ಆ್ಯಪ್ನಗರ

ವೈಜ್ಞಾನಿಕ ಪರಿಹಾರ ನೀಡಲು ಕಾರಂಜಾ ಸಂತ್ರಸ್ತರ ಮನವಿ

ಕಾರಂಜಾ ಜಲಾಶಯದಲ್ಲಿಭೂಮಿ ಮತ್ತು ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಕಾರಂಜಾ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

Vijaya Karnataka 15 Dec 2019, 9:23 pm
ಬೀದರ್‌:ಕಾರಂಜಾ ಜಲಾಶಯದಲ್ಲಿಭೂಮಿ ಮತ್ತು ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಕಾರಂಜಾ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
Vijaya Karnataka Web karanja victims appeal for scientific relief
ವೈಜ್ಞಾನಿಕ ಪರಿಹಾರ ನೀಡಲು ಕಾರಂಜಾ ಸಂತ್ರಸ್ತರ ಮನವಿ


ಕಾರಂಜಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್‌ ಪಾಟೀಲ್‌ ಹೊಚಕನಳ್ಳಿ, ಪ್ರಧಾನ ಕಾರ್ಯದರ್ಶಿ ನಾಗಶೆಟೆಪ್ಪಾ ಹಚ್ಚಿ ಮಾತನಾಡಿ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿಯಿಂದ ಸಂತ್ರಸ್ತರು ಕಳೆದುಕೊಂಡಿರುವ ಭೂಮಿಗೆ ವೈಜ್ಞಾನಿಕ ದರ ನೀಡುವಂತೆ ಅನೇಕ ಮನವಿ ಸಲ್ಲಿಸಿ ಹೋರಾಟ ನಡೆಸಿದರು ಪ್ರಯೋಜನವಾಗಿಲ್ಲ. ಈ ಕುರಿತು ಮೋದಿ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

2018ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿಸತತವಾಗಿ 72 ದಿನಗಳ ಅಹೋರಾತ್ರಿ ಧರಣಿ ನಡೆಸಿದಾಗ ಇಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಂದು ಧರಣಿ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿ, ಶೀಘ್ರವಾಗಿ ಇತ್ಯರ್ಥಪಡಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು.

ಇದೀಗ ರಾಜ್ಯದಲ್ಲಿಹಾಗೂ ಕೇಂದ್ರದಲ್ಲಿಒಂದೇ ಪಕ್ಷದ ಸರಕಾರವು ಅಸ್ತಿತ್ವದಲ್ಲಿದ್ದು, ರಾಜ್ಯ ಸರಕಾರ ಪರಿಹಾರ ನೀಡಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಹೊಚಕನಳ್ಳಿ ಗ್ರಾಮದ ಕಾರಂಜಾ ಜಲಾನಯನÜ ಪ್ರದೇಶದಲ್ಲಿನಡೆದ ಸಭೆಯಲ್ಲಿಹಿತ ರಕ್ಷಣ ಸಮಿತಿಯ ನಿರ್ದೇಶಕ ವೀರಭದ್ರಪ್ಪ ಉಪ್ಪಿನ ಮಾತನಾಡಿದರು. ಈ ವೇಳೆ ಅರವಿಂದ ಕುಲಕರ್ಣಿ, ಕಲ್ಯಾಣರಾವ್‌, ಸಿದ್ರಾಮಪ್ಪ ಹಳ್ಳಿ, ಪ್ರವೀಣ, ಕರಬಸಪ್ಪ, ಕವಿತಾ ಪಾಟೀಲ್‌, ಸುವರ್ಣಾ, ಓಂಕಾರ, ಚೆನ್ನಶೆಟ್ಟಿ ಪಾಟೀಲ್‌, ರಾಜಕುಮಾರ ಕೋಟೆ, ನಯಿಮುದ್ದಿನ್‌ ಪಟೇಲ್‌, ಬಾಬು, ಪಾಶಾ ಮಹೆಮೂದ್‌, ಇಸಾಕ್‌ಮಿಯಾ, ಭೀಮಣ್ಣಾ ಕೋಳಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ