ಆ್ಯಪ್ನಗರ

ಒಳಚರಂಡಿ ಸಂಪರ್ಕ ಪಡೆದು ಶುಚಿತ್ವಕ್ಕೆ ಸಹಕರಿಸಿ

ನಗರ ನಿವಾಸಿಗಳು ಒಳಚರಂಡಿಯ ಗೃಹ ಸಂಪರ್ಕ ಪಡೆದು ನಗರದಲ್ಲಿ ಶುಚಿತ್ವ ಕಾಪಾಡಲು ಮುಂದಾಗಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಆನಂದ ಎಲ್‌.ಎನ್‌. ತಿಳಿಸಿದರು.

Vijaya Karnataka 31 Dec 2018, 10:25 pm
ಬೀದರ್‌:ನಗರ ನಿವಾಸಿಗಳು ಒಳಚರಂಡಿಯ ಗೃಹ ಸಂಪರ್ಕ ಪಡೆದು ನಗರದಲ್ಲಿ ಶುಚಿತ್ವ ಕಾಪಾಡಲು ಮುಂದಾಗಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಆನಂದ ಎಲ್‌.ಎನ್‌. ತಿಳಿಸಿದರು.
Vijaya Karnataka Web get drainage connectivity and help cleanliness
ಒಳಚರಂಡಿ ಸಂಪರ್ಕ ಪಡೆದು ಶುಚಿತ್ವಕ್ಕೆ ಸಹಕರಿಸಿ


ಬೀದರ್‌ ನಗರ ಸಭೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಈಚೆಗೆ ಬೀದರ್‌ನ ಶಾಸ್ತ್ರಿ ನಗರದ ಉದ್ಯಾನವನದಲ್ಲಿ ನಡೆದ ಅಮೃತ ಯೋಜನೆಯ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರಗಳನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಕೇಂದ್ರ ಸರಕಾರವು ಅಮೃತ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಬೀದರ್‌ ನಗರದಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದು, ಸಾರ್ವಜನಿಕರು ಈ ಒಳಚರಂಡಿಗೆ ಗೃಹ ಸಂಪರ್ಕವನ್ನು ಪಡೆದುಕೊಳ್ಳಬೇಕು ಎಂದು ಕೋರಿದರು.

ಸಾಮಾಜಿಕ ಅಭಿವೃದ್ಧಿ ತಜ್ಞರಾದ ಎಂ.ಜೆ.ದೇವೂರ ಪ್ರಾಸ್ತಾವಿಕ ಮಾತನಾಡಿ, ಅಮೃತ ಯೋಜನೆಯ ಗುರಿ ಮತ್ತು ಉದ್ದೇಶಗಳ ಬಗ್ಗೆ ವಿವರಣೆ ನೀಡಿದರು. ನಗರ ಸಭೆಯ ನಲ್ಮ್‌ ಯೋಜನೆಯ ಸಮುದಾಯ ವ್ಯವಹಾರಗಳ ಅಧಿಕಾರಿ ಮಾರ್ಕ್‌ ಮಾತನಾಡಿ, ಮಹಿಳಾ ಸ್ವಸಹಾಯ ಸಂಘದ ಎಲ್ಲಾ ಸದಸ್ಯರುಗಳು ಅಮೃತ್‌ ಯೋಜನೆಯನ್ನು ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್‌.ಎಸ್‌. ರಾಯಕೋಟಿ, ಸಹಾಯಕ ಅಭಿಯಂತರ ಎಂ.ಡಿ.ಜಾಫರ್‌, ನಗರ ಸಭೆಯ ಅಮೃತ್‌ ಯೋಜನೆಯ ಸಹಾಯಕ ಅಭಿಯಂತರ ಅಮಿರ್‌ ಅಹ್ಮದ್‌, ಗುತ್ತಿಗೆದಾರ ಹರೀಶ, ನಲ್ಮ್‌ ಯೋಜನೆಯ ಶ್ರೀದೇವಿ, ನೆಹರು ಯುವ ಕೇಂದ್ರದ ಸ್ವಯಂ ಸೇವಕರಾದ ರೇಣುಕಾ, ಕಲ್ಲಪ್ಪ, ಅಮೃತ್‌ ಪಿ.ಡಿ.ಎಂ.ಸಿಯ ಬೆಂಬಲ ಅಭಿಯಂತರ ರೇವಣಸಿದ್ದಪ್ಪ ಪಾಟೀಲ್‌, ಗುಣಮಟ್ಟ ಮೇಲ್ವಿಚಾರಕ ಪ್ರದೀಪ ಪಾಟೀಲ್‌ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜಂಬಗಿ ಕಾಲೊನಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಬಳಿಕ ಸಾರ್ವಜನಿಕರೊಂದಿಗೆ ಸಂವಾದ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ