ಆ್ಯಪ್ನಗರ

ನಾಲ್ವರ ಅಂತಾರಾಜ್ಯ ಜಿಂಕೆ ಬೇಟೆಗಾರರ ಬಂಧನ

ಜಿಂಕೆ ಬೇಟೆಯಾಡಿ ನೆರೆ ರಾಜ್ಯಕ್ಕೆ ಸಾಗಿಸುತ್ತಿದ್ದ ನಾಲ್ಕು ಅಂತಾರಾಜ್ಯ ಜಿಂಕೆ ಬೇಟೆಗಾರರನ್ನು ಬಂಧಿಸುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka 28 Mar 2018, 5:04 pm
ಬಸವಕಲ್ಯಾಣ : ಜಿಂಕೆ ಬೇಟೆಯಾಡಿ ನೆರೆ ರಾಜ್ಯಕ್ಕೆ ಸಾಗಿಸುತ್ತಿದ್ದ ನಾಲ್ಕು ಅಂತಾರಾಜ್ಯ ಜಿಂಕೆ ಬೇಟೆಗಾರರನ್ನು ಬಂಧಿಸುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web four of interracial deer hunter arrests
ನಾಲ್ವರ ಅಂತಾರಾಜ್ಯ ಜಿಂಕೆ ಬೇಟೆಗಾರರ ಬಂಧನ


ಡಾ.ಮುಜಾಹಿದ ಅಲಿಖಾನ ತಂದೆ ಲೇಟ್‌ ಮಹ್ಮದ್‌ ಹಮೀದ್‌ ಅಲಿಖಾನ, ಸೈಯ್ಯದ್‌ ಅಜರ ತಂದೆ ಸೈಯದ ಉಮರ, ಯಾಕೂಬ ತಂದೆ ಯೂಸೂಫ್‌ ಶೇಖ್‌, ಶ್ರೀಕಾಂತ ತಂದೆ ಪ್ರಕಾಶ ಲೋಕಮಣಿ ಬಂಧಿತ ಆರೋಪಿಗಳಾಗಿದ್ದಾರೆ. ಈ ನಾಲ್ವರು ಸೋಮವಾರ ರಾತ್ರಿ ಜಿಂಕೆಗಳ ಬೇಟೆಯಾಡಿ ವಾಪಸ್‌ ಆಗುವಾಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಮಂಗಳವಾರ ನಸುಕಿನ ಜಾವದಲ್ಲಿ ಗಸ್ತಿನಲ್ಲಿದ್ದ ಪಿಎಸ್‌ಐ ಸುನೀಲ ಅನುಮಾನ ಬಂದ ಹಿನ್ನೆಲೆಯಲ್ಲಿ ವಾಹನವೊಂದು ತಪಾಸಣೆ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಹೈದರಾಬಾದ್‌ ನಿವಾಸಿಗಳಾದರೆ, ಒಬ್ಬರು ಹುಮನಾಬಾದ್‌ನವರಾಗಿದ್ದಾರೆ.

ಸೋಮವಾರ ರಾತ್ರಿ ಹುಲಸೂರು ವ್ಯಾಪ್ತಿಯ ಬೇಲೂರು ಹಾಗೂ ಖಂಡಾಳ ಮಧ್ಯೆ ಮೂರು ಜಿಂಕೆಗಳನ್ನು ಬೇಟೆಯಾಡುವ ಮೂಲಕ ಹತ್ಯೆಗೈದು ಜಿಂಕೆಗಳ ತಲೆ, ಮಾಂಸ ಸೇರಿ ಇತರೆ ಭಾಗಗಳು ವಾಹನದಲ್ಲಿ ಹಾಕಿಕೊಂಡು ಬರುವಾಗ ಈ ಆರೋಪಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಆರೋಪಿಗಳು ಮೊದಲು ಜಿಂಕೆ ಇರುವ ಸ್ಥಳಗಳ ಮಾಹಿತಿ ಕಲೆ ಹಾಕುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಅಂಥ ಪ್ರದೇಶಗಳಿಗೆ ಭೇಟಿ ನೀಡಿ ಮೊದಲು ಜಿಂಕೆಗಳ ಮುಖಕ್ಕೆ ಬ್ಯಾಟರಿ ಹಾಕಿ ಅವುಗಳನ್ನು ಪಿಸ್ತೂಲ್‌ನಿಂದ ಕೊಲೆ ಮಾಡಲಾಗುತ್ತಿತ್ತು. ನಂತರ ಜಿಂಕೆಗಳ ಭಾಗಗಳನ್ನು ಬೇರ್ಪಡೆಗೊಳಿಸುತ್ತಿದ್ದರು.

ಬಂಧಿತ ಆರೋಪಿಗಳಿಂದ ಮೂರು ಜಿಂಕೆಯ ತಲೆಗಳು, ಕೊಂಬು ಸೇರಿ ಬೇಟೆಗೆ ಬಳಸುವ ಒಂದು ರೈಫಲ್ಸ್‌ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 21 ಬುಲೆಟ್ಸ್‌ಗಳಲ್ಲಿ 16 ಜೀವಂತ ಗುಂಡುಗಳು ಹಾಗೂ 8 ಚಲಾವಣೆಯಾದ ಗುಂಡುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐ ಸುನೀಲಕುಮಾರ, ಸಿಬ್ಬಂದಿಗಳಾದ ಸುಧಾಕರ, ಶಫೋರ್‍ದ್ದಿನ್‌, ಮಲ್ಲಿಕಾರ್ಜುನ, ರಾಜಕುಮಾರ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ