ಆ್ಯಪ್ನಗರ

ಬಿಜೆಪಿ ಜಿಲ್ಲಾ ಕಚೇರಿಗೆ ಸಚಿವ ಪ್ರಭು ಇಂದು

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು ಆ. 29ರ ಬೆಳಗ್ಗೆ 10.30ಕ್ಕೆ ಬೀದರ್‌ ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡುವರು. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಚವ್ಹಾಣ್‌ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಜನತೆ ಸಂಕಷ್ಟದಲ್ಲಿರುವುದರಿಂದ ಪಕ್ಷದ ಕಾರ‍್ಯಕರ್ತರು, ಅಭಿಮಾನಿಗಳು ಯಾರೂ ಹಾರ- ತುರಾಯಿಗಳನ್ನು ತರಬಾರದು. ಹಾರ- ತುರಾಯಿ ರಹಿತವಾಗಿ ಅಭಿನಂದಿಸಬಹುದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

Vijaya Karnataka 29 Aug 2019, 5:00 am
ಬೀದರ್‌ :ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು ಆ. 29ರ ಬೆಳಗ್ಗೆ 10.30ಕ್ಕೆ ಬೀದರ್‌ ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡುವರು. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಚವ್ಹಾಣ್‌ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಜನತೆ ಸಂಕಷ್ಟದಲ್ಲಿರುವುದರಿಂದ ಪಕ್ಷದ ಕಾರ‍್ಯಕರ್ತರು, ಅಭಿಮಾನಿಗಳು ಯಾರೂ ಹಾರ- ತುರಾಯಿಗಳನ್ನು ತರಬಾರದು. ಹಾರ- ತುರಾಯಿ ರಹಿತವಾಗಿ ಅಭಿನಂದಿಸಬಹುದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
Vijaya Karnataka Web minister prabhu to bjp district office today
ಬಿಜೆಪಿ ಜಿಲ್ಲಾ ಕಚೇರಿಗೆ ಸಚಿವ ಪ್ರಭು ಇಂದು


ಪಕ್ಷದ ಕಚೇರಿಯಲ್ಲಿ ನಡೆಯುವ ಸಭೆಯ ಅಧ್ಯಕ್ಷ ತೆಯನ್ನು ಜಿಲ್ಲಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ವಹಿಸುವರು. ಸಭೆಯಲ್ಲಿ ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ, ಮಾಜಿ ಶಾಸಕರಾದ ಸುಭಾಷ ಕಲ್ಲೂರು, ರಾಜೇಂದ್ರ ವರ್ಮಾ, ಪಕ್ಷ ದ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಡಿ.ಕೆ. ಸಿದ್ರಾಮ್‌, ಪದ್ಮಾಕರ ಪಾಟೀಲ್‌, ಸಂಜಯಪಟವಾರಿ ಇರುವರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾವ ಕಾರಬಾರಿ, ಜಯಕುಮಾರ ಕಾಂಗೆ, ಈಶ್ವರಸಿಂಗ್‌ ಠಾಕೂರ್‌, ಸೋಮನಾಥ ಪಾಟೀಲ್‌ ಉಪಸ್ಥಿತರಿರುವರು. ಸಭೆಗೆ ಬರುವ ಎಲ್ಲರೂ ರಾಜ್ಯದ ಜನತೆ ಸಂಕಷ್ಟದಲ್ಲಿರುವುದರಿಂದ ಯಾರೂ ಹಾರ ತುರಾಯಿಗಳನ್ನು ಹಾಕಬಾರದೆಂದು ತೀರ್ಮಾನಿಸಲಾಗಿದೆ. ಹಾರ ತುರಾಯಿ ರಹಿತವಾಗಿ ಆಗಮಿಸಿ ಅಭಿನಂದಿಸಲು ಅವಕಾಶವಿದೆ. ಇದಾದ ಬಳಿಕ ಸಚಿವರು ಭಾಲ್ಕಿಗೆ ತೆರಳಿ ನಂತರ ಔರಾದರ್‌ಗೆ ಪ್ರಯಾಣ ಬೆಳೆಸುವರು.

ಹೀಗಾಗಿ, ಪಕ್ಷ ದ ಜಿಲ್ಲಾ ಪದಾಧಿಕಾರಿಗಳು, ವಿವಿಧ ಮಂಡಳಿಯ ಪದಾಧಿಕಾರಿಗಳು, ವಿವಿಧ ಮೋರ್ಚಾದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ಸಮನ್ವಯ ಸಮಿತಿಯ ಸದಸ್ಯರು, ಜಿಲ್ಲಾ ಪಂಚಾಯಿತಿ ಹಾಗೂ ಇನ್ನಿತರ ಚುನಾಯಿತ ಪ್ರತಿನಿಧಿಗಳು, ಪಕ್ಷ ದ ಅಭಿಮಾನಿಗಳು, ವಿವಿಧ ಸಂಘ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಗೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ