ಆ್ಯಪ್ನಗರ

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಸಾಲಕ್ಕೆ ಹೆದರಿ ತಾಲೂಕಿನ ಡಿಗ್ಗಿ ಗ್ರಾಮದ ರೈತ ಸಂಜೀವಕುಮಾರ ಗುರುಬಸಪ್ಪ ಬನವಾಸೆ (42) ಗುರುವಾರ ನಸುಕಿನ ಜಾವ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 5 Jul 2019, 5:00 am
ಕಮಲನಗರ : ಸಾಲಕ್ಕೆ ಹೆದರಿ ತಾಲೂಕಿನ ಡಿಗ್ಗಿ ಗ್ರಾಮದ ರೈತ ಸಂಜೀವಕುಮಾರ ಗುರುಬಸಪ್ಪ ಬನವಾಸೆ (42) ಗುರುವಾರ ನಸುಕಿನ ಜಾವ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web farmer suicides without debt
ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ


ಇವರಿಗೆ ಗ್ರಾಮದ ಸರ್ವೆ ನಂ.54ರಲ್ಲಿ 7 ಎಕರೆ 6ಗುಂಟೆ ಜಮೀನು ಇದ್ದು, ಬೇರೆಯವರ ಹೊಲದ ಒಕ್ಕಲುತನ ಮಾಡುತ್ತಿದ್ದರು. ಕೃಷಿ ಕೆಲಸಕ್ಕಾಗಿ ಕಮಲನಗರ ಡಿಸಿಸಿ ಬ್ಯಾಂಕ್‌ನಿಂದ 3ಲಕ್ಷ ರೂ.ಸಾಲ ಮಾಡಿದ್ದರು. ಸಾಲ ತೀರಿಸುವ ಚಿಂತೆಯಲ್ಲಿ ಇತ್ತೀಚೆಗೆ ಸಂಬಂಧಿಕರ ಮನೆಗೆ ಹೋಗಿ ಬಂದಿದ್ದರು. ಆದರೆ, ಹಣ ಸಿಗದೆ ಕಂಗಾಲಾದ ಈ ರೈತ,ಬೆಳಗ್ಗೆ ನವನಾಥ ರಾಂಪೂರೆ ಅವರ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಮೃತನ ಹೆಂಡತಿ ರೇಣುಕಾ ಸಂಜೀವಕುಮಾರ ದೂರಿನಲ್ಲಿ ತಿಳಿಸಿದ್ದಾರೆ. ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ