ಆ್ಯಪ್ನಗರ

ಬಸವಕಲ್ಯಾಣದ ಪ್ರಭಾವಿ ಜೆಡಿಎಸ್‌ ಮುಖಂಡ ಎಚ್‌.ಪಿ. ಸುಬ್ಬಾರೆಡ್ಡಿ ಕಾಂಗ್ರೆಸ್‌ಗೆ ಸೇರ್ಪಡೆ

ಕಾಂಗ್ರೆಸ್‌ಗೆ ಸೇರ್ಪಡೆಯಾದ ಜೆಡಿಎಸ್‌ನ ಎಚ್‌ಪಿ ಸುಬ್ಬಾರೆಡ್ಡಿ, ಯಾವ ವಿಜಯೇಂದ್ರ ಬಂದರೂ ಏನೂ ಆಗುವುದಿಲ್ಲ. ನಾನು ನಮ್ಮ ಅಭ್ಯರ್ಥಿಯನ್ನು ಬಸವಕಲ್ಯಾಣದಲ್ಲಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.

Vijaya Karnataka 18 Nov 2020, 8:35 pm
ಬೆಂಗಳೂರು: ಮುಂಬರುವ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಪ್ರಭಾವಿ ಜೆಡಿಎಸ್‌ ಮುಖಂಡ ಎಚ್‌ಪಿ ಸುಬ್ಬಾರೆಡ್ಡಿ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಶಿರಾ ಹಾಗೂ ಆರ್‌ಆರ್‌ ನಗರ ಉಪ ಚುನಾವಣೆಗಳ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿತ್ತು, ಈಗ ಅದು ಬಸವಕಲ್ಯಾಣದಲ್ಲಿಯೂ ಮುಂದುವರಿದಿದೆ.
Vijaya Karnataka Web HP Subbareddy


ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಸುಬ್ಬಾರೆಡ್ಡಿ ಅವರು ಬುಧವಾರ ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸುಬ್ಬಾರೆಡ್ಡಿ ಅವರು, "ನಾನು ಯಾವುದೇ ಆಕಾಂಕ್ಷೆಯಿಲ್ಲದೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದೇನೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದೇನೆ. 128 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಹಳ್ಳಿಗಳ ಅಭಿವೃದ್ಧಿಗೂ ಹೆಚ್ಚು ಒತ್ತು ಕೊಟ್ಟಿದ್ದೇನೆ. ಯಾವ ವಿಜಯೇಂದ್ರ ಬಂದರೂ ಏನೂ ಆಗುವುದಿಲ್ಲ. ನಾನು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ," ಎಂದು ಹೇಳಿದರು.

ಕೆಆರ್‌ ಪೇಟೆ-ಶಿರಾ ಗೆಲುವು ಬಳಿಕ ಬಸವಕಲ್ಯಾಣಕ್ಕೆ ಲಗ್ಗೆಯಿಟ್ಟ ವಿಜಯೇಂದ್ರ, ಅನುಭವ ಮಂಟಪಕ್ಕೆ ಭೇಟಿ!
ಈಶ್ವರ ಖಂಡ್ರೆ ಅವರು ಮಾತನಾಡಿ, "ಬಸವಕಲ್ಯಾಣದ ಉಪ ಚುನಾವಣೆಯ ಟಿಕೆಟ್‌ ವಿಚಾರ ಪ್ರಸ್ತಾಪಿಸಿ ನಾರಾಯಣ್‌ ರಾವ್‌ ಕುಟುಂಬದ ಜೊತೆ ಮಾತನಾಡುತ್ತೇವೆ. ಅವರ ಒಪ್ಪಿಗೆ ಪಡೆದೇ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ. ಈಗಾಗಲೇ ಹಲವು ಸಭೆಗಳನ್ನು ಅಲ್ಲಿ ಮಾಡಿದ್ದೇವೆ. 28 ರಂದು ಮತ್ತೊಂದು ಸಭೆ ನಡೆಸುತ್ತೇವೆ. ನಾರಾಯಣ್‌ ರಾವ್‌ ಹಲವು ಕಾರ್ಯಕ್ರಮ ಕೊಟ್ಟಿದ್ದಾರೆ. ಕೋವಿಡ್‌/ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಫುಡ್‌ಕಿಟ್‌ ವಿತರಿಸಿದ್ದಾರೆ. ಅನುಭವ ಮಂಟಪಕ್ಕೆ ಅಡಿಪಾಯ ಹಾಕಿದ್ದೇವೆ. ನಾವು ಅಧಿಕಾರದಲ್ಲಿ ಇದ್ದಾಗ ಹೆಚ್ಚಿನ ಅನುದಾನ ಅಲ್ಲಿ ಕೊಟ್ಟಿದ್ದೇವೆ. ನಮ್ಮ ಸಾಧನೆ, ಬಿಜೆಪಿ ವೈಫಲ್ಯ ಜನರ ಮುಂದಿಡುತ್ತೇವೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ