ಆ್ಯಪ್ನಗರ

ಗ್ರಾಮವಾಸ್ತವ್ಯ :ಉಜಳಂಬಕ್ಕೆ ಶಾಸಕ,ಎಸಿ ಭೇಟಿ

ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಜುಲೈ 5ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಿ.ನಾರಾ ಯಣರಾವ, ಬಸವಕಲ್ಯಾಣ ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ್‌ ಗಂಗವಾರ್‌ ಅವರ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Vijaya Karnataka 5 Jun 2019, 7:49 pm
ಬಸವಕಲ್ಯಾಣ:ತಾಲೂಕಿನ ಉಜಳಂಬ ಗ್ರಾಮದಲ್ಲಿ ಜುಲೈ 5ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಿ.ನಾರಾ ಯಣರಾವ, ಬಸವಕಲ್ಯಾಣ ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ್‌ ಗಂಗವಾರ್‌ ಅವರ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
Vijaya Karnataka Web mla ac visit and inspection to ujalamba
ಗ್ರಾಮವಾಸ್ತವ್ಯ :ಉಜಳಂಬಕ್ಕೆ ಶಾಸಕ,ಎಸಿ ಭೇಟಿ

ಶಿಥಿಲಾವಸ್ಥೆಯಲ್ಲಿರುವ ನಮ್ಮೂರ ಕ್ಲಸ್ಟರ್‌ ಮಾದರಿಯ ಪ್ರಾಥಮಿಕ ಶಾಲೆಯ ಕಟ್ಟಡ ವೀಕ್ಷಿಸಿದ ತಂಡ ಅನಂತರ ಉಜಳಂಬ ಪ್ರೌಢಶಾಲೆ, ಗ್ರಾಮ ಪಂಚಾಯಿತಿ, ಬಿಸಿಎಂ ವಸತಿ ನಿಲಯ ಮತ್ತು ನೂತನ ರಾಜೀವ್‌ ಗಾಂಧಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿತು.ಬಳಿಕ ಗ್ರಾಮದ ಹನುಮಾನ ಮಂದಿರದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಭಾಷಣ ಮಾಡಲು ಸೂಕ್ತ ಸ್ಥಳ ಯಾವುದು? ಮತ್ತು ಅವರ ವಾಸ್ತವ್ಯಕ್ಕೆ ಯಾವ ಕಟ್ಟಡ ಸೂಕ್ತ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳ ತಂಡ ಉಜಳಂಬ ಗ್ರಾಮಕ್ಕೆ ಮಂಗಳವಾರ ನೀಡಿದ ಮೊದಲ ಭೇಟಿ ಮತ್ತು ಅಲ್ಲಿ ನಡೆಸಿದ ಪ್ರಾಥಮಿಕ ಸಭೆ ಇದಾಗಿತ್ತು.

ತಾಪಂ ಇಒ ಮಡೋಳಪ್ಪ ಪಿಎಸ್‌, ತಾಪಂ ವ್ಯವಸ್ಥಾಪಕ ಜಯಪ್ರಕಾಶ್‌ ಚವಾಣ, ತಾಲೂಕಿನ ಜೇಸ್ಕಾಂ ಎಇಇ ಗಣಪತಿ ಮೈನಾಳೆ, ಸುರೇಶ್‌ ಮೋರೆ, ಮಂಠಾಳ ಗ್ರಾಪಂ ಪಿಡಿಒ ಗುರುಶಾಂತ್‌ ಬಿರಾದಾರ, ಗ್ರಾಪಂ ಅಧ್ಯಕ್ಷೆ ಶೋಭಾ ಗಾವ್ಡೆ, ಗ್ರಾಪಂ ಸದಸ್ಯ ಮಹೇಶ್‌ ಪಾಟೀಲ್‌, ಮಂಠಾಳ ಪೊಲೀಸ್‌ ಠಾಣೆಯ ಎಎಸ್‌ಐ ಶಿವರಾಜ ರಾಂಪೂರೆ ಉಜಳಂಬ ಪ್ರಾಥಮಿಕ ಶಾಲೆ ಮುಖ್ಯಗುರು ಸತೀಷ್‌ ಕಾರಬಾರಿ, ಪ್ರೌಢಶಾಲೆ ಮುಖ್ಯಗುರು ಮಂಜುನಾಥ ಸೇರಿ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ