ಆ್ಯಪ್ನಗರ

ಇಟ್ಟ ಹೆಜ್ಜೆ ಹಿಂದಿಡಲಾರೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಕ್ತಿ ತೋರಿಸಿಕೊಡುವೆ: ಜನಾದರ್ನ ರೆಡ್ಡಿ

Janardhana Reddy in Bidar: ಕಲ್ಯಾಣ ಕಾರ್ನಾಟಕ ಭಾಗದಲ್ಲಿ ತಮ್ಮ ಹೊಸ ಪಕ್ಷವನ್ನು ವಿಸ್ತರಿಸಿಕೊಳ್ಳುತ್ತಿರುವ ಜನಾದರ್ನ ರೆಡ್ಡಿ ಅವರು ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಈಗಾಗಲೇ ಘೋಷಿಸಿದ್ದಾರೆ. ಅವರ ಹೊಸ ಪಕ್ಷದಿಂದಾಗಿ ಬಿಜೆಪಿಗೆ ತಡೆಯಾಗುವ ಸಾಧ್ಯತೆ ಇದ್ದು, ರಾಜಕೀಯ ಕುತೂಹಲಕ್ಕೂ ಕಾರಣವಾಗಿದೆ. ತಾನು ಮಾಡಿರುವ ಪ್ರಯತ್ನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ರಾಜಕೀಯವಾಗಿ ತುಳಿತಕ್ಕೆ ಒಳಗಾಗಿರುವುದಾಗಿ ಸಮಾವೇಶಗಳಲ್ಲಿ ಹೇಳಿಕೊಂಡಿದ್ದಾರೆ.

Edited byಹೇಮಂತ್ ಕುಮಾರ್ ಎಸ್ | Lipi 12 Mar 2023, 11:41 pm

ಹೈಲೈಟ್ಸ್‌:

  • ಅನೇಕ ರಾಜಕಾರಣಿಗಳು ಮಾಡಿರುವ ಕುತಂತ್ರಕ್ಕೆ ನಾನು ಬಲಿಯಾದೆ: ಜನಾರ್ಧನ ರೆಡ್ಡಿ
  • 'ಮುಸ್ಲಿಮರು, ದಲಿತರು ಹೀಗೆ ಎಲ್ಲ ವರ್ಗದವರು ನನ್ನೊಂದಿಗೆ ಬರುತ್ತಿದ್ದಾರೆ'
  • 'ಬೇರೆ ಪಕ್ಷಗಳ ಮುಖಂಡರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ'
  • ಬೀದರ್‌ನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Janardhan reddy in bidar
ಬೀದರ್‌ನಲ್ಲಿ ಜನಾರ್ದನ ರೆಡ್ಡಿ
ಬೀದರ್‌: ''ನಾನು ಈ ನಿರ್ಧಾರ ತೆಗೆದುಕೊಳ್ಳಲು 12 ವರ್ಷ ಸಮಯ ತೆಗೆದುಕೊಂಡಿದ್ದೇನೆ. ಇಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ತೆಗೆದುಕೊಳ್ಳಲಾರೆ. ದೇಶದ ಇತಿಹಾಸದಲ್ಲೇ ಶಾಶ್ವತವಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಕ್ತಿ ಏನು ಎನ್ನುವುದು ತೋರಿಸಿಕೊಡುವೆ'' ಎಂದು ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಗಾಲಿ ಜನಾದರ್ನ ರೆಡ್ಡಿ ಹೇಳಿದರು.
ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾನುವಾರ ಸಂಜೆ ಬೀದರ್‌ಗೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಾದೇಶಿಕ ಪಕ್ಷಗಳು ಬರುತ್ತವೆ, ಹೋಗುತ್ತವೆ. ಅಸ್ತಿತ್ವ ಉಳಿಯುತ್ತದಾ ಎನ್ನುವ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯಲ್ಲ. ನನ್ನ ಶಕ್ತಿ ಏನು ಎನ್ನುವುದನ್ನು ತೋರಿಸುವೆ ಎಂದು ಪುನರುಚ್ಛರಿಸಿದರು.
Gali Janardhana Reddy- ಹೊಸ ಪಕ್ಷ ಕಟ್ಟಿ ಚುನಾವಣೆಗೆ ರೆಡಿಯಾಗುತ್ತಿರುವ ಜನಾರ್ದನ ರೆಡ್ಡಿಗೆ ಹೊಸ ಸಂಕಷ್ಟ; ರೆಡ್ಡಿ ವಿದೇಶಿ ಹೂಡಿಕೆ ವಿವರ ಸಂಗ್ರಹಕ್ಕೆ ಕೋರ್ಟ್‌ ಅಸ್ತು
ಜಾತಿ, ಮತ ಎನ್ನುವ ಬೇಧವಿಲ್ಲದೆ ಮುಸ್ಲಿಮರು, ದಲಿತರು ಹೀಗೆ ಎಲ್ಲ ವರ್ಗದವರು ನನ್ನೊಂದಿಗೆ ಬರುತ್ತಿದ್ದಾರೆ ಎಂದರು. ನಾನು ಸಚಿವ ಶ್ರೀರಾಮಲು ಎಂದಿಗೂ ಒಟ್ಟಿಗೆಯೇ ಇದ್ದೇವೆ. ರಾಜಕೀಯವಾಗಿ ಮಾತ್ರ ನಾನೊಬ್ಬನೇ ಹೋರಾಡುತ್ತಿದ್ದೇನೆ. ನನ್ನೊಂದಿಗೆ ರಾಜ್ಯದ ಲಕ್ಷಾಂತರ ಜನರಿದ್ದಾರೆ ಎಂದರು.

ಶ್ರೀರಾಮುಲು ಅವರೊಂದಿಗೆ ಎಂದಿನ ಸ್ನೇಹವಿದೆ. ಈ ಜನ್ಮದಲ್ಲಿ ಈ ಗೆಳೆತನ ಹೀಗೆಯೇ ಮುಂದುವರೆಯುತ್ತದೆ. ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ನನಗೆ ಗೌರವ ಇದ್ದೇ ಇದೆ. ಅಷ್ಟು ಬಿಟ್ಟರೆ ಈ ಇಬ್ಬರನ್ನೂ ರಾಜಕೀಯಕ್ಕಾಗಿ, ನನ್ನ ಸ್ವಾರ್ಥಕ್ಕಾಗಿ ನಾನು ಬಳಸಿಕೊಳ್ಳಲ್ಲ ಎಂದು ಹೇಳಿದರು.

ನನಗೆ ಈ ವರೆಗೆ ಯಾವುದೇ ಸಮನ್ಸ್ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಏಳಿಗೆಗಾಗಿ, ಈ ಭಾಗದ ಜನರಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಅನ್ಯ ಪಕ್ಷಗಳ ಬಗ್ಗೆ, ಬೇರೆ ಪಕ್ಷಗಳ ಮುಖಂಡರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ. ಎದುರಾಳಿಗಳ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳಲಾರೆ ಎಂದು ತಿಳಿಸಿದರು.
BJP Strategy: ರೆಡ್ಡಿಗೆ ಸೆಡ್ಡು ಹೊಡೆಯಲು ಬಿಜೆಪಿ ತಂತ್ರ: ಮಾ.14ರಂದು ಗಂಗಾವತಿಯಲ್ಲಿ ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಸಮಾವೇಶ
ನನ್ನ ಮುಗಿಸಲು ಕುತಂತ್ರ ಮಾಡಿದರು

2008ರಲ್ಲಿ ದಕ್ಷಿಣ ಭಾರತದಲ್ಲೇ ಬಿಜೆಪಿ ಸರಕಾರ ತಂದವನು ನಾನು. ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಯನ್ನಾಗಿಯೂ ಮಾಡಿದೆವು. ಆ ವೇಳೆ ಸಚಿವನಾಗಿ ಸಾಕಷ್ಟು ಕೆಲಸವನ್ನೂ ನಾನು ಮಾಡಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಅನೇಕ ಅಭಿವೃದ್ಧಿಯ ಕೆಲಸಗಳಾಗಿವೆ. ನನ್ನನ್ನು ಹೀಗೆ ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೇನೆ ಎನ್ನುವ ಭಯ, ಆತಂಕದಲ್ಲಿ ನನ್ನನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡಿದರು ಎಂದು ಜನಾರ್ಧನರೆಡ್ಡಿ ಹೇಳಿದರು.

ಅನೇಕ ರಾಜಕಾರಣಿಗಳು ಮಾಡಿರುವ ಕುತಂತ್ರಕ್ಕೆ ನಾನು ಬಲಿಯಾದೆ ಎಂದರು. ಇದೀಗ 12 ವರ್ಷಗಳ ಬಳಿಕ ಮತ್ತೆ ಜನರ ಎದುರು ಬಂದು ನಿಂತಿದ್ದೇನೆ. ಇದಕ್ಕೆ ದೇವರ ಆಶೀರ್ವಾದವೇ ಕಾರಣ ಎಂದು ತಮ್ಮ ದಶಕದ ಕಷ್ಟದ ದಿನಗಳನ್ನು ಗಾಲಿ ಜನಾದರ್ನ ರೆಡ್ಡಿ ಸ್ಮರಿಸಿದರು.
Gali Janardhana Reddy- ಯಡಿಯೂರಪ್ಪರನ್ನು ಸಿಎಂ ಮಾಡಿದ್ದೇ ನಾನು, ನನ್ನ ಬೆಳವಣಿಗೆ ನೋಡಿ ಕೆಲವರು ಮುಗಿಸೋ ಕೆಲ್ಸ ಮಾಡಿದ್ರು
ಬಸವೇಶ್ವರ ರೈತ ಯೋಜನೆ ಜಾರಿ

ಚಿಟಗುಪ್ಪ: ರಾಜ್ಯದಲ್ಲಿಕೆಕೆಪಿಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿಬಸವೇಶ್ವರ ರೈತ ಯೋಜನೆಯಡಿ ಪ್ರತಿಯೊಬ್ಬ ರೈತರಿಗೂ ಪ್ರತಿ ವರ್ಷ 15 ಸಾವಿರ ನೀಡಲಾಗುವುದು.ಅಲ್ಲದೇ ರೈತರಿಗೆ ದಿನದ 9 ಗಂಟೆ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ,ಅಧ್ಯಕ್ಷ ಗಾಲಿ ಜರ್ನಾದನ ರೆಡ್ಡಿ ಹೇಳಿದರು.

ಬೀದರ್‌ ತಾಲೂಕಿನ ಬಗದಲ್‌ ತಾಂಡಾ ಹೊರ ವಲಯದಲ್ಲಿಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿಮಾತನಾಡಿದ ಅವರು, ಆರೋಗ್ಯ ಯೋಜನೆಯಡಿ ಒಂದು ಸಾವಿರದಿಂದ ಇಪತ್ತು ಲಕ್ಷ ರೂ. ವರೆಗೆ ಎಲ್ಲಾರೀತಿಯ ಉಚಿತ ಚಿಕಿತ್ಸೆ, ರಾಣಿ ಚೆನ್ನಮ್ಮ ಯೋಜನೆಯಡಿ ಪ್ರತಿಯೊಬ್ಬ ಮಹಿಳೆಯರಿಗೆ 2500 ರೂ.,ಸ್ತ್ರಿ ಶಕ್ತಿ ಸಂಘಗಳಿಗೆ 10 ಲಕ್ಷ ರೂ.ಶೂನ್ಯ ಬಡ್ಡಿದರದಲ್ಲಿಸಾಲ ಸೌಲಭ್ಯ, ಎಸ್‌ಸಿ,ಎಸ್‌ಟಿ ಸಮಾಜ ಬಾಂಧವರಿಗೆ ಮನೆ,ಒದನೇ ತರಗತಿಯಿಂದ ಹಿಡಿದು ಪಿಜಿ, ಎಂಬಿಬಿಎಸ್‌ ಯಾವುದೇ ಶಿಕ್ಷಣ ಉಚಿತ ಇತ್ಯಾದಿ ಯೋಜನೆಗಳನ್ನು ನಮ್ಮ ಪಕ್ಷದ ಅಧಿಕಾರಕ್ಕೆ ಬಂದರೆ ಅನುಷ್ಠಾನಕ್ಕೆ ತರಲಾಗುವುದು ಎಂದರು. ಬೀದರ್‌ ದಕ್ಷಿಣ ಕ್ಷೇತ್ರದದಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ