ಆ್ಯಪ್ನಗರ

ಅಂತಾರಾಷ್ಟ್ರೀಯ ಶಿಕ್ಷಣ ಸಮ್ಮೇಳನ ಡಿ. 1 ರಿಂದ

ಇಲ್ಲಿಯ ಶಹಾಪುರ ಗೇಟ್‌ ಬಳಿ ಇರುವ ಶಾಹೀನ್‌ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿಡಿ. 1 ಮತ್ತು 2 ರಂದು ಅಂತಾರಾಷ್ಟ್ರೀಯ ಶಿಕ್ಷಣ ಸಮ್ಮೇಳನ ಆಯೋಜಿಸಲಾಗಿದೆ.

Vijaya Karnataka 30 Nov 2019, 10:39 pm
ಬೀದರ್‌:ಇಲ್ಲಿಯ ಶಹಾಪುರ ಗೇಟ್‌ ಬಳಿ ಇರುವ ಶಾಹೀನ್‌ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿಡಿ. 1 ಮತ್ತು 2 ರಂದು ಅಂತಾರಾಷ್ಟ್ರೀಯ ಶಿಕ್ಷಣ ಸಮ್ಮೇಳನ ಆಯೋಜಿಸಲಾಗಿದೆ. ಸಿಂಗಾಪುರ ಮಾದರಿಯ 21ನೇ ಶತಮಾನದ ಬೋಧನೆ ಹಾಗೂ ಕಲಿಕೆ ತಂತ್ರಗಳು, ವರ್ಗ ಕೋಣೆಗಳಲ್ಲಿಎಸ್‌ಟಿಇಎಂ ಕಲಿಕೆ ಕಾರ್ಯಾಗಾರ, ಶಿಕ್ಷಕ ಶಿಕ್ಷಣದಲ್ಲಿತಂತ್ರಜ್ಞಾನ, ಶೈಕ್ಷಣಿಕ ಪ್ರಗತಿಯಲ್ಲಿಬುದ್ಧಿಮತ್ತೆಯ ಪರಿಣಾಮ, ಅಲ್ಪಸಂಖ್ಯಾತರ ಶಿಕ್ಷಣದ ವಿಷಯಗಳು ಹಾಗೂ ಸವಾಲುಗಳು, ಬಾಲ್ಯದ ಶಿಕ್ಷಣದ ಹೊಸ ಪರಿಕಲ್ಪನೆಗಳು, ಹೊಸ ಶಿಕ್ಷಣ ನೀತಿಯ ಒಳನೋಟಗಳು, ಮದರಸಾ ಶಿಕ್ಷಣದ ಸುಧಾರಣೆಗಳು, ಕರ್ನಾಟಕದ ಶೈಕ್ಷಣಿಕ ಮಾದರಿ, ದೆಹಲಿ ಸರಕಾರದ ಮಾದರಿ ಶಾಲೆಗಳು ಸಮ್ಮೇಳನದ ಚರ್ಚಾ ವಿಷಯಗಳಾಗಿವೆ.
Vijaya Karnataka Web international education conference
ಅಂತಾರಾಷ್ಟ್ರೀಯ ಶಿಕ್ಷಣ ಸಮ್ಮೇಳನ ಡಿ. 1 ರಿಂದ


ಪ್ಯಾಲೆಸ್ಟೆತ್ರೖನ್‌ನ ಡಾ. ವೇಲ್‌ ಅಲ್‌ ಭಟ್ಟರ್ಕಿ, ಮುಂಬೈನ ಹೋಮಿ ಬಾಬಾ ಸೆಂಟರ್‌ ಫಾರ್‌ ಸೈನ್ಸ್‌ ಎಜುಕೇಶನ್‌ನ ಪ್ರೊ. ನಾಗಾರ್ಜುನ ಜಿ, ಸಿಂಗಾಪುರದ ಎಜುಮ್ಯಾಟ್ರಿಕ್ಸ್‌ ನಿರ್ದೇಶಕರಾದ ಜಯಾ ದಾಸ್‌, ನಿರ್ಮಲಾ ಅಯದುರೈ, ಆಸ್ಪ್ರೇಲಿಯಾದ ಗ್ಲೋಬಲ್‌ ಡ್ರೀಮ್ಸ್‌ನ ತರಬೇತುದಾರ ಥಾಮಸ್‌ ಡೆಲಾನಿ, ಮಲೇಶಿಯಾದ ಶಿಕ್ಷಣ ಇಲಾಖೆಯ ಸಲಹೆಗಾರ ಡಾ. ಹಸ್ಸಾನಿ ಮುಹಮ್ಮದ್‌, ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದ ಶೈಕ್ಷಣಿಕ ತಂತ್ರಜ್ಞ ಮುಜಾಹಿದುಲ್‌ ಇಸ್ಲಾಮ್‌.

ಮುಂಬೈನ್‌ ಎಸ್‌ಎನ್‌ಡಿಟಿ ಮಹಿಳಾ ವಿವಿ ಪ್ರೊ. ರೀಟಾ ಸೋನಾವತ್‌, ಹೈದರಾಬಾದ್‌ನ ಮೌಲಾನಾ ಆಜಾದ್‌ ಉರ್ದು ವಿವಿ ಸಂಶೋಧಕಿ ನಜ್ಮಾ ಸುಲ್ತಾನಾ, ಪ್ರೊ. ಎಂಕೆಎಂ ಜಾಫರ್‌, ಆಕ್ಸ್‌ಫರ್ಡ್‌ ಕಾನೂನು ವಿವಿ ಡಿ ಫಿಲ್‌ ಅಭ್ಯರ್ಥಿ ಅಬ್ದುಲ್ಲಾ, ದೆಹಲಿಯ ಎನ್‌ಸಿಇಆರ್‌ಟಿಯ ತಜ್ಞರ ಸಮಿತಿಯ ಸದಸ್ಯ ಡಾ. ಮಹಮ್ಮದ್‌ ಸೈಯೀದುಲ್ಲಾಷರೀಫ್‌, ದೆಹಲಿಯ ಎಸ್‌ಜಿಐನ ವ್ಯವಸ್ಥಾಪಕ ನಿರ್ದೇಶಕ ಕಲೀಮುಲ್‌ ಹಫೀಜ್‌ ಮುಖ್ಯ ಭಾಷಣ ನೀಡಲಿದ್ದಾರೆ. ಭಾರತ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿಪ್ರಬಂಧ ಮಂಡನೆ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ