ಆ್ಯಪ್ನಗರ

ಬಿಎಸ್‌ಎಸ್‌ಕೆ ಆರಂಭಿಸಲು ದಿ.ಮೆರಾಜ್‌ ಪಟೇಲರ ಅನುಸರಿಸಿ

ಈ ಹಿಂದೆ ಬಿಎಸ್‌ಎಸ್‌ಕೆ ಸಕ್ಕರೆ ಕಾರಖಾನೆ ಸ್ಥಗಿತಗೊಂಡಾಗ ಅಂದಿನ ಸಚಿವರಾಗಿದ್ದ ದಿ. ಮೆರಾಜುದ್ದಿನ್‌ ಎನ್‌. ಪಟೇಲ್‌ ಅವರು ಮುತುವರ್ಜಿ ವಹಿಸಿ ಕಾರಖಾನೆಯನ್ನು ಪ್ರಾರಂಭಿಸಿದ್ದರು. ಅಂತೆಯೇ ಇಂದಿನ ಸಚಿವ ಪ್ರಭು ಚವ್ಹಾಣ್‌ ಅವರು ಕಾಳಜಿ ವಹಿಸಿ ಬಿಎಸ್‌ಎಸ್‌ಕೆ ಸಕ್ಕರೆ ಕಾರಖಾನೆಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಲಾಯಿತು.

Vijaya Karnataka 2 Dec 2019, 5:00 am
ಬೀದರ್‌:ಈ ಹಿಂದೆ ಬಿಎಸ್‌ಎಸ್‌ಕೆ ಸಕ್ಕರೆ ಕಾರಖಾನೆ ಸ್ಥಗಿತಗೊಂಡಾಗ ಅಂದಿನ ಸಚಿವರಾಗಿದ್ದ ದಿ. ಮೆರಾಜುದ್ದಿನ್‌ ಎನ್‌. ಪಟೇಲ್‌ ಅವರು ಮುತುವರ್ಜಿ ವಹಿಸಿ ಕಾರಖಾನೆಯನ್ನು ಪ್ರಾರಂಭಿಸಿದ್ದರು. ಅಂತೆಯೇ ಇಂದಿನ ಸಚಿವ ಪ್ರಭು ಚವ್ಹಾಣ್‌ ಅವರು ಕಾಳಜಿ ವಹಿಸಿ ಬಿಎಸ್‌ಎಸ್‌ಕೆ ಸಕ್ಕರೆ ಕಾರಖಾನೆಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಲಾಯಿತು.
Vijaya Karnataka Web follow the meraj patel to start bssk
ಬಿಎಸ್‌ಎಸ್‌ಕೆ ಆರಂಭಿಸಲು ದಿ.ಮೆರಾಜ್‌ ಪಟೇಲರ ಅನುಸರಿಸಿ


ನಗರದ ರೈತ ಭವನದಲ್ಲಿಈಚೆಗೆ ಕಲ್ಯಾಣ ಕರ್ನಾಟಕ ರೈತ ಸಂಘದ ಜಿಲ್ಲಾಅಧ್ಯಕ್ಷ ನಾಗಶೆಟ್ಟೆಪ್ಪ ಲಂಜವಾಡೆ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಜಂಟಿ ಕೃಷಿ ನಿರ್ದೇಶಕರ ಮೂಲಕ ಸರಕಾರಕ್ಕೆ ಸಲ್ಲಿಸಲಾದ ಮನವಿ ಪತ್ರದಲ್ಲಿಮೇಲಿನ ಬೇಡಿಕೆಯನ್ನೂ ಪ್ರಸ್ತಾಪಿಸಲಾಗಿದೆ.

ರೈತರು ಬೆಳೆದ ಪ್ರತಿ ಟನ್‌ ಕಬ್ಬಿಗೆ 2,500 ರೂ. ನಿಗದಿ ಮಾಡಿ ಹಣ ತಕ್ಷಣ ಪಾವತಿಸಬೇಕು. ರೈತರ ಜಮೀನಿಗೆ ದಿನದ 12 ತಾಸು ನಿರಂತರ ತ್ರಿ ಫೇಸ್‌ ವಿದ್ಯುತ್‌ ನೀಡಬೇಕು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮನ್ನಾ ಮಾಡಿದ ಮಾದರಿಯಲ್ಲೇ ಈಗಲೂ ಎಲ್ಲರೈತರ ಸಾಲ ಮನ್ನಾ ಮಾಡಬೇಕು.

2016-17ನೇ ಸಾಲಿನ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿವಿಮೆ ಹಣ ಪಾವತಿಸಿದ ಹೊಸ ಹತ್ತು ಗ್ರಾಪಂ ವ್ಯಾಪ್ತಿಯ ರೈತರ ವಿಮೆ ಹಣ ಇಂದಿಗೂ ಸಿಕ್ಕಿಲ್ಲ. ತಕ್ಷಣ ವಿಮೆ ಹಣ ರೈತರಿಗೆ ಪಾವತಿಸಬೇಕು ಎಂದು ಕೋರಲಾಗಿದೆ. ತಕ್ಷಣ ಸರಕಾರ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿಈ ಭಾಗದ ಎಲ್ಲನೊಂದ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ರೈತ ಸಂಘದ ಅಧ್ಯಕ್ಷ ನಾಗಶೆಟ್ಟೆಪ್ಪ ಲಂಜವಾಡೆ ಸರಕಾರಕ್ಕೆ ಎಚ್ಚರಿಸಿದ್ದಾರೆ.

ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ವಿಠಲರಾವ್‌ ಮೇತ್ರೆ, ಶಿವಾಜಿರಾವ ಶಿಂಧೆ, ನಾಮದೇವ ತಗರಖೇಡೆ, ಜಿ.ಎಸ್‌.ಬಿರಾದಾರ, ಸುಭಾಷರಾವ್‌ ಇಟಗೆ, ಅಣ್ಣಾರಾವ್‌ ಪಾಟೀಲ್‌ ನಿಂಬೂರ, ವೈಜನಾಥಪ್ಪ ಬುಯ್ಯಾ, ವಿಜಯಕುಮಾರ ಬಾವಗೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ