ಆ್ಯಪ್ನಗರ

ಜಿಲ್ಲಾ ಮಟ್ಟದ ಗೋಂಧಳಿ ಸಮ್ಮೇಳನ

ಮಕ್ಕಳಿಗೆ ಶಿಕ್ಷಣ ಮತ್ತು ಸರಕಾರದ ವಿವಿಧ ಯೋಜನೆಗಳ ಲಾಭವನ್ನು ಪರಿಚಯಿಸಿ ಗೋಂಧಳಿ ಸಮುದಾಯದ ಬಡವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ಸಂಘದ ಮುಖ್ಯ ಉದ್ದೇಶ ಎಂದು ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಎಂ. ಜಯರಾಮಯ್ಯ ಹೇಳಿದರು.

Vijaya Karnataka 8 Jul 2019, 5:00 am
ಬಸವಕಲ್ಯಾಣ:ಮಕ್ಕಳಿಗೆ ಶಿಕ್ಷಣ ಮತ್ತು ಸರಕಾರದ ವಿವಿಧ ಯೋಜನೆಗಳ ಲಾಭವನ್ನು ಪರಿಚಯಿಸಿ ಗೋಂಧಳಿ ಸಮುದಾಯದ ಬಡವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ಸಂಘದ ಮುಖ್ಯ ಉದ್ದೇಶ ಎಂದು ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಎಂ. ಜಯರಾಮಯ್ಯ ಹೇಳಿದರು.
Vijaya Karnataka Web get organized to take advantage of government projects
ಜಿಲ್ಲಾ ಮಟ್ಟದ ಗೋಂಧಳಿ ಸಮ್ಮೇಳನ


ನಗರದ ರೈತ ಭವನದಲ್ಲಿ ಭಾನುವಾರ ಮಧ್ಯಾಹ್ನ ಜರುಗಿದ ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಗೋಂಧಳಿ ಸಮ್ಮೇಳನದಲ್ಲಿ ಮಾತನಾಡಿದರು.

ಪ್ರತಿ ತಾಲೂಕಿನಲ್ಲಿ ಗೋಂಧಳಿ ಜನಾಂಗದ 10 ಮಂದಿಯನ್ನೊಳಗೊಂಡ ಸಮಿತಿಯೊಂದನ್ನು ರಚಿಸಬೇಕು. ಈ ಸಮಿತಿಯು ಗೋಂಧಳಿ ಜನಸಂಖ್ಯೆ ಹೆಚ್ಚಿರುವ ತಾಲೂಕು-ಗ್ರಾಮಗಳಿಗೆ ಭೇಟಿ ನೀಡಿ, ಜನಾಂಗದ ಜನರಿಗೋಸ್ಕರ ಇರುವ ಸರಕಾರದಲ್ಲಿನ ವಿವಿಧ ಯೋಜನೆಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು. ಅವುಗಳ ಲಾಭ ಪಡೆದುಕೊಳ್ಳುವಂತೆ ಸಮಾಜದವರಿಗೆ ಸಲಹೆ ನೀಡಬೇಕು ಎಂದು ಅವರು ಹೇಳಿದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20 ಸಾಲಿಗಾಗಿ ಚೈತನ್ಯ, ಅರಿವು ಇಂಥ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ. ಗೋಂಧಳಿ ಸಮಾಜದವರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗೋಂಧಳಿ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮ ವಾಗ್ಮಾರೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಮರಾಠಾ ಸಾಮ್ರಾಜ್ಯದಲ್ಲಿ ಗೋಂಧಳಿ ಜನಾಂಗದವರಿಗೆ ಗೂಢಚಾರದ ಹುದ್ದೆ ನೀಡಿ ಅವರಿಗೆ ವರ್ಷಾಶನ-ಮಾಸಾಶನ ನೀಡಿ ಗೌರವಿಸಿದ್ದರು ಎಂದು ತಿಳಿಸಿದರು.

ಬಸವಕಲ್ಯಾಣದಲ್ಲಿ ಗೋಂಧಳಿ ಸಮುದಾಯ ಭವನ ನಿರ್ಮಿಸಬೇಕು ಸೇರಿದಂತೆ ತಾಲೂಕಿನ ಗೋಂಧಳಿ ಅಲೆಮಾರಿ ಜನಾಂಗದ ಅಭಿವೃದ್ಧಿಗೋಸ್ಕರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅವುಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಇತ್ತೀಚೆಗೆ ತಾಲೂಕಿಗೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಶಾಸಕ ಬಿ.ನಾರಾಯಣರಾವ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪೊ›.ಅಶೋಕ್‌ ವಾಟ್ಕರ್‌, ಗೋಪಾಲರಾವ್‌, ಹಿಂದುಳಿದ ವರ್ಗಗಳ ದೇವರಾಜು ಅರಸು ನಿಗಮದ ವಿಸ್ತರ್ಣಾಧಿಕಾರಿ ಶೇಖರ್‌ ಬಾಬು ಮತ್ತಿತರರು ವೇದಿಯಲ್ಲಿದ್ದರು. ನಾಮದೇವ ಗರೂಡಕರ್‌ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ