ಆ್ಯಪ್ನಗರ

ವಿದೇಶದ ಸ್ವಚ್ಛತೆ, ಸ್ವಯಂ ಶಿಸ್ತು ಪಾಲನೆಯಾಗಲಿ

ವಿದೇಶಗಳಿಂದ ನಾವು ಕಲಿಯಬೇಕಿರುವುದು ಬಹಳಷ್ಟಿದೆ. ಭಾರತೀಯರಾದ ನಾವು ಅಲ್ಲಿಗೆ ಹೋದಾಗ ಅಲ್ಲಿನ ಶಿಸ್ತುಗಳನ್ನೆಲ್ಲಾ ಅಳವಡಿಸಿಕೊಳ್ಳುತ್ತೇವೆ. ಆದರೆ, ನಮ್ಮ ದೇಶದಲ್ಲಿ ಮಾತ್ರ ಅದನ್ನೆಲ್ಲ ಮರೆಯುತ್ತೇವೆ. ನಾವೆಲ್ಲರೂ ಸ್ವಯಂ ಶಿಸ್ತು ಅಳವಡಿಸಿಕೊಂಡು ಮುಂದುವರಿದರೆ ಖಂಡಿತಾ ಭಾರತ ಅತ್ಯುತ್ತಮ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ಉಷಾ ಪ್ರಭಾಕರ ನುಡಿದರು.

Vijaya Karnataka 30 May 2019, 5:00 am
ಬೀದರ್‌ :ವಿದೇಶಗಳಿಂದ ನಾವು ಕಲಿಯಬೇಕಿರುವುದು ಬಹಳಷ್ಟಿದೆ. ಭಾರತೀಯರಾದ ನಾವು ಅಲ್ಲಿಗೆ ಹೋದಾಗ ಅಲ್ಲಿನ ಶಿಸ್ತುಗಳನ್ನೆಲ್ಲಾ ಅಳವಡಿಸಿಕೊಳ್ಳುತ್ತೇವೆ. ಆದರೆ, ನಮ್ಮ ದೇಶದಲ್ಲಿ ಮಾತ್ರ ಅದನ್ನೆಲ್ಲ ಮರೆಯುತ್ತೇವೆ. ನಾವೆಲ್ಲರೂ ಸ್ವಯಂ ಶಿಸ್ತು ಅಳವಡಿಸಿಕೊಂಡು ಮುಂದುವರಿದರೆ ಖಂಡಿತಾ ಭಾರತ ಅತ್ಯುತ್ತಮ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ಉಷಾ ಪ್ರಭಾಕರ ನುಡಿದರು.
Vijaya Karnataka Web keep abroad clean and self discipline
ವಿದೇಶದ ಸ್ವಚ್ಛತೆ, ಸ್ವಯಂ ಶಿಸ್ತು ಪಾಲನೆಯಾಗಲಿ


ನೂಪುರ ನೃತ್ಯ ಅಕಾಡೆಮಿಯ ತಂಡವು ವಿದೇಶದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಬಂದ ನಿಮಿತ್ತ ನಡೆದ ಅಭಿನಂದನಾ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ಕಟ್ಟುನಿಟ್ಟಿನ ಗಲ್ಫ್‌ ರಾಷ್ಟ್ರಗಳಲ್ಲಿ ಒಂದಾಗಿರುವ ಬಹರೇನ್‌ ದೇಶದಲ್ಲಿ ಸ್ವಚ್ಛತೆಗೆ ಬಹಳ ಆದ್ಯತೆ ಕೊಡುತ್ತಿದ್ದು, ನಗರವನ್ನು ಸುಂದರವಾಗಿಟ್ಟಿದ್ದಾರೆ. ಪರಿಸರ ರಕ್ಷ ಣೆಗೂ ಪ್ರಾಮುಖ್ಯತೆ ನೀಡುತ್ತಾರೆ ಎಂದರು.

ಬಹರೇನ್‌ನ ಬಸವಜಯಂತಿಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಸ್ವಾಮೀಜಿಗಳ ಜೀವನ ಕಥೆ ಮತ್ತು ಬಸವಣ್ಣನ ವಚನಗಳ ಮೇಲೆ ನೃತ್ಯ ರೂಪಕವನ್ನು ಪ್ರದರ್ಶಿಸಿ ಮರಳಿದ ನೂಪುರ ನೃತ್ಯ ತಂಡದ ನಿರ್ದೇಶಕಿ ಉಷಾಪ್ರಭಾಕರ ಮತ್ತು ರೂಪಕದ ಕಥೆ ಬರೆದ ಲೇಖಕಿ ಜಯಶ್ರೀ ಸುಕಾಲೆಯವರಿಗೆ ಬೀದರ್‌ನ ಸಂಘಸಂಸ್ಥೆಗಳಿಂದ ಸನ್ಮಾನ ನಡೆಯಿತು.

ಕಲಾ ತಂಡವನ್ನು ಸನ್ಮಾನಿಸಿ ಮಾತನಾಡಿದ ಹಿರಿಯ ಸಾಹಿತಿ ಎಂಜಿ ದೇಶಪಾಂಡೆ, ನೃತ್ಯ ಕಲೆಯ ಮೂಲಕ ಬಸವಣ್ಣನವರ ಸಂದೇಶಗಳನ್ನು ಜಗತ್ತಿನಾದ್ಯಂತ ಪಸರಿಸುವ ತಂಡದ ಬೀದರ್‌ನ ಪ್ರತಿಭೆಗಳಿಗೆ ಇನ್ನು ಹೆಚ್ಚಿನ ಶಕ್ತಿ ಸಹಾಯ ತುಂಬಬೇಕಿದೆ ಎಂದರು.

ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಸಾಳೆ ಮಾತನಾಡಿ,ಉಷಾಪ್ರಭಾಕರ ಸಾಹಸ ಮೆಚ್ಚುವಂತಹದು ಎಂದರು.

ಉಪನ್ಯಾಸಕ, ಸಾಹಿತಿ ಶಿವಕುಮಾರ ಕಟ್ಟೆ, ಜಾನಪದ ಪರಿಷತ್ತಿನ ಸದಸ್ಯ ವಿಜಯ ಕುಮಾರ ಸೋನಾರೆ ,ಕನ್ನಡ ಸಂಘಟಕ ವಿರೂಪಾಕ್ಷ ಗಾದಗಿ, ಆಕಾಶವಾಣಿ ಪ್ರತಿನಿಧಿ ಕರಣಕುಮಾರ ಚಂದನ, ಕಲಬುರಗಿ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ರಾಜಕುಮಾರ ಮಾತನಾಡಿದರು.

ಕ್ಷ ಮಾ ರಘುರಾಮ ಉಪಾಧ್ಯಾಯ ಸ್ವರಚಿತ ಕವನ ವಾಚಿಸಿದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಉಮಾ ಆರ್‌. ಭಟ್‌, ಪಾರ್ವತಿ ಸೋನಾರೆ, ಜಗದೇವಿ ತಿಬಶೆಟ್ಟಿ, ಡಾ ಮನೀಷಾ ಕಣಜೀಕರ, ಶಾರದಾ ಶೆಟ್ಟಿ, ಅನಿತಾ ಉದಯ, ಮಮತಾ ಕೋಟ್ಯಾನ್‌, ಮಮಿತಾ, ಪ್ರಫುಲ್ಲಾ ಪ್ರಭು ಮತ್ತು ಶಶಿಕಲಾ ಸೇಂದ್ರೆಯವರು ಕಲಾವಿದರನ್ನು ಸನ್ಮಾನಿಸಿದರು. ಮಹೇಶ ಮಜಗೆ ದಂಪತಿ, ಸಂಗನಾಥ ಬಿರಾದಾರ, ಡಾ.ವೈಶಾಲಿ ಕುಲಕರ್ಣಿ, ವಿಎಚ್‌ಪಿಯ ಲೀಲಾವತಿ ಕುಲಕರ್ಣಿ, ಓಂಕಾರ ಪಾಟೀಲ್‌ ಇದ್ದರು.

ನೂಪುರ ನೃತ್ಯ ಅಕಾಡೆಮಿಯ ಕಾರ್ಯದರ್ಶಿ ಪ್ರಭಾಕರ ಎ ಎಸ್‌., ಸಹಾರ್ದ ನಿರ್ದೇಶಕ ಸುಬ್ರಹಣ್ಯ ಪ್ರಭು ನಿರ್ವಹಿಸಿದರು. ರಘುರಾಮ ಉಪಾಧ್ಯಾಯ ಸ್ವಾಗತಿಸಿದರು. ಬಸವರಾಜ ರುದನೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ