ಆ್ಯಪ್ನಗರ

ಬೀದರ್: ಭೀಕರ ಅಪಘಾತ, ಪಂಕ್ಚರ್ ಹಾಕುತ್ತಿದ್ದವರ ಪ್ರಾಣ ತೆಗೆದ ಲಾರಿ

ಬೀದರ್ ನಲ್ಲಿ ಭೀಕರ ಅಪಘಾತವಾಗಿದೆ. ಪಂಕ್ಚರ್ ಹಾಕುತ್ತಿದ್ದವರ ಪ್ರಾಣವನ್ನು ಅಪರಿಚಿತ ಲಾರಿಯೊಂದು ತೆಗೆದಿದೆ. ಮಧ್ಯರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Vijaya Karnataka Web 22 Jan 2020, 11:42 am
ಬೀದರ್: ರಾಷ್ಟ್ರೀಯ ಹೆದ್ದಾರಿ 65ರ ಮೀನಕೇರಾ ಕ್ರಾಸ್ ಮೇಲ್ಸೇತುವೆ ಮೇಲೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂರು ,ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
Vijaya Karnataka Web bidar accident


ಮೃತ ದುರ್ದೈವಿಗಳನ್ನು ಚಾಂಗಲೇರಾ ಗ್ರಾಮದ ಅನ್ಸರ್ (24), ಸಲಗರ ಬಸಂತಪುರದ ಇಸ್ಮಾಯಿಲ್ (25), ರಾಮಶೆಟ್ಟಿ, ತಾಂಡಾದ ವಿಜಯಕುಮಾರ (32) ಎಂದು ಗರುತಿಸಲಾಗಿದೆ. ಮೃತರು ಗೂಡ್ಸ್ ಕ್ಯಾರಿಯರ್ ನಲ್ಲಿ ಈರುಳ್ಳಿ ತುಂಬಿಕೊಂಡು ಹೈದರಾಬಾದ್ ಗೆ ಹೊರಟಿದ್ದರು ಎಂದು ತಿಳಿದುಬಂದಿದೆ.

ಗೂಡ್ಸ್ ವಾಹನದ ಟೈರ್ ಪಂಚರ್ ಆದ ಹಿನ್ನೆಲೆಯಲ್ಲಿ ಟೈರ್ ಬಿಚ್ಚಿ ಬೇರೆ ಟೈರ್ ಕೂಡಿಸುವ ಸಮಯದಲ್ಲಿ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದು ಈ ದುರಂತ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ