇಕು ಎಂಬ ಸಲಹೆ ಸಂವಾದದಲ್ಲಿಬಂದಿದೆ. ಇದೊಂದು ಉತ್ತಮ ಸಲಹೆ. ಸರಕಾರದ ಮುಂದಿಡಲಾಗುತ್ತದೆ ಎಂದು ತಿಳಿಸಿದರು.
ವಿಶೇಷ ಕಾರ್ಯಾಗಾರ: ನವೋದ್ಯಮಿಗಳ ನೆರವಿಗೆ ಎಲ್ಲಬಗೆಯ ಮಾಹಿತಿ, ಮಾರ್ಗದರ್ಶನ ನೀಡಲು ಶೀಘ್ರದಲ್ಲಿಯೇ ಬೀದರ್ನಲ್ಲಿವಿಶೇಷ ಕಾರ್ಯಾಗಾರ ನಡೆಸಲಾಗುತ್ತದೆ ಎಂದು ತಿಳಿಸಿದ ಜಿಯಾವುಲ್ಲಾ, ಕಾರ್ಯಾಗಾರದ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವೇದಿಕೆಯಲ್ಲಿಯೇ ನಿರ್ದೇಶನ ನೀಡಿದರು.
ಬೀದರ್ ಜನರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರಬೇಕು ಎನ್ನುವ ಆಶಯದಡಿ ಸುಧೀರ್ಘವಾಗಿ ನಡೆದ ಸಂವಾದ ಸಭೆಯಲ್ಲಿಪಾಲ್ಗೊಂಡಿದ್ದ ಗಣ್ಯರು, ಕೈಗಾರಿಕೋದ್ಯಮಿಗಳು, ನವೋದ್ಯಮಿಗಳಿಂದ ಹಲವಾರು ಸಲಹೆ, ಸೂಚನೆ, ಅನಿಸಿಕೆಗಳು ಕೇಳಿ ಬಂದವು.
ಜಿಲ್ಲೆಯಲ್ಲಿಕೈಗಾರಿಕಾ ಸ್ಥಾಪನೆಗೆ ಒಳ್ಳೆಯ ಅವಕಾಶವಿದೆ. ಆದರೆ, ಜಮೀನು ಸಿಗುತ್ತಿಲ್ಲ. ನೀರಿನ ಕೊರತೆ ಬಹಳ ಇದೆ. ಬ್ಯಾಂಕಿನಿಂದ ಸಾಲ ಸೌಕರ್ಯ ಸರಿಯಾಗಿ ಲಭ್ಯವಾಗುತ್ತಿಲ್ಲ. ಕೈಗಾರಿಕೆಯನ್ನು ಹೇಗೆ ಆರಂಭಿಸಬೇಕು ಎಂಬುದರ ಬಗ್ಗೆ ಕ್ರಮಬದ್ದವಾದ ತರಬೇತಿ ಇಲ್ಲ. ಮಾರ್ಗದರ್ಶನವಿಲ್ಲಎನ್ನುವ ಮಾತುಗಳು ಹಲವರಿಂದ ಕೇಳಿ ಬಂದವು.
ಕೃಷಿಗೆ, ರೈತರ ಏಳ್ಗೆಗೆ ಪೂರಕವಾಗುವ ದಿಶೆಯಲ್ಲಿಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಬೇಕು ಎಂದು ಪ್ರಗತಿಪರ ರೈತ ಜಾಫರಮಿಯಾ ಸಲಹೆ ನೀಡಿದರು. ಜಿಲ್ಲೆಯಲ್ಲಿಸೋಯಾಬೀನ್ ಸಂಸ್ಕರಣ ಘಟಕ ಸ್ಥಾಪನೆಯಾಗಬೇಕು ಎಂದು ಸೋಮಶೇಖರ ಪಾಟೀಲ ತಿಳಿಸಿದರು. ನಾನು ಮಧ್ಯಮ ವರ್ಗದ ಹೆಣ್ಣು ಮಗಳು. ಕೈಗಾರಿಕೆ ಮಾಡಬೇಕು ಎಂದು ಎರಡೂವರೆ ತಿಂಗಳುಗಳಿಂದ ಬ್ಯಾಂಕಿಗೆ ಅಲೆಯುತ್ತಿದ್ದೇನೆ. ಬ್ಯಾಂಕಿನವರು ಸಹಾಯ ಮಾಡುತ್ತಿಲ್ಲಎಂದು ಮಲ್ಲಮ್ಮ ಎಂಬುವರು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿನಿರುದ್ಯೋಗದ ಸಮಸ್ಯೆ ಇದೆ. ಜಿಲ್ಲೆಗೆ ಎಂಎನ್ಸಿ ಕಂಪೆನಿಗಳು ಬರಬೇಕು ಎಂದು ಮಲ್ಲಿಕಾರ್ಜುನ ತಿಳಿಸಿದರು.
ರಾಸಾಯನಿಕ ಘಟಕಗಳ ಸಂಘದ ಅಧ್ಯಕ್ಷ ದೇವೇಂದ್ರಪ್ಪ -ಪರಿಸರ ಸಂಬಂಧಿ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಸಿಟಿಪಿ ಇಲ್ಲದಿರುವುದು ಗಂಭೀರ ಸಮಸ್ಯೆಗೆ ಕಾರಣವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಪೀಠವು ಹಲವು ಘಟಕಗಳಿಗೆ ನೋಟಿಸ್ ನೀಡಿದೆ. ಹಲವು ದಶಕ ಕಳೆದರೂ ಸಿಟಿಪಿ ಸ್ಥಾಪನೆ ಆಗಿಲ್ಲಎಂದು ದೂರಿದರು.
ಎಸ್ಸಿಎಸ್ಟಿ ಉದ್ಯಮಿಗಳ ಸಂಘದ ಅಧ್ಯಕ್ಷ ವಿಜಯಕುಮಾರ- ಸಣ್ಣ ಕೈಗಾರಿಕೆಗಳಿಗೆ ಇನ್ನಷ್ಟು ಪ್ರೋತ್ಸಾಹ, ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು. ಮಲ್ಲಿಕಾರ್ಜುನ ಶಂಭು ಮಾಲಿನ್ಯ ಸಮಸ್ಯೆಯನ್ನು ಪ್ರಸ್ತಾಪಿಸಿದರು. ನೀರಿನ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಪ್ರಶ್ನಿಸಿದರು. ಡಿ.ವಿ. ಸಿಂದೋಲ್-, ಗಾಂಧಿಗಂಜ್ ಮತ್ತು ನೌಬಾದ್ ಕೈಗಾರಿಕಾ ಪ್ರದೇಶದಲ್ಲಿಬೀದಿ ದೀಪಗಳಂತಹ ಸಾಮಾನ್ಯ ಸೌಲಭ್ಯಗಳೂ ಇಲ್ಲಎಂದು ದೂರಿದರು.
ಸಂತೋಷ್- ಕೈಗಾರಿಕೆ ಸ್ಥಾಪನೆಗೆ ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ಧೋರಣೆಯು ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಂಜಿನಿಯರಿಂಗ್ ಶಿಕ್ಷಣ ಮುಗಿಸಿರುವ ಪ್ರವೀಣ್- ಉದ್ಯಮಗಳನ್ನು ಸ್ಥಾಪಿಸುವವರಿಗೆ ಮಾತ್ರ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ಕೈಗಾರಿಕಾ ಪ್ರದೇಶದಲ್ಲಿಸಾಕಷ್ಟು ಜನ ಬರೀ ಬೋರ್ಡುಗಳನ್ನು ಹಾಕಿಕೊಂಡಿದ್ದಾರೆ. ನಿಜವಾದ ಉದ್ಯಮಿಗಳು ಬಾಡಿಗೆ ಮೇಲೆ ನಿವೇಶನ ಪಡೆಯುವ ಸ್ಥಿತಿ ಇದೆ ತಿಳಿಸಿದರು. ಕೈಗಾರಿಕೆ ಸ್ಥಾಪನೆಯ ಉದ್ದೇಶ ಇದೆ. ಆದರೆ, ಯೋಜನಾ ವರದಿ, ಬ್ಯಾಂಕ್ ಸಾಲ, ಸಬ್ಸಿಡಿ ಮುಂತಾದವುಗಳನ್ನು ಹೇಗೆ ಪಡೆಯಬೇಕು, ಯಾರನ್ನು ಭೇಟಿಯಾಗಬೇಕು ಎನ್ನುವುದು ತಿಳಿಯುತ್ತಿಲ ಎಂದು ಎಂಜಿನಿಯರಿಂಗ್ ಮುಗಿಸಿರುವ ಯುವಕರೊಬ್ಬರು ಪ್ರಶ್ನಿಸಿದರು. ಎಲ್ಲಮಾಹಿತಿಯು ಲಭ್ಯವಾಗುವಂತಹ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಸಲಹೆಗಳು ಸರಕಾರದ ಮುಂದೆ
ಸೂಕ್ಷತ್ರ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ದೇಶನಾಲಯದ ನಿರ್ದೇಶಕ ಜಿಯಾವುಲ್ಲಾಎಸ್. ಅವರು ಸಂವಾದದಲ್ಲಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ರಾಜ್ಯ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಕೈಗಾರಿಕೆ ಸ್ಥಾಪನೆಗೆ ನಿವೇಶನ ಹಂಚಿಕೆ ಮಾಡುವ ಹಾಗೂ ನಿಗದಿತ ಅವಧಿಯೊಳಗೆ ಕೈಗಾರಿಕಾ ಘಟಕ ಸ್ಥಾಪಿಸದಿದ್ದಲ್ಲಿನಿವೇಶನ ಹಂಚಿಕೆ ರದ್ದುಪಡಿಸುವ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾದಿಕಾರಿಗೆ ನೀಡಬೇಕು ಎಂಬ ಸಲಹೆ ಸಂವಾದದಲ್ಲಿಬಂದಿದೆ. ಇದೊಂದು ಉತ್ತಮ ಸಲಹೆ. ಸರಕಾರದ ಮುಂದಿಡಲಾಗುತ್ತದೆ ಎಂದು ತಿಳಿಸಿದರು.
ವಿಶೇಷ ಕಾರ್ಯಾಗಾರ: ನವೋದ್ಯಮಿಗಳ ನೆರವಿಗೆ ಎಲ್ಲಬಗೆಯ ಮಾಹಿತಿ, ಮಾರ್ಗದರ್ಶನ ನೀಡಲು ಶೀಘ್ರದಲ್ಲಿಯೇ ಬೀದರ್ನಲ್ಲಿವಿಶೇಷ ಕಾರ್ಯಾಗಾರ ನಡೆಸಲಾಗುತ್ತದೆ ಎಂದು ತಿಳಿಸಿದ ಜಿಯಾವುಲ್ಲಾ, ಕಾರ್ಯಾಗಾರದ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವೇದಿಕೆಯಲ್ಲಿಯೇ ನಿರ್ದೇಶನ ನೀಡಿದರು.