ಆ್ಯಪ್ನಗರ

ಕಾರಖಾನೆಗಳಿಂದ ಜನತೆಗೆ ತೊಂದರೆಯಾಗದಿರಲಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಕೆ. ಸುಧಾಕರ್‌ ಶನಿವಾರ ಬೀದರ್‌ನ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಾರಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 7 Jul 2019, 3:33 pm
ಬೀದರ್‌:ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಕೆ. ಸುಧಾಕರ್‌ ಶನಿವಾರ ಬೀದರ್‌ನ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಾರಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web let people not be disturbed by factories
ಕಾರಖಾನೆಗಳಿಂದ ಜನತೆಗೆ ತೊಂದರೆಯಾಗದಿರಲಿ


ಸಾಯಿ ಲೈಫ್‌ ಸಾಯಿನ್ಸ್‌ ಇಂಡಸ್ಟ್ರಿ, ಚಂದ್ರ ಲೈಫ್‌ ಸಾಯಿನ್ಸ್‌ ಇಂಡಸ್ಟ್ರಿ, ಸಿಂಥೋ ಚಿರಾಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸೇರಿದಂತೆ ಇನ್ನಿತರ ಕಾರಖಾನೆಗಳಿಗೆ ಭೇಟಿ ನೀಡಿದ ಅವರು, ''ಮಾಲಿನ್ಯವಾಗದಂತೆ, ಪರಿಸರಕ್ಕೆ ಹಾನಿಯಾಗದಂತೆ ಕಾರಖಾನೆಗಳನ್ನು ನಡೆಸಬೇಕು. ತಮ್ಮ ಕಾರಖಾನೆಗಳ ಎಲ್ಲ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸುತ್ತೇನೆ. ಆ ದಾಖಲೆಗಳಲ್ಲಿ ನಿಯಮಗಳ ಉಲ್ಲಂಘನೆ ಮಾಡಿರುವುದು ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು ''ಎಂದು ಎಚ್ಚರಿಸಿದರು.

ಈ ಕಾರಖಾನೆಗಳ ಪ್ರದೇಶದಲ್ಲಿ ವಾಸನೆ ಬರುತ್ತಿದೆ. ನೀರು ಕಲುಷಿತವಾಗಿದೆ. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಸುತ್ತಲಿನ ಗ್ರಾಮಗಳ ಜನರಿಗೆ ಚರ್ಮರೋಗ ಸೇರಿದಂತೆ ಹಲವಾರು ಕಾಯಿಲೆಗಳು ಬರುತ್ತಿವೆ ಎಂದು ಜನರು ದೂರುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ತಾವುಗಳು ಗಮನ ಹರಿಸಬೇಕು ಎಂದು ಎಲ್ಲ ಕಾರಖಾನೆಗಳ ಅಧಿಕಾರಿಗಳಿಗೆ ಸೂಚಿಸಿದರು.

ನಿಮ್ಮಿಂದ ಸುತ್ತಲಿನ ಜನರಿಗೆ ಕೆಲಸ ಸಿಕ್ಕು ಕೆಲವು ಜನರ ಜೀವ ಉಳಿಯುತ್ತದೆ. ಆದರೆ, ಅವರ ಜೀವ ಹೋಗುವ ರೀತಿಯಲ್ಲಿ ತಾವು ಕಾರಖಾನೆಗಳನ್ನು ನಡೆಸಬಾರದು ಎಂದು ಅಧ್ಯಕ್ಷ ರು ಕಾರಖಾನೆಯ ಮಾಲಿಕರಿಗೆ ಇದೇ ವೇಳೆ ತಿಳಿ ಹೇಳಿದರು.

''ಮುಂದಿನ ದಿನಗಳಲ್ಲಿ ತಾವುಗಳು ಏನೇನು ನಿಯಮಗಳನ್ನು ಪಾಲನೆ ಮಾಡುತ್ತೀರಿ? ಹೇಗೆ ಮಾಡುತ್ತೀರಿ? ಎಂಬುದರ ಬಗ್ಗೆ ಬರೆದುಕೊಡಿ. ಅದನ್ನು ಜಿಲ್ಲಾಧಿಕಾರಿಗಳು ಪರಾಮರ್ಶೆ ಮಾಡುತ್ತಾರೆ. ಕಾರಖಾನೆಗಳಿಗೆ ಅನುಮತಿ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ಆನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ'' ಎಂದು ತಿಳಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರಿನ ಅಧ್ಯಕ್ಷ ರ ತಾಂತ್ರಿಕ ಅಧಿಕಾರಿ ಮಹೇಶ್‌, ಬೋರ್ಡ್‌ನ ಹಿರಿಯ ಪರಿಸರ ಅಧಿಕಾರಿ ವೆಂಕಟೇಶ ಶೇಖರ, ಪರಿಸರ ಅಧಿಕಾರಿ ಮಂಜಪ್ಪ ಹಾಗೂ ಆಯಾ ಕಾರಖಾನೆಗಳ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ