ಆ್ಯಪ್ನಗರ

ಗುಜರಾತ್‌ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು

ಗುಜರಾತ್‌ ರಾಜ್ಯದ 9ನೇ ತರಗತಿಯ ಹಿಂದಿ ಪಠ್ಯ ಪುಸ್ತಕದ ಗುರು ಶಿಷ್ಯರ ಸಂಬಂಧ ( 16ನೇ ಪಾಠದಲ್ಲಿ) ಯೇಸು ಕ್ರಿಸ್ತರ ಹೆಸರನ್ನು ಹೈವಾನ ಎಂದು ಕರೆದಿರುವುದು ಭಾರತದ ಕ್ರೈಸ್ತ ಸಮುದಾಯಕ್ಕೆ ತುಂಬ ನೋವುಂಟು ಮಾಡಿದೆ. ಇದು ಖಂಡಿಸಿ ಬುಧವಾರ ಬೀದರ್‌ನಲ್ಲಿ ಕರ್ನಾಟಕ ಕ್ರಿಶ್ಚಿಯನ್‌ ರಕ್ಷಣಾ ವೇದಿಕೆಯಿಂದ ಬೃಹತ್‌ ಪ್ರತಿಭಟನೆ ನಡೆಯಿತು.

Vijaya Karnataka 13 Jun 2019, 3:46 pm
ಬೀದರ್‌ :ಗುಜರಾತ್‌ ರಾಜ್ಯದ 9ನೇ ತರಗತಿಯ ಹಿಂದಿ ಪಠ್ಯ ಪುಸ್ತಕದ ಗುರು ಶಿಷ್ಯರ ಸಂಬಂಧ ( 16ನೇ ಪಾಠದಲ್ಲಿ) ಯೇಸು ಕ್ರಿಸ್ತರ ಹೆಸರನ್ನು ಹೈವಾನ ಎಂದು ಕರೆದಿರುವುದು ಭಾರತದ ಕ್ರೈಸ್ತ ಸಮುದಾಯಕ್ಕೆ ತುಂಬ ನೋವುಂಟು ಮಾಡಿದೆ. ಇದು ಖಂಡಿಸಿ ಬುಧವಾರ ಬೀದರ್‌ನಲ್ಲಿ ಕರ್ನಾಟಕ ಕ್ರಿಶ್ಚಿಯನ್‌ ರಕ್ಷಣಾ ವೇದಿಕೆಯಿಂದ ಬೃಹತ್‌ ಪ್ರತಿಭಟನೆ ನಡೆಯಿತು.
Vijaya Karnataka Web gujarat minister resigns from resignatio
ಗುಜರಾತ್‌ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು


ಈ ಸಂಬಂಧ ಕಳೆದ ವರ್ಷ ಸಹ ಕರ್ನಾಟಕ ಕ್ರಿಶ್ಚಿಯನ್‌ ರಕ್ಷ ಣಾ ವೇದಿಕೆಯ ಜಿಲ್ಲಾ ಘಟಕದಿಂದ ಹೋರಾಟ ಮಾಡಲಾಗಿತ್ತು. ಆದರೆ, ಯಾವುದೇ ತರಹದ ಬದಲಾವಣೆ ಆಗಿಲ್ಲ. ಈಗ ಮತ್ತೆ ಇದೇ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಮುದ್ರಿಸಿದ ಪಠ್ಯ ಪುಸ್ತಕದ ಮಂಡಳಿಯ ಅಧಿಕಾರಿಗಳ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕ್ರೈಸ್ತರು ಪ್ರಪಂಚದಲ್ಲಿ ಸಮಾಧಾನ ಪ್ರಿಯರಾಗಿದ್ದು, ಗುಜರಾತ್‌ ಸರಕಾರ ಯೇಸು ಕ್ರಿಸ್ತನ ಹೆಸರನ್ನು ಕೆಟ್ಟದ್ದಾಗಿ ಚಿತ್ರಿಸಿರುವ ಕುರಿತು ಖಂಡಿಸಿ, ಕೂಡಲೇ ಅಲ್ಲಿನ ಶಿಕ್ಷ ಣ ಮಂತ್ರಿಗಳು ರಾಜೀನಾಮೆ ನೀಡಬೇಕು, ಸಮಸ್ತ ಕ್ರೈಸ್ತ್‌ ಸಮುದಾಯವನ್ನು ಉದ್ದೇಶಿಸಿ ಪಠ್ಯ ಪುಸ್ತಕ ಸಿದ್ಧಪಡಿಸಿದ ಮಂಡಳಿ ಮತ್ತು ಗುಜರಾತ್‌ ಸರಕಾರ ಕ್ಷ ಮೆ ಯಾಚಿಸಬೇಕು. ಒಂದು ವೇಳೆ ಈ ಪಠ್ಯ ಪುಸ್ತಕವನ್ನು 15 ದಿನಗಳಲ್ಲಿ ಹಿಂಪಡೆಯದೇ ಹೋದರೆ, ಅದನ್ನು ಸರಿಪಡಿಸುವ ವರೆಗೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ವಿಭಾಗೀಯ ಅಧ್ಯಕ್ಷ ಹೆಚ್‌.ಎ. ಅಲ್ಬರ್ಟ ಕೋಟೆ, ಜಿಲ್ಲಾಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಜೈಪ್ರಕಾಶ ಸಾಮುವೆಲ್‌, ಪ್ರಮುಖರಾದ ಜೇಮ್ಸ್‌ ಕೋಳಾರ, ರಾಜು ಕೋಳಾರ, ರಾಜಕುಮಾರ ಗಂಗೆನೋರ್‌, ಇಮ್ಯಾನ್ಯುವೇಲ್‌ ಮುಕ್ತಿರಾಮ, ಯೇಶಪ್ಪಾ (ಪಪ್ಪು), ಸುನೀಲ ಬಚನ್‌, ಸುದರ್ಶನ ಪಾಲ್‌ ಮತ್ತು ಇತರೆ ಗಣ್ಯರು ಪಾಲ್ಗೊಂಡಿದ್ದರು.

ಪ್ರತಿಭಟನಾ ರಾರ‍ಯಲಿಯು ಬೀದರ್‌ನ ಅಂಬೇಡ್ಕರ ವೃತ್ತದಿಂದ ಪ್ರಾರಂಭಿಸಿ, ಭಗತ್‌ ಸಿಂಗ್‌ ವೃತ್ತ, ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆಯಿತು. ಈ ವೇಳೆ, ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ