ಆ್ಯಪ್ನಗರ

ಮೋದಿ 15 ಲಕ್ಷ ನೀಡಿದ್ದರೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದೆ

ಮೋದಿ ಅವರು 15 ಲಕ್ಷ ರೂ. ತಮ್ಮ ಖಾತೆಗೆ ಹಾಕಿದ್ದರೆ ತಾವು ವಿದೇಶ ಪ್ರವಾಸಕ್ಕೆ ಹೋಗಬೇಕು ಎಂದುಕೊಂಡಿದ್ದಾಗಿ ಗೃಹ ಸಚಿವ ಎಂ.ಬಿ. ಪಾಟೀಲ್‌ ಲೇವಡಿ ಮಾಡಿದರು.

Vijaya Karnataka 21 Apr 2019, 5:00 am
ಬೀದರ್‌ :ಮೋದಿ ಅವರು 15 ಲಕ್ಷ ರೂ. ತಮ್ಮ ಖಾತೆಗೆ ಹಾಕಿದ್ದರೆ ತಾವು ವಿದೇಶ ಪ್ರವಾಸಕ್ಕೆ ಹೋಗಬೇಕು ಎಂದುಕೊಂಡಿದ್ದಾಗಿ ಗೃಹ ಸಚಿವ ಎಂ.ಬಿ. ಪಾಟೀಲ್‌ ಲೇವಡಿ ಮಾಡಿದರು.
Vijaya Karnataka Web if modi gave rs 15 lakh he would have gone abroad
ಮೋದಿ 15 ಲಕ್ಷ ನೀಡಿದ್ದರೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದೆ


ಬೀದರ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2014ರಲ್ಲಿ ಖಾತೆಗೆ 15 ಲಕ್ಷ ರೂ. ಹಾಕುವೆ, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ಕನಸನ್ನು ಮೋದಿ ಬಿತ್ತಿದ್ದರು. ನೋಟ್‌ ಬ್ಯಾನ್‌ನಿಂದಾಗಿ 50ಲಕ್ಷಕ್ಕೂ ಅಧಿಕ ಜನರು ಕೆಲಸವಿಲ್ಲದೇ ಬೀದಿಗೆ ಬಿದ್ದರು. ಜಿಎಸ್‌ಟಿ ಸರಿಯಾಗಿ ಅನುಷ್ಠಾನ ಮಾಡಿಲ್ಲ. ಸಾವಿರ ರೂ. ಸಾಲ ಪಡೆದವರಿಗೆ ನೋಟಿಸ್‌ ನೀಡುವ ಸರಕಾರವು, ಕೋಟ್ಯಂತರ ರೂ. ಸಾಲ ಪಡೆದು ಓಡಿ ಹೋದ ಮಲ್ಯ, ನೀರವ್‌ ಮೋದಿಯಂತಹವನ್ನೇಕೆ ಈ ಚೌಕಿದಾರ ಕಾಯಲಿಲ್ಲ ಎಂದು ಪ್ರಶ್ನಿಸಿದರು.

''ಕಾಂಗ್ರೆಸ್‌ ಸರಕಾರವು ರೈತರ ಸಾಲ ಮನ್ನಾ ಮಾಡಿದರೂ, ಬಿಜೆಪಿ ಸರಕಾರ ಮಾಡಲಿಲ್ಲ. ಬಿಜೆಪಿ ಆಡಳಿತದಲ್ಲಿ ಯಾರಿಗೂ ಒಳ್ಳೆಯ ದಿನಗಳು ಬಂದಿಲ್ಲ. 350 ಕೆಜಿ ಆರ್‌ಡಿಎಕ್ಸ್‌ ದೇಶದೊಳಗೆ ಹೇಗೆ ಬಂತು, ಇದನ್ನು ತರುವಾಗ ಚೌಕಿದಾರ ಏನು ಮಾಡುತ್ತಿದ್ದರು ಎಂದು ಕೇಳಿದ ಪಾಟೀಲ್‌, ಫುಲ್ವಾಮಾದಲ್ಲಿ 40 ಸೈನಿಕರ ಸಾವಿಗೆ ಚೌಕಿದಾರನೇ ಕಾರಣ'' ಎಂದು ದೂರಿದರು.

''ಕಾಂಗ್ರೆಸ್‌ ಎಲ್ಲರ ಪರವಾಗಿರುವ ಪಕ್ಷ, ಮೋದಿ ಮುಖ ನೋಡಿ ಮತ ನೀಡಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಕೆಲಸ ಮಾಡದೇ ಹೇಗೆ ಮತ ಕೇಳುತ್ತಾರೆ ? ಈಶ್ವರ್‌ ಖಂಡ್ರೆ ಅವರು ಕ್ರಿಯಾಶೀಲ ವ್ಯಕ್ತಿ. ಅವರನ್ನು ಬೆಂಬಲಿಸಬೇಕು '' ಎಂದು ಎಂ.ಬಿ. ಪಾಟೀಲ್‌ ಮನವಿ ಮಾಡಿದರು.

ಧರ್ಮಕ್ಕೆ, ಚುನಾವಣೆಗೆ ಸಂಬಂಧವಿಲ್ಲ

ಧರ್ಮ, ಜಾತಿ ವೈಯಕ್ತಿಕವಾದದ್ದು. ಈ ಲೋಕಸಭಾ ಚುನಾವಣೆಗೆ ಹಾಗೂ ಲಿಂಗಾಯತ ಧರ್ಮ ಹೋರಾಟಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಎಂ.ಬಿ. ಪಾಟೀಲ್‌ ಸ್ಪಷ್ಟಪಡಿಸಿದರು.

''ನನಗೆ ಲಿಂಗಾಯತ ಧರ್ಮವೇ ಅಸ್ಮಿತೆ, ಚುನಾವಣೆಗೆ ಯಾವುದೇ ಧರ್ಮ ತರಕೂಡದು. ಧರ್ಮ ರಾಜಕಾರಣವನ್ನು ಇಲ್ಲಿಗೆ ನಿಲ್ಲಿಸೋಣ. ಈಗಾಗಲೇ ಸಚಿವ ಡಿ.ಕೆ. ಶಿವಕುಮಾರ ಅವರು ಮಾಧ್ಯಮಗಳಿಗೆ ಈ ಕುರಿತು ತಮ್ಮ ಹೇಳಿಕೆ ನೀಡಿದ್ದಾರೆ'' ಎಂದರು.


ರಾಯಚೂರಿನ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಕುರಿತು ಮುಖ್ಯಮಂತ್ರಿಗಳು ಹಾಗೂ ಡಿಜಿ ಅವರೊಂದಿಗೆ ಮಾತನಾಡಿದ್ದೇನೆ. ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಇದೊಂದು ಹೇಯ ಕೃತ್ಯವಾಗಿದೆ, ತಪ್ಪಿತಸ್ಥರ ಮೇಲೆ ಶಿಕ್ಷೆ ತೆಗೆದುಕೊಳ್ಳದೆ ಬಿಡುವುದಿಲ್ಲ. ನಿರ್ದಾಕ್ಷೀಣ್ಯವಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು.

- ಎಂ.ಬಿ. ಪಾಟೀಲ್‌, ಗೃಹ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ