ಆ್ಯಪ್ನಗರ

ರಾಜ್ಯದಲ್ಲಿ ನೆರೆ, ಬೀದರ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ

ರಾಜ್ಯದ ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಅತಿವೃಷ್ಟಿ ಉಂಟಾಗಿದ್ದು, ಹಳ್ಳ, ಕೊಳ್ಳ, ಕೆರೆ, ಕುಂಟೆ, ನದಿ, ಜಲಾಶಯಗಳು ತುಂಬಿ ತುಳುಕುತ್ತಿವೆ. ಆದರೆ, ಗಡಿ ಜಿಲ್ಲೆ ಬೀದರ್‌ನಲ್ಲಿ ಮಾತ್ರ ಮಳೆಯ ಕೊರತೆ ಕಾಡುತ್ತಿದೆ. ಮೋಡ ಬಿತ್ತನೆಗೆ ವ್ಯಾಪಕ ಆಗ್ರಹ ಕೇಳಿ ಬರುತ್ತಿದೆ.

Vijaya Karnataka 18 Aug 2019, 10:21 pm
ಭೀಮರಾವ್‌ ಬುರಾನಪುರ ಬೀದರ್‌ :ರಾಜ್ಯದ ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಅತಿವೃಷ್ಟಿ ಉಂಟಾಗಿದ್ದು, ಹಳ್ಳ, ಕೊಳ್ಳ, ಕೆರೆ, ಕುಂಟೆ, ನದಿ, ಜಲಾಶಯಗಳು ತುಂಬಿ ತುಳುಕುತ್ತಿವೆ. ಆದರೆ, ಗಡಿ ಜಿಲ್ಲೆ ಬೀದರ್‌ನಲ್ಲಿ ಮಾತ್ರ ಮಳೆಯ ಕೊರತೆ ಕಾಡುತ್ತಿದೆ. ಮೋಡ ಬಿತ್ತನೆಗೆ ವ್ಯಾಪಕ ಆಗ್ರಹ ಕೇಳಿ ಬರುತ್ತಿದೆ.
Vijaya Karnataka Web less rain than usual in bidar
ರಾಜ್ಯದಲ್ಲಿ ನೆರೆ, ಬೀದರ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ


ಜಿಲ್ಲೆಯಲ್ಲಿ ಜೂ. 1 ರಿಂದ ಈ ವರೆಗೆ ವಾಡಿಕೆಯ 333.20 ಮಿಮೀ ಮಳೆಯಾಗಬೇಕಿತ್ತು. ಅರ್ಧ ಮಳೆಗಾಲ ಮುಗಿದರೂ ಜಿಲ್ಲೆಯಲ್ಲಿ ಕೇವಲ 240.14 ಮಿಮೀ ಮಳೆಯಾಗಿದ್ದು, ಶೇ. 28 ರಷ್ಟು ಮಳೆಯ ಕೊರತೆ ಕಾಡುತ್ತಿದೆ. ಮೋಡ ಕಟ್ಟಿದರೂ ಗಾಳಿಯಿಂದ ತುಂತುರು ಹನಿ ನೆಲಕ್ಕೆ ಬೀಳುವಷ್ಟರಲ್ಲಿ ಮಾಯವಾಗುತ್ತಿವೆ.

ನದಿ-ಜಲಾಶಯ ಖಾಲಿ:

ಕಳೆದ ವರ್ಷವೂ ವಾಡಿಕೆಯಷ್ಟು ಮಳೆ ಸುರಿದಿರಲಿಲ್ಲ. ಈ ಬಾರಿ ಇನ್ನೂ ವಾಡಿಕೆಯ ಮಳೆ ಬಂದಿಲ್ಲ. ಹೀಗಾಗಿ, ಜಿಲ್ಲೆಯ ಯಾವೊಂದು ಕೆರೆ, ಹಳ್ಳ, ಕೊಳ್ಳ, ನದಿ, ಜಲಾಶಯಗಳಲ್ಲಿ ನೀರೇ ಇಲ್ಲ. ಮಳೆಯಾಗದ ಕಾರಣ ಬಾವಿಗಳಿಗೂ ಹೊಸ ನೀರು ಬಂದಿಲ್ಲ. ಸದ್ಯಕ್ಕೆ ಆಗೊಮ್ಮೆ-ಈಗೊಮ್ಮೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಮುಂಗಾರು ಬೆಳೆಗಳು ಮಾತ್ರ ಚೇತರಿಸುತ್ತಿದ್ದು, ಅಂತರ್ಜಲ ಹೆಚ್ಚುವಷ್ಟು ಮಳೆ ಇನ್ನೂ ಸುರಿಯದಿರುವುದು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ.

ಮಳೆ ಸುರಿಯದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾರಂಜಾ ಜಲಾಶÜಯ, ಚುಳಕಿನಾಲಾ, ಮಾಂಜ್ರಾ ನದಿಗೆ ಇನ್ನೂ ನೀರಿಲ್ಲ. ಕೆರೆಗಳು, ಹಳ್ಳ, ಕೊಳ್ಳಗಳು ಇಂದಿಗೂ ಖಾಲಿ ಹೊಡೆಯುತ್ತಿವೆ. ಹೀಗಾಗಿ, ಮುಂಬರುವ ದಿನಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಈಗಲೇ ಶುರುವಾಗಿದ್ದು, ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.

ಮನೆಗೊಂದು ಬಾವಿ, ಆದರೂ ನೀರಿಲ್ಲ

ನಗರದಲ್ಲಿ ಬಹುತೇಕ ಮನೆಗೊಂದು ಬಾವಿಗಳಿವೆ. ಇಲ್ಲಿನ ಜನತೆ ಬಾವಿಯ ನೀರನ್ನೂ ಆಶ್ರಯಿಸಿದ್ದಾರೆ. ಆದರೆ, ಈ ಬಾರಿ ಮಳೆಯೇ ಇಲ್ಲದ ಕಾರಣ ಬಾವಿಗಳಿಗೂ ನೀರು ಬಂದಿಲ್ಲ. ಬೇಸಿಗೆಯಂತೆ ಈಗ ಅರ್ಧ ಮಳೆಗಾಲದಲ್ಲೂ ಬಾವಿಗಳ ತಳ ತೇಲಿವೆ. ಮುಂದಿನ ದಿನಗಳಲ್ಲಿ ವಾಡಿಕೆಯಷ್ಟು ಅಥವಾ ಅದಕ್ಕೂ ಹೆಚ್ಚಿನ ಮಳೆಯಾದರೆ ಮಾತ್ರ ಬಾವಿಗಳಿಗೆ ನೀರು ಬರುತ್ತದೆ.

ಕಾರಂಜಾದಲ್ಲಿ ಕೇವಲ 1.307 ಟಿಎಂಸಿ ನೀರು

7 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ‌ದ ಕಾರಂಜಾ ಜಲಾಶಯದಲ್ಲಿ ಆಗಸ್ಟ್‌ ತಿಂಗಳಲ್ಲೂ ಕೇವಲ 1.307 ಟಿಎಂಸಿ ಮಾತ್ರ ನೀರು ಸಂಗ್ರಹವಿದೆ. ಇದರಲ್ಲಿ 0.375 ಟಿಎಂಸಿ ಡೆಡ್‌ ಸ್ಟೋರೇಜ್‌ ಇದ್ದು, ಕೇವಲ 0.932 ಬಳಕೆಗೆ ಯೋಗ್ಯವಾದ ನೀರಿದೆ. ನಡು ಮಳೆಗಾಲದಲ್ಲೂ ಜಲಾಶಯ ಭರ್ತಿಯಾಗದ ಕಾರಣ ಕಾರಂಜಾ ಜಲಾಶಯದ ನೀರನ್ನೇ ನೆಚ್ಚಿಕೊಂಡಿರುವ ಬೀದರ್‌ ನಗರ, ಹುಮನಾಬಾದ್‌, ಭಾಲ್ಕಿ, ಚಿಟಗುಪ್ಪ ಪಟ್ಟಣ ಹಾಗೂ ಕೆಲ ಹಳ್ಳಿಗಳ ಜನರು ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಆತಂಕ ಈಗಿನಿಂದಲೇ ಶುರುವಾಗಿದೆ.

ನೆರೆ ಜಿಲ್ಲೆಗಳಲ್ಲಿ ಭಾರಿ ಮಳೆ-ಪ್ರವಾಹ, ಬೀದರ್‌ನಲ್ಲಿ ಮಳೆ ಕೊರತೆ

ಅರ್ಧ ಮಳೆಗಾಲ ಮುಗಿದರೂ ಅಗತ್ಯವಿದ್ದಷ್ಟು ಸುರಿಯದ ಮಳೆ

ಹೊಸ ನೀರು ಕಾಣದ ಕೆರೆ, ಕಟ್ಟೆ, ಬಾವಿ, ಹಳ್ಳ-ಕೊಳ್ಳ, ಜಲಾಶಯ, ನದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ