ಆ್ಯಪ್ನಗರ

ಬೀದರ್‌ನಲ್ಲಿ ಸಮಾವೇಶದ ಮೂಲಕ ಲೋಕಸಭಾ ಚುನಾವಣೆಗೆ ರಣ ಕಹಳೆ: ದಿನೇಶ್ ಗುಂಡೂರಾವ್

ಇಲ್ಲಿ ನಡೆಯಲಿರುವ ಜನಧ್ವನಿ ಸಮಾವೇಶ ಹಾಗೂ ರಾಹುಲ್ ಗಾಂಧಿ ಅವರ ಅಭಿನಂದನಾ ಸಮಾರಂಭದ ಮೂಲಕ ಲೋಕಸಭಾ ಚುನಾವಣೆಗೆ ರಣ ಕಹಳೆ ಊದಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

Vijaya Karnataka Web 10 Aug 2018, 3:08 pm
ಬೀದರ್: ಇಲ್ಲಿ ನಡೆಯಲಿರುವ ಜನಧ್ವನಿ ಸಮಾವೇಶ ಹಾಗೂ ರಾಹುಲ್ ಗಾಂಧಿ ಅವರ ಅಭಿನಂದನಾ ಸಮಾರಂಭದ ಮೂಲಕ ಲೋಕಸಭಾ ಚುನಾವಣೆಗೆ ರಣ ಕಹಳೆ ಊದಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
Vijaya Karnataka Web image


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಮಹತ್ವ ಪಡೆದಿದೆ ಎಂದರು. ಕೇಂದ್ರ ಸರಕಾರ ನೀಡಿದ ಮಾತಿನಂತೆ ನಡೆದುಕೊಂಡಿಲ್ಲ. ಉದ್ಯೋಗ, ಕಪ್ಪು ಹಣ ವಾಪಸ್ ತರುವುದು, ಭ್ರಷ್ಟಾಚಾರ ನಿಯಂತ್ರಣ ಹೀಗೆ ಯಾವುದನ್ನೂ ಮೋದಿ ಸರಕಾರ ಮಾಡಿಲ್ಲ ಎಂದು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು, ಆಗಸ್ಟ್ 13 ರಂದು ನಡೆಯುವ ಜನಧ್ವನಿ ಸಮಾವೇಶಕ್ಕೆ 2 ಲಕ್ಷ ಜನರನ್ನು ಸೇರಿಸಲಾಗುತ್ತದೆ. ಒಟ್ಟು ಮೂರು ಗಂಟೆಗಳ ಬೀದರ್ ಕಾರ್ಯಕ್ರಮ ಮುಗಿಸಿಕೊಂಡು ರಾಹುಲ್ ಗಾಂಧಿ ತೆಲಂಗಾಣಕ್ಕೆ ಹೋಗಲಿದ್ದಾರೆ ಎಂದರು .

ಇದಕ್ಕೂ ಮುನ್ನ ಇಲ್ಲಿನ ರಾಯರ ಮಠಕ್ಕೆ ತೆರಳಿ ದರ್ಶನ ಪಡೆದ ದಿನೇಶ್‌ ಗುಂಡೂರಾವ್, ಜನಧ್ವನಿ ಸಮಾವೇಶ ನಡೆಯುವ ನೆಹರೂ ಕ್ರೀಡಾಂಗಣ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ