ಹೋರಾಟ, ಕಷ್ಟವಿದ್ದಲ್ಲೇ ಸಾಧನೆ; ಸ್ವಾಮೀಜಿ
'ಜೀವನ' ಎಂದರೇನು ಎಂಬುವುದಕ್ಕೆ ಮಹಾನ್ ಮಾನವತಾವಾದಿ ಸ್ವಾಮಿ ವಿವೇಕಾನಂದರು 'ಹೋರಾಟ'ದ ವ್ಯಾಖ್ಯಾನ ನೀಡಿದ್ದಾರೆ. ಬದುಕು ಎಂದರೆ ಅದು ಹೋರಾಟವೇ ಆಗಿದೆ. ಎಲ್ಲಿ ಹೋರಾಟ, ಕಷ್ಟ ಇರುತ್ತದೋ ಅಲ್ಲಿಯೇ ಸಾಧನೆ ಸಾಧ್ಯವಾಗುತ್ತದೆ ಎಂದು ಬೀದರ್ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ ತಿಳಿಸಿದರು.
ವಿಕ ಸುದ್ದಿಲೋಕ 19 Dec 2022, 1:58 pm
ಬೀದರ್: 'ಜೀವನ' ಎಂದರೇನು ಎಂಬುವುದಕ್ಕೆ ಮಹಾನ್ ಮಾನವತಾವಾದಿ ಸ್ವಾಮಿ ವಿವೇಕಾನಂದರು 'ಹೋರಾಟ'ದ ವ್ಯಾಖ್ಯಾನ ನೀಡಿದ್ದಾರೆ. ಬದುಕು ಎಂದರೆ ಅದು ಹೋರಾಟವೇ ಆಗಿದೆ. ಎಲ್ಲಿ ಹೋರಾಟ, ಕಷ್ಟ ಇರುತ್ತದೋ ಅಲ್ಲಿಯೇ ಸಾಧನೆ ಸಾಧ್ಯವಾಗುತ್ತದೆ ಎಂದು ಬೀದರ್ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ ತಿಳಿಸಿದರು.
ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ ಅಂಗವಾಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ನಿನ್ನ ನಿರ್ಮಾತೃ ನೀನೇ ಆಗಿರುವೆ. ನೀನು ಯಶಸ್ವಿಯಾದಲ್ಲಿ ನಿನ್ನೆಡೆಗೆ ಪರಮಾತ್ಮ ತನ್ನಿಂತಾನೆ ಬರುತ್ತಾನೆ. ಪ್ರಕೃತಿ ಸಹ ನಿನ್ನೊಟ್ಟಿಗಿರುತ್ತದೆ. ನಿನ್ನಲ್ಲಿರುವ ಶಕ್ತಿ ಜಾಗೃತಗೊಂಡಾಗ ನೀನು ಮಹಾದೇವನಾಗುವೆ. ನಾವು ಬದುಕಿನಲ್ಲಿ ಎಷ್ಟೇ ಬಾರಿ ಸೋತರೂ ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನಮ್ಮಲ್ಲಿರಬೇಕು. ವಿವೇಕಾನಂದರ ಚಿಂತನೆಗಳನ್ನು ಎಲ್ಲ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಮಯ ವ್ಯರ್ಥ ಮಾಡಬಾರದು. ಅಂದಾಗ ಮಾತ್ರ ಸಾಧನೆಯ ಮಾರ್ಗ ತಿಳಿಯುತ್ತದೆ ಎಂದರು.
ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಇರುತ್ತದೆ. ಮೊದಲು ನೀನು ನಿನ್ನನ್ನು ಅರಿತರೆ ಇಡೀ ಜಗತ್ತನ್ನೇ ಗೆಲ್ಲಬಹುದು. ನಿನ್ನ ಮೇಲೆ ಪ್ರಭುತ್ವ ಸಾಧಿಸಿದರೆ ಬೇಕಾದ್ದನ್ನು ಸಾಧಿಸಿ ತೋರಿಸಬಹುದು ಎಂದು ತಿಳಿಸುವ ವಿವೇಕಾನಂದರ ವಿಚಾರಧಾರೆಗಳನ್ನು ಯುವ ಸಮುದಾಯ ಅಧ್ಯಯನ ಮಾಡಬೇಕು. ಕೇವಲ 39 ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿ, ಜಾಗತಿಕವಾಗಿ ಗುರುತಿಸಿಕೊಂಡ ಮಹಾನ್ ಚಿಂತಕ ವಿವೇಕಾಂದರ ಜೀವನಗಾಥೆಯನ್ನು ಪ್ರತಿಯೊಬ್ಬ ಅಧ್ಯಯನ ಮಾಡಬೇಕೆಂದರು.
ವಿದ್ಯಾರ್ಥಿಗಳು ಚಿಂತನೆ, ಅಧ್ಯಯನ, ಧ್ಯಾನ ಮಾಡಿದರೆ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಹುದು. ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಉತ್ತಮ ಪರಿಸರವಿದೆ. ಇಲ್ಲಿ ಸಾಕಷ್ಟು ಪುಸ್ತಕಗಳಿವೆ. ಅವುಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ರಹಿಂ ಖಾನ್ ಮಾತನಾಡಿ, ಇಲ್ಲಿ ಸೇರಿರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಯು ವಿವೇಕಾನಂದರ ಆದರ್ಶಗಳನ್ನು ಅವರ ಜೀವನದ ಸಿದ್ಧಾಂತಗಳನ್ನು ಪಾಲಿಸಿದರೆ ಬದಲಾವಣೆ ಸಾಧ್ಯವಿದೆ ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳಾದ ಕೌಶಿಕಿ ಹಾಗೂ ಸಚಿನ್ ವಿವೇಕಾನಂದರ ಕುರಿತು ಮಾತನಾಡಿದರು. ಏಕಾಗ್ರತೆ, ಆತ್ಮ ವಿಶ್ವಾಸ, ಶ್ರದ್ಧೆ ನಾನಾ ವಿಷಯಗಳ ಕುರಿತು ಸ್ವಾಮೀಜಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬೀದರ್ ಉಪ ವಿಭಾಗದ ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಜ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ, ವಿರೂಪಾಕ್ಷ ಗಾದಗಿ, ವಿಜಯಕುಮಾರ ಸೋನಾರೆ, ಪ್ರಭುಲಿಂಗ ಬೇಲೂರೆ, ವಿಠಲದಾಸ್ ಪ್ಯಾಗೆ, ಮಹೇಶ್ ಗೋರನಾಳಕರ್ ಮತ್ತಿತರರು ಇದ್ದರು.
ಯುವ ಸಪ್ತಾಹ, ಚಿಕ್ಕಪೇಟದಲ್ಲಿಂದು ಕಾರ್ಯಕ್ರಮ
ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ ಅಂಗವಾಗಿ ರೂಪಿಸಿರುವ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಜ.13ರಂದು ಚಿಕ್ಕಪೇಟದ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 11ಕ್ಕೆ ಜನಪದ ಕಲಾವಿದರಿಂದ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಚಿಕ್ಕಪೇಟದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದವರು ಸಂಘಟಿಸಿರುವ ಈ ಕಾರ್ಯಕ್ರಮದಲ್ಲಿ ಜನಪದ ಕಲಾವಿದರ ಬಳಗದವರು ಹಾಗೂ ಇತರರು ಕಾರ್ಯಕ್ರಮ ನಡೆಸಿಕೊಡುವರು. ಜ.14 ಮತ್ತು 15ರಂದು ಕರ್ನಾಟಕ ಕಾಲೇಜಿನಲ್ಲಿ ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ.
ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ ಅಂಗವಾಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ನಿನ್ನ ನಿರ್ಮಾತೃ ನೀನೇ ಆಗಿರುವೆ. ನೀನು ಯಶಸ್ವಿಯಾದಲ್ಲಿ ನಿನ್ನೆಡೆಗೆ ಪರಮಾತ್ಮ ತನ್ನಿಂತಾನೆ ಬರುತ್ತಾನೆ. ಪ್ರಕೃತಿ ಸಹ ನಿನ್ನೊಟ್ಟಿಗಿರುತ್ತದೆ. ನಿನ್ನಲ್ಲಿರುವ ಶಕ್ತಿ ಜಾಗೃತಗೊಂಡಾಗ ನೀನು ಮಹಾದೇವನಾಗುವೆ. ನಾವು ಬದುಕಿನಲ್ಲಿ ಎಷ್ಟೇ ಬಾರಿ ಸೋತರೂ ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನಮ್ಮಲ್ಲಿರಬೇಕು. ವಿವೇಕಾನಂದರ ಚಿಂತನೆಗಳನ್ನು ಎಲ್ಲ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಮಯ ವ್ಯರ್ಥ ಮಾಡಬಾರದು. ಅಂದಾಗ ಮಾತ್ರ ಸಾಧನೆಯ ಮಾರ್ಗ ತಿಳಿಯುತ್ತದೆ ಎಂದರು.
ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಇರುತ್ತದೆ. ಮೊದಲು ನೀನು ನಿನ್ನನ್ನು ಅರಿತರೆ ಇಡೀ ಜಗತ್ತನ್ನೇ ಗೆಲ್ಲಬಹುದು. ನಿನ್ನ ಮೇಲೆ ಪ್ರಭುತ್ವ ಸಾಧಿಸಿದರೆ ಬೇಕಾದ್ದನ್ನು ಸಾಧಿಸಿ ತೋರಿಸಬಹುದು ಎಂದು ತಿಳಿಸುವ ವಿವೇಕಾನಂದರ ವಿಚಾರಧಾರೆಗಳನ್ನು ಯುವ ಸಮುದಾಯ ಅಧ್ಯಯನ ಮಾಡಬೇಕು. ಕೇವಲ 39 ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿ, ಜಾಗತಿಕವಾಗಿ ಗುರುತಿಸಿಕೊಂಡ ಮಹಾನ್ ಚಿಂತಕ ವಿವೇಕಾಂದರ ಜೀವನಗಾಥೆಯನ್ನು ಪ್ರತಿಯೊಬ್ಬ ಅಧ್ಯಯನ ಮಾಡಬೇಕೆಂದರು.
ವಿದ್ಯಾರ್ಥಿಗಳು ಚಿಂತನೆ, ಅಧ್ಯಯನ, ಧ್ಯಾನ ಮಾಡಿದರೆ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಹುದು. ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಉತ್ತಮ ಪರಿಸರವಿದೆ. ಇಲ್ಲಿ ಸಾಕಷ್ಟು ಪುಸ್ತಕಗಳಿವೆ. ಅವುಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ರಹಿಂ ಖಾನ್ ಮಾತನಾಡಿ, ಇಲ್ಲಿ ಸೇರಿರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಯು ವಿವೇಕಾನಂದರ ಆದರ್ಶಗಳನ್ನು ಅವರ ಜೀವನದ ಸಿದ್ಧಾಂತಗಳನ್ನು ಪಾಲಿಸಿದರೆ ಬದಲಾವಣೆ ಸಾಧ್ಯವಿದೆ ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳಾದ ಕೌಶಿಕಿ ಹಾಗೂ ಸಚಿನ್ ವಿವೇಕಾನಂದರ ಕುರಿತು ಮಾತನಾಡಿದರು. ಏಕಾಗ್ರತೆ, ಆತ್ಮ ವಿಶ್ವಾಸ, ಶ್ರದ್ಧೆ ನಾನಾ ವಿಷಯಗಳ ಕುರಿತು ಸ್ವಾಮೀಜಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬೀದರ್ ಉಪ ವಿಭಾಗದ ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಜ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ, ವಿರೂಪಾಕ್ಷ ಗಾದಗಿ, ವಿಜಯಕುಮಾರ ಸೋನಾರೆ, ಪ್ರಭುಲಿಂಗ ಬೇಲೂರೆ, ವಿಠಲದಾಸ್ ಪ್ಯಾಗೆ, ಮಹೇಶ್ ಗೋರನಾಳಕರ್ ಮತ್ತಿತರರು ಇದ್ದರು.
ಯುವ ಸಪ್ತಾಹ, ಚಿಕ್ಕಪೇಟದಲ್ಲಿಂದು ಕಾರ್ಯಕ್ರಮ
ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ ಅಂಗವಾಗಿ ರೂಪಿಸಿರುವ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಜ.13ರಂದು ಚಿಕ್ಕಪೇಟದ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 11ಕ್ಕೆ ಜನಪದ ಕಲಾವಿದರಿಂದ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಚಿಕ್ಕಪೇಟದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದವರು ಸಂಘಟಿಸಿರುವ ಈ ಕಾರ್ಯಕ್ರಮದಲ್ಲಿ ಜನಪದ ಕಲಾವಿದರ ಬಳಗದವರು ಹಾಗೂ ಇತರರು ಕಾರ್ಯಕ್ರಮ ನಡೆಸಿಕೊಡುವರು. ಜ.14 ಮತ್ತು 15ರಂದು ಕರ್ನಾಟಕ ಕಾಲೇಜಿನಲ್ಲಿ ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ.