ಆ್ಯಪ್ನಗರ

ಕೀಟ ನಿವಾರಣೆಗೆ ಶುಂಠಿ ಅಸ್ತ್ರ

ನಗರದ ಕೃಷಿ ಸಂಶೋಧನಾ ಕ್ರೆಂದ್ರದಲ್ಲಿಶೂನ್ಯ ಬಂಡಾಳ ನೈಸರ್ಗಿಕ ಕೃಷಿ ಯೋಜನೆಯ ಅಡಿಯಲ್ಲಿಈಚೆಗೆ ಹಮ್ಮಿಕೊಂಡಿದ್ದ ಹಿಂಗಾರು ಹಂಗಾಮಿನ ಬೆಳೆಗಳಲ್ಲಿಪೋಷಕಾಂಶ ನಿರ್ವಹಣೆ ಮತ್ತು ಸಸ್ಯ ಸಂರಕ್ಷಣೆಯ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್‌ ಮಾಜಿದ್‌ ಉದ್ಘಾಟಿಸಿದರು.

Vijaya Karnataka 18 Dec 2019, 4:20 pm
ಬೀದರ್‌:ನಗರದ ಕೃಷಿ ಸಂಶೋಧನಾ ಕ್ರೆಂದ್ರದಲ್ಲಿಶೂನ್ಯ ಬಂಡಾಳ ನೈಸರ್ಗಿಕ ಕೃಷಿ ಯೋಜನೆಯ ಅಡಿಯಲ್ಲಿಈಚೆಗೆ ಹಮ್ಮಿಕೊಂಡಿದ್ದ ಹಿಂಗಾರು ಹಂಗಾಮಿನ ಬೆಳೆಗಳಲ್ಲಿಪೋಷಕಾಂಶ ನಿರ್ವಹಣೆ ಮತ್ತು ಸಸ್ಯ ಸಂರಕ್ಷಣೆಯ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನುvijಸಹಾಯಕ ಕೃಷಿ ನಿರ್ದೇಶಕ ಅಬ್ದುಲ್‌ ಮಾಜಿದ್‌ ಉದ್ಘಾಟಿಸಿದರು.
Vijaya Karnataka Web ginger for pest prevention
ಕೀಟ ನಿವಾರಣೆಗೆ ಶುಂಠಿ ಅಸ್ತ್ರ


ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸುನೀಲ್‌ ಕುಲಕರ್ಣಿ ಅಧ್ಯಕ್ಷತೆ ವಹಿಸಿ, ಶೂನ್ಯ ಬಂಡವಾಳ ಯೋಜನೆಯಡಿ ಬರುವ ವಲಯ-1 ರ ರೈತರ ಅಂಕಿ ಸಂಖ್ಯೆಗಳ ಕುರಿತು ವಿವರಿಸಿದರು.

ಬೇಸಾಯಶಾಸ್ತ್ರ ಸಹ ಸಂಶೋಧಕ ಡಾ. ನಾರಾಯಣ ಹೆಬ್ಬಾಳ ಮಾತನಾಡಿ, ಪೋಷಕಾಂಶಗಳ ನಿರ್ವಹಣೆ ಹಾಗೂ ಬೀಜಾಮೃತ, ಜೀವಾಮೃತದ ಉಪಯೋಗದ ಬಗ್ಗೆ ವಿವರಿಸಿದರು.

ಸಸ್ಯ ರೋಗಶಾಸ್ತ್ರ ವಿಭಾಗದ ಸಹ ಸಂಶೋಧಕ ಡಾ. ರಾಜಾ ಚವ್ಹಾಣ್‌ ರೋಗ ನಿರ್ವಹಣೆಯಲ್ಲಿಶುಂಠಿ ಅಸ್ತ್ರ ಹಾಗೂ ಹುಳಿ ಮಜ್ಜಿಗೆಯ ಉಪಯೋಗದ ಬಗ್ಗೆ ವಿವರಿಸಿದರು.

ಕೃಷಿ ಕೀಟಶಾಸ್ತ್ರದ ಸಹ ಸಂಶೋಧಕಿ ಅಮಿತಾಬೇಗಂ ಮಾತನಾಡಿ, ಅಗ್ನಿಅಸ್ತ್ರ, ನೀಮಾಸ್ತ್ರ, ಬ್ರಹ್ಮಾಸ್ತ್ರದ ತಯಾರಿಕೆ ಹಾಗೂ ಕೀಟನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ್‌ ಹವಾಮಾನ ಮುನ್ಸೂಚನೆಯ ಬಗ್ಗೆ ಮಾಹಿತಿ ನೀಡಿದರು.

ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಶೋಭಾರಾಣಿ ಎಂ., ಡಾ. ಜ್ಞಾನದೇವ ಬುಳ್ಳಾ, ರಾಜಕುಮಾರ ಮತ್ತು ವಲಯ-1 ಕೃಷಿ ಅಧಿಕಾರಿಗಳು, ಡಾ. ರವೀಂದ್ರ ಚವ್ಹಾಣ್‌, ಕೈಲಾಸ ಹಾಗೂ ಎಲ್ಲಸಮುದಾಯ ಸಹಾಯಕರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತಿತರರು ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ