ಆ್ಯಪ್ನಗರ

ಮನೆಗೆ ಕಳ್ಳರು:5.09ಲಕ್ಷ ಮೌಲ್ಯದ ವಸ್ತು ದೋಚಿ ಪರಾರಿ

ತಾಲೂಕಿನ ಡೋಣಗಾಂವ (ಎಂ) ಗ್ರಾಮದ ಮನೆಯೊಂದಕ್ಕೆ ಹಾಡಹಗಲೇ ಕಳ್ಳರು ನುಗ್ಗಿ 5.09ಲಕ್ಷ ಮೌಲ್ಯದ ಚಿನ್ನದ ಆಭರಣ ಸೇರಿದಂತೆ ನಗದು ಹಣ ದೋಚಿರುವ ಪ್ರಕರಣ ನಡೆದಿದೆ.

Vijaya Karnataka 12 Apr 2019, 5:00 am
ಕಮಲನಗರ: ತಾಲೂಕಿನ ಡೋಣಗಾಂವ (ಎಂ) ಗ್ರಾಮದ ಮನೆಯೊಂದಕ್ಕೆ ಹಾಡಹಗಲೇ ಕಳ್ಳರು ನುಗ್ಗಿ 5.09ಲಕ್ಷ ಮೌಲ್ಯದ ಚಿನ್ನದ ಆಭರಣ ಸೇರಿದಂತೆ ನಗದು ಹಣ ದೋಚಿರುವ ಪ್ರಕರಣ ನಡೆದಿದೆ.
Vijaya Karnataka Web home robbers rs 5 09 lakh worth of material robbery
ಮನೆಗೆ ಕಳ್ಳರು:5.09ಲಕ್ಷ ಮೌಲ್ಯದ ವಸ್ತು ದೋಚಿ ಪರಾರಿ


ಗ್ರಾಮದ ಉಜ್ವಲಾ ಶೇಠಿಬಾತುರೆ ಅವರ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿ, ಬುಧವಾರ ಮದ್ಯಾಹ್ನ 12-30ರಿಂದ 2.ಗಂಟೆ ಸುಮಾರಿಗೆ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿರುವ ಅಲ್ಮೇರಾದ ಬೀಗ ತೆಗೆದು ಅಲ್ಲಿರುವ ಚಿನ್ನದ ಆಭರಣಗಳಾದ ಉಂಗುರು, ಕಿವಿಯೋಲೆ, ತಾಳಿಸರ, ಕೈ ಬಳೆ ಸೇರಿದಂತೆ ಒಟ್ಟು 78 ಗ್ರಾಂ ಬಂಗಾರ ಮತ್ತು 2ಲಕ್ಷ ರೂ. ನಗದು ಹಣ ದೋಚಿ ಪರಾರಿಯಾಗಿದ್ದಾರೆ. ಒಟ್ಟು 5.09ಲಕ್ಷ ರೂ.ಮೌಲ್ಯದ ಆಭರಣ ಮತ್ತು ನಗದು ಹಣ ಕಳುವಾಗಿದೆ. ಡಿಎಸ್‌ಪಿ ವೆಂಕನಗೌಡ ಪಾಟೀಲ ಮತ್ತು ಸಿಪಿಐ ದಿಲೀಪ ಸಾಗರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಕೈಬೆರಳು ತಜ್ಞರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ