ಆ್ಯಪ್ನಗರ

ಮಹಾರಾಷ್ಟ್ರ ಮೂಲದ ವ್ಯಕ್ತಿ ಮೃತದೇಹ ಪತ್ತೆ ಕೊಲೆ ಶಂಕೆ

ತಾಲೂಕಿನ ಎಕಂಬಾ ಗ್ರಾಮದ ಬಳಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದ್ದು, ಮೃತನು ಮಹಾರಾಷ್ಟ್ರದ ವಾಗ್ಧರಿ ಗ್ರಾಮದವನು ಎಂದು ಪ್ರಕರಣ ದಾಖಲಾಗಿದೆ.

Vijaya Karnataka 4 Jul 2019, 3:33 pm
ಔರಾದ್‌:ತಾಲೂಕಿನ ಎಕಂಬಾ ಗ್ರಾಮದ ಬಳಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದ್ದು, ಮೃತನು ಮಹಾರಾಷ್ಟ್ರದ ವಾಗ್ಧರಿ ಗ್ರಾಮದವನು ಎಂದು ಪ್ರಕರಣ ದಾಖಲಾಗಿದೆ.
Vijaya Karnataka Web maharashtra man found dead
ಮಹಾರಾಷ್ಟ್ರ ಮೂಲದ ವ್ಯಕ್ತಿ ಮೃತದೇಹ ಪತ್ತೆ ಕೊಲೆ ಶಂಕೆ


ಮಹಾರಾಷ್ಟ್ರದ ದೇವಣಿ ತಾಲೂಕಿನ ವಾಗ್ದರಿ ಗ್ರಾಮದ ಚಂದ್ರಕಾಂತ ನೌಗರೆ ಎಂಬುವವರೆ ಮೃತಪಟ್ಟಿದ್ದು, ಯಾರೋ ಕೊಲೆ ಮಾಡಿ ತಾಲೂಕಿನ ಎಕಂಬಾ ಬಳಿ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

ಚಂದ್ರಕಾಂತ ಕಾಣೆಯಾಗಿರುವ ಕುರಿತು ಕುಟುಂಬದವರು ಎಲ್ಲ ಕಡೆ ಹುಡುಕುತ್ತಿರುವಾಗ ತಾಲೂಕಿನ ಕರಕ್ಯಾಳ ಎಕಂಬಾ ರಸ್ತೆ ಪಕ್ಕದಲ್ಲಿ ಸಿಕ್ಕ ಮೃತದೇಹ ತನ್ನ ತಂದೆಯದೇ ಎಂದು ಗುರುತಿಸಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ. ಪಾಟೀಲ, ಡಿವೈಎಸ್‌ಪಿ ಯಂಕನಗೌಡ ಪಾಟೀಲ, ಸಿಪಿಐ ರಮೇಶಕುಮಾರ ಮೈಲೂರಕರ್‌ ಪರಿಶೀಲನೆ ನಡೆಸಿದ್ದು , ಈ ಕುರಿತು ಮೃತನ ಮಗ ಪ್ರದೀಪ ನೀಡಿದ ದೂರಿನ ಮೇರೆಗೆ ಔರಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ