ಬೀದರ್ :ಸರಕಾರವು ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಸೇರಿಸುವುದನ್ನು ವಿರೋಧಿಸಿ ಹಾಗೂ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 30 ರಂದು ಬೆಂಗಳೂರ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀದೇವಿ ಚುಡೆ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಿನಿಂದಲು ಅಂಗನವಾಡಿ ಕೇಂದ್ರಗಳಿಗೆ 6 ವರ್ಷದೊಳಗಿನ ಮಕ್ಕಳು ಬರುತ್ತಿದ್ದರು. ಈಗ ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಸೇರಿಸಲು ಸರಕಾರವು ನಿರ್ಧರಿಸಿರುವುದು, ಅಂಗನವಾಡಿ ನೌಕರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಶೀಲಾ ಹತ್ತಿ ಮಾತನಾಡಿ, ಎಲ್ಕೆಜಿ ಹಾಗೂ ಯುಕೆಜಿಯು ಅಂಗನವಾಡಿ ಕೇಂದ್ರಕ್ಕೆ ಸೇರ್ಪಡೆ ಮಾಡಬೇಕು. ಅಂಗನವಾಡಿ ನೌಕರರ ಈಗಿರುವ ಸಂಬಳಕ್ಕಿಂತಲೂ ಇನ್ನು ಹೆಚ್ಚಿನ ಅನುದಾನವನ್ನು ನೀಡಬೇಕು ಎಂಬ ಉದ್ದೇಶದಿಂದ ವಿಧಾನ ಸೌಧ ಎದುರಿಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸಿಐಟಿಯು ಜಿಲ್ಲಾ ಮುಖಂಡ ಆರ್.ಪಿ. ರಾಜು ಮಾತನಾಡಿ, ಮೊದಲಿನಿಂದಲೂ 6 ವರ್ಷದೊಳಗಿನ ಹಾಗೂ 6 ವರ್ಷ ನಂತರದ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಧಿಲಿಧಿಸಿಧಿಕೊಧಿಳ್ಳಧಿಲಾಧಿಗುಧಿತಿಧಿತ್ತು, ಈಗ ಎಲ್ಕೆಜಿ ಮತ್ತು ಯುಕೆಜಿ ಪ್ರಾಥಮಿಕ ಶಾಲೆಗೆ ಸೇರಿಸಿದರೆ, ಅಂಗನವಾಡಿ ಕೇಂದ್ರಗಳು ಮುಚ್ಚುತ್ತವೆ. ಹಾಗೆಯೇ ನೌಕರರ ಎಲ್ಲ ಬೇಡಿಕೆಗಳು ಈಡೇರುವ ತನಕ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶಕುಂತಲಾ ಸೋನಿ, ಕಾರ್ಯದರ್ಶಿ ಸುಜಾತಾ ದಾದಾ, ಖಜಾಂಚಿ ಶಾಂತಾ ಗುಪ್ತಾ, ಭಾಲ್ಕಿ ಕಾರ್ಯದರ್ಶಿ ವಿಜಯಲಕ್ಷ್ಮಿ ಪಾಟೀಲ್, ಹುಮನಾಬಾದ್ನ ಕಾರ್ಯದರ್ಶಿ ಉಷಾ ಗುತ್ತೇದಾರ್, ಅಧ್ಯಕ್ಷೆ ಸುಮಿತ್ರಾ ಜಮಾದಾರ್, ಬಸವಕಲ್ಯಾಣ ಅಧ್ಯಕ್ಷೆ ಜಯಶ್ರೀ, ವಿಜಯ ಲಕ್ಷ್ಮಿ ಹಾಗೂ ಇತರರಿದ್ದರು.
ಅಂಗನವಾಡಿ ನೌಕರರ ಬೇಡಿಕೆಗಳು:
ಅಂಗನವಾಡಿಯಲ್ಲೇ ಎಲ್ಕೆಜಿ, ಯುಕೆಜಿ ಪ್ರಾರಂಭಿಸಿ, ನೌಕರರಿಗೆ ಈ ಕೆಲಸವು ಅಧೀಕೃತವಾಗಿ ವಹಿಸಬೇಕು. ಅಂಗನವಾಡಿ ಕೇಂದ್ರಗಳಿಂದಲೇ ಪ್ರಾಥಮಿಕ ಹಂತದ ಶಿಕ್ಷ ಣ ಪಡೆಯಲು ವರ್ಗಾವಣೆ ಪ್ರಮಾಣಪತ್ರ (ಟಿಸಿ) ವರ್ಗಾಯಿಸುವ ಕ್ರಿಯೆ ಜಾರಿ ಮಾಡಬೇಕು. ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಶಾಸನ ಬದ್ಧ ಕನಿಷ್ಠ ಕೂಲಿ ವೇತನ ನಿಗದಿ ಮಾಡಬೇಕು. ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಿ, ಶಾಲೆಗಳ ಮಾದರಿಯಲ್ಲಿ ನಡೆಸಬೇಕ ಮುಂತಾದ ಬೇಡಿಕೆಗಳನ್ನು ಮಂಡಿಸಲಾಯಿತು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಿನಿಂದಲು ಅಂಗನವಾಡಿ ಕೇಂದ್ರಗಳಿಗೆ 6 ವರ್ಷದೊಳಗಿನ ಮಕ್ಕಳು ಬರುತ್ತಿದ್ದರು. ಈಗ ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಸೇರಿಸಲು ಸರಕಾರವು ನಿರ್ಧರಿಸಿರುವುದು, ಅಂಗನವಾಡಿ ನೌಕರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಶೀಲಾ ಹತ್ತಿ ಮಾತನಾಡಿ, ಎಲ್ಕೆಜಿ ಹಾಗೂ ಯುಕೆಜಿಯು ಅಂಗನವಾಡಿ ಕೇಂದ್ರಕ್ಕೆ ಸೇರ್ಪಡೆ ಮಾಡಬೇಕು. ಅಂಗನವಾಡಿ ನೌಕರರ ಈಗಿರುವ ಸಂಬಳಕ್ಕಿಂತಲೂ ಇನ್ನು ಹೆಚ್ಚಿನ ಅನುದಾನವನ್ನು ನೀಡಬೇಕು ಎಂಬ ಉದ್ದೇಶದಿಂದ ವಿಧಾನ ಸೌಧ ಎದುರಿಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸಿಐಟಿಯು ಜಿಲ್ಲಾ ಮುಖಂಡ ಆರ್.ಪಿ. ರಾಜು ಮಾತನಾಡಿ, ಮೊದಲಿನಿಂದಲೂ 6 ವರ್ಷದೊಳಗಿನ ಹಾಗೂ 6 ವರ್ಷ ನಂತರದ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಧಿಲಿಧಿಸಿಧಿಕೊಧಿಳ್ಳಧಿಲಾಧಿಗುಧಿತಿಧಿತ್ತು, ಈಗ ಎಲ್ಕೆಜಿ ಮತ್ತು ಯುಕೆಜಿ ಪ್ರಾಥಮಿಕ ಶಾಲೆಗೆ ಸೇರಿಸಿದರೆ, ಅಂಗನವಾಡಿ ಕೇಂದ್ರಗಳು ಮುಚ್ಚುತ್ತವೆ. ಹಾಗೆಯೇ ನೌಕರರ ಎಲ್ಲ ಬೇಡಿಕೆಗಳು ಈಡೇರುವ ತನಕ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶಕುಂತಲಾ ಸೋನಿ, ಕಾರ್ಯದರ್ಶಿ ಸುಜಾತಾ ದಾದಾ, ಖಜಾಂಚಿ ಶಾಂತಾ ಗುಪ್ತಾ, ಭಾಲ್ಕಿ ಕಾರ್ಯದರ್ಶಿ ವಿಜಯಲಕ್ಷ್ಮಿ ಪಾಟೀಲ್, ಹುಮನಾಬಾದ್ನ ಕಾರ್ಯದರ್ಶಿ ಉಷಾ ಗುತ್ತೇದಾರ್, ಅಧ್ಯಕ್ಷೆ ಸುಮಿತ್ರಾ ಜಮಾದಾರ್, ಬಸವಕಲ್ಯಾಣ ಅಧ್ಯಕ್ಷೆ ಜಯಶ್ರೀ, ವಿಜಯ ಲಕ್ಷ್ಮಿ ಹಾಗೂ ಇತರರಿದ್ದರು.
ಅಂಗನವಾಡಿ ನೌಕರರ ಬೇಡಿಕೆಗಳು:
ಅಂಗನವಾಡಿಯಲ್ಲೇ ಎಲ್ಕೆಜಿ, ಯುಕೆಜಿ ಪ್ರಾರಂಭಿಸಿ, ನೌಕರರಿಗೆ ಈ ಕೆಲಸವು ಅಧೀಕೃತವಾಗಿ ವಹಿಸಬೇಕು. ಅಂಗನವಾಡಿ ಕೇಂದ್ರಗಳಿಂದಲೇ ಪ್ರಾಥಮಿಕ ಹಂತದ ಶಿಕ್ಷ ಣ ಪಡೆಯಲು ವರ್ಗಾವಣೆ ಪ್ರಮಾಣಪತ್ರ (ಟಿಸಿ) ವರ್ಗಾಯಿಸುವ ಕ್ರಿಯೆ ಜಾರಿ ಮಾಡಬೇಕು. ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಶಾಸನ ಬದ್ಧ ಕನಿಷ್ಠ ಕೂಲಿ ವೇತನ ನಿಗದಿ ಮಾಡಬೇಕು. ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಿ, ಶಾಲೆಗಳ ಮಾದರಿಯಲ್ಲಿ ನಡೆಸಬೇಕ ಮುಂತಾದ ಬೇಡಿಕೆಗಳನ್ನು ಮಂಡಿಸಲಾಯಿತು.