ಆ್ಯಪ್ನಗರ

ಬಿಎಸ್‌ವೈ, ಶೆಟ್ಟರ್‌ಗೆ ಲಿಂಗಾಯತದಲ್ಲೇ ಕೊನೆ ಸಂಸ್ಕಾರ: ಮಾತೆ ಮಹಾದೇವಿ

ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಿಂದ ಕೊನೆಗೆ ಸಂಸ್ಕಾರ ನಡೆಯುವುದಿಲ್ಲ, ಲಿಂಗಾಯತದಿಂದಲೇ ಆಗುವುದು ಎಂದು ಲಿಂಗಾಯತ ಧರ್ಮ ಮಹಾಸಭಾದ ಗೌರವಾಧ್ಯಕ್ಷೆ ಡಾ. ಮಾತೆ ಮಹಾದೇವಿ ಹೇಳಿದರು.

Vijaya Karnataka Web 11 Nov 2017, 12:58 pm
ಬೀದರ್: ಬಿಜೆಪಿ ರಾಜ್ಯ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಿಂದ ಕೊನೆಗೆ ಸಂಸ್ಕಾರ ನಡೆಯುವುದಿಲ್ಲ, ಲಿಂಗಾಯತದಿಂದಲೇ ಆಗುವುದು ಎಂದು ಲಿಂಗಾಯತ ಧರ್ಮ ಮಹಾಸಭಾದ ಗೌರವಾಧ್ಯಕ್ಷೆ ಡಾ. ಮಾತೆ ಮಹಾದೇವಿ ಹೇಳಿದರು.
Vijaya Karnataka Web lingayat separate religion says mate mahadevi
ಬಿಎಸ್‌ವೈ, ಶೆಟ್ಟರ್‌ಗೆ ಲಿಂಗಾಯತದಲ್ಲೇ ಕೊನೆ ಸಂಸ್ಕಾರ: ಮಾತೆ ಮಹಾದೇವಿ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರನ್ನು ಲಿಂಗಾಯತ ಹೋರಾಟದಿಂದ ದೂರವಿಟ್ಚಿಲ್ಲ. ಅವರೇ ದೂರವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನ.19 ರಂದು ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ನಡೆಯಲಿದೆ ಎಂದರು.

ವೀರಶೈವ - ಲಿಂಗಾಯತ ಒಮ್ಮತಕ್ಕೆ ಬರಲು ಸಾಧ್ಯವೇ ಇಲ್ಲ ಎಂದ ಅವರು, ಒಮ್ಮತದ ಬದಲು ಬಹುಮತವನ್ನು ನೋಡಿ ಮಾನ್ಯತೆ ನೀಡಬೇಕು ಎಂದು ಸಿಎಂಗೆ ಆಗ್ರಹಿಸಿದರು.

ವೀರಶೈವ - ಲಿಂಗಾಯತ ಇವು ಹಿಂದೂ ಧರ್ಮದಲ್ಲಿನ ಎರಡು ಸಂಪ್ರದಾಯಗಳು ಎಂದಿರುವ ಪೇಜಾವರ ಶ್ರೀಗಳ ನಿಲುವು ಸರಿಯಲ್ಲ ಎಂದೂ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ