ಆ್ಯಪ್ನಗರ

ಕೆಎಂಎಫ್‌ಗೆ ಮಾರುತಿ ಕಾಶಂಪುರ ಅವಿರೋಧ ಆಯ್ಕೆ

ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್‌)ದ ನಿರ್ದೇಶಕರಾಗಿ ಜಿಲ್ಲೆಯ ಮಾರುತಿ ಕಾಶಂಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾರುತಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪುರ ಅವರ ಕಿರಿಯ ಸಹೋದರರಾಗಿದ್ದಾರೆ.

Vijaya Karnataka 14 Jun 2019, 9:36 pm
ಬೀದರ್‌ :ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್‌)ದ ನಿರ್ದೇಶಕರಾಗಿ ಜಿಲ್ಲೆಯ ಮಾರುತಿ ಕಾಶಂಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾರುತಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪುರ ಅವರ ಕಿರಿಯ ಸಹೋದರರಾಗಿದ್ದಾರೆ.
Vijaya Karnataka Web maruti kashmir unanimous choice for kmf
ಕೆಎಂಎಫ್‌ಗೆ ಮಾರುತಿ ಕಾಶಂಪುರ ಅವಿರೋಧ ಆಯ್ಕೆ

ಮಾರುತಿ ಅವರು ಮೂರು ಅವಧಿಗೆ ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇದೀಗ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ಉಂಟು ಮಾಡಿದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ್‌ ಸೋಲಾಪುರ ತಿಳಿಸಿದ್ದಾರೆ.

ಕರ್ನಾಟಕ ಹಾಲು ಮಹಾ ಮಂಡಳದ ನೂತನ ನಿರ್ದೇಶಕ ಮಾರುತಿ ಕಾಶಂಪುರ ಅವರನ್ನು ಕಲಬುರಗಿಯ ಬೀದರ್‌- ಕಲಬುರ್ಗಿ- ಯಾದಗಿರಿ ಹಾಲು ಒಕ್ಕೂಟದ ಕಚೇರಿಯಲ್ಲಿ ಮಂಗಳವಾರ ಸನ್ಮಾನಿಸಲಾಯಿತು.

ಜೆಡಿಎಸ್‌ ಬೀದರ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ್‌ ಸೋಲಾಪುರ ,ಒಕ್ಕೂಟದ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ಭೀಮರಾವ್‌ ಬಳತೆ, ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಚಂದ್ರಶೇಖರ ನಿಟ್ಟೂರೆ, ಮಾಜಿ ಸದಸ್ಯ ಶ್ರೀಪಾದ ನಿಟ್ಟೂರಕರ್‌, ಸಂಗಪ್ಪ ಪಾಟೀಲ್‌ ರೇಕುಳಗಿ, ಕುಶಾಲ ಗೌರಶೆಟ್ಟಿ, ನಾಗಭೂಷಣ ಕಮಠಾಣೆ, ಶಾಮರಾವ್‌ ಸುಲಗುಂಟೆ, ವಿಜಯಕುಮಾರ ಕುಲಕರ್ಣಿ, ಅಭಿ ಕಾಳೆ,ಅವಿನಾಶ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ